ಮುಂಬಯಿ: ಅಗ್ನಿ ಮತ್ತು ಮಳೆಯ ಸರಣಿ ಅವಘಡಗಳಿಗೆ ಸಾಕ್ಷಿಯಾಗುತ್ತಿರುವ ಮುಂಬಯಿ ಮಹಾನಗರದಲ್ಲಿ ಸೋಮವಾರ ಮತ್ತೊಂದು ಅನಾಹುತ ಘಟಿಸಿದೆ. ಬಾಂದ್ರಾದಲ್ಲಿರುವ ಐದು ಅಂತಸ್ತಿನ ಮಹಾನಗರ ಟೆಲಿಫೋನ್ ನಿಗಮದ ಕಟ್ಟಡದಲ್ಲಿ ಕಾಣಿಸಿಕೊಂಡ ಭಾರೀ ಬೆಂಕಿಯು ಜನರನ್ನು ದಿನ ಪೂರ್ತಿ ಆತಂಕದಲ್ಲಿ ಮುಳುಗಿಸಿತು. ತ್ವರಿತ ಕಾರ್ಯಾಚರಣೆ ನಡೆಸಿದ ರಕ್ಷಣಾ ಸಿಬ್ಬಂದಿ, ವೈಮಾನಿಕ ಏಣಿ ಬಳಸಿ ಕಟ್ಟಡದಲ್ಲಿ ಸಿಕ್ಕಿ ಬಿದ್ದಿದ್ದ ಎಲ್ಲ 100 ಮಂದಿಯನ್ನು ಸುರಕ್ಷಿತವಾಗಿ ಪಾರು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಈ ಕಟ್ಟಡದ ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ 14 ಅಗ್ನಿ ಶಾಮಕ ವಾಹನಗಳು ತ್ವರಿತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದವು. ಶಾರ್ಟ್ ಸರ್ಕಿಟ್ನಿಂದಾಗಿ ಅಗ್ನಿ ಅನಾಹುತ ಸಂಭವಿಸಿದೆ ಎನ್ನಲಾಗಿದೆ.
ಅಗ್ನಿ ಅನಾಹುತ: 100 ಮಂದಿ ಸುರಕ್ಷಿತ ಪಾರು
ತ್ವರಿತ ಕಾರ್ಯಾಚರಣೆ ನಡೆಸಿದ ರಕ್ಷಣಾ ಸಿಬ್ಬಂದಿ, ವೈಮಾನಿಕ ಏಣಿ ಬಳಸಿ ಕಟ್ಟಡದಲ್ಲಿ ಸಿಕ್ಕಿ ಬಿದ್ದಿದ್ದ ಎಲ್ಲ 100 ಮಂದಿಯನ್ನು ಸುರಕ್ಷಿತವಾಗಿ ಪಾರು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
PTI 23 Jul 2019, 5:00 am