ಆ್ಯಪ್ನಗರ

ಗೋ ಹತ್ಯೆ ವಿಷಯ ಪ್ರಸ್ತಾಪಿಸಿದ ಮುಲಾಯಂ ಸಿಂಗ್ ಯಾದವ್

ಕೇಸರಿ ಪರಿವಾರಕ್ಕೆ ಅಪ್ಯಾಯಮಾನವಾದ 'ಗೋ ಹತ್ಯೆ ನಿಷೇಧ'ಕ್ಕೆ ಬೆಂಬಲ ವ್ಯಕ್ತಪಡಿಸಿ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಲೋಕಸಭೆಯಲ್ಲಿ ಪ್ರಸ್ತಾಪಿಸಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಯಿತು.

ಏಜೆನ್ಸೀಸ್ 10 May 2016, 6:08 pm
ಹೊಸದಿಲ್ಲಿ: ಕೇಸರಿ ಪರಿವಾರಕ್ಕೆ ಅಪ್ಯಾಯಮಾನವಾದ 'ಗೋ ಹತ್ಯೆ ನಿಷೇಧ'ಕ್ಕೆ ಬೆಂಬಲ ವ್ಯಕ್ತಪಡಿಸಿ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಲೋಕಸಭೆಯಲ್ಲಿ ಪ್ರಸ್ತಾಪಿಸಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಯಿತು.
Vijaya Karnataka Web mulayam raises issue of cow slaughter in lok sabha
ಗೋ ಹತ್ಯೆ ವಿಷಯ ಪ್ರಸ್ತಾಪಿಸಿದ ಮುಲಾಯಂ ಸಿಂಗ್ ಯಾದವ್


ನಶಿಸುತ್ತಿರುವ ಗೋ ಸಂತಿತಿ ಬಗ್ಗೆ ಪ್ರಶ್ನಾ ಅವಧಿಯಲ್ಲಿ ವಿಷಾದ ವ್ಯಕ್ತಪಡಿಸಿರುವ ಸಿಂಗ್, 'ಜನರು ಗೋವನ್ನು ಕದ್ದು, ಕತ್ತರಿಸಿ ಅಮೆರಿಕದಲ್ಲಿ ಮಾರುತ್ತಿದ್ದಾರೆ. ಇದರಿಂದ ಸಂತತಿ ನಶಿಸುತ್ತಿದೆ. ನಾನೇ 1600 ಆಕಳುಗಳನ್ನು ಸಾಕಿರುವೆ,' ಎಂದರು.

ಆದರೆ, ಸ್ಪೀಕರ್ ಸುಮಿತ್ರಾ ಮಹಾಜನ್ ಮತ್ತು ಯಾದವ್ ಪಕ್ಕವೇ ಕುಳಿತಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮೇವಿಗೆ ಸಂಬಂಧಿಸಿದ ಪ್ರಶ್ನೆ ಮುಗಿದಿದೆ ಎಂಬುದನ್ನು ಯಾದವ್‌ಗೆ ನೆನಪಿಸಿದರು.

ಪ್ರಶ್ನಾ ಅವಧಿಯಲ್ಲಿ ಮೊದಲಿಗೆ ಮೇವಿನ ವಿಮೆ ಬಗ್ಗೆ ಹಾಗೂ ನಂತರದ ಪ್ರಶ್ನೆಯನ್ನು ಧಾನ್ಯಗಳ ಕೊರತೆಗೆ ಸಂಬಂಧಿಸಿದಂತೆ ಕೇಳಲಾಗಿತ್ತು.

ಯಾದವ್ ಎತ್ತಿರುವ ಈ ವಿಷಯಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ