ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೋದರ ಸಂಬಂಧಿ ರಿಜ್ವಾನ್ ಕಸ್ಕರ್ ವಿರುದ್ಧ ಮೋಕಾ (ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ) ಕಾಯಿದೆಯಡಿ ಪ್ರಕರಣ ದಾಖಲಿಸಲು ಮುಂಬಯಿ ಕ್ರೈಂ ಬ್ರ್ಯಾಂಚ್ ಸಿದ್ಧತೆ ನಡೆಸಿದೆ. ಸ್ಥಳೀಯ ವ್ಯಾಪಾರಿಗಳು ಹಾಗೂ ಉದ್ಯಮಿಗಳ ಸುಲಿಗೆ ಪ್ರಕರಣದಲ್ಲಿ ಕೆಲವು ದಿನಗಳ ಹಿಂದೆ ಮುಂಬಯಿ ಪೊಲೀಸರು ಕಸ್ಕರ್ನನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ದೇಶಬಿಟ್ಟು ಪಲಾಯನಗೊಳ್ಳಲು ಕಸ್ಕರ್ ಮುಂದಾಗಿದ್ದ ವಿಷಯ ಅರಿತು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಮೋಕಾ ಕಾಯಿದೆಯಡಿ ಪ್ರಕರಣ ದಾಖಲಿಸಿ ಅವನಿಗೆ ತಕ್ಕ ಶಾಸ್ತಿ ಮಾಡಲು ಪೊಲೀಸರು ಮುಂದಾಗಿದ್ದಾರೆಂದು ಮೂಲಗಳು ತಿಳಿಸಿವೆ. ಭೂಗತ ಪಾತಕಿಗಳಾದ ಛೋಟಾ ಶಕೀಲ್, ಫಾಹಿಮ್ ಮಚ್ಮಾಚ್ ಜತೆಗೂ ಈತ ವ್ಯವಹಾರದ ನಂಟು ಇರಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಕಳೆದ 10 ವರ್ಷದಲ್ಲಿ ಛೋಟಾ ಶಕೀಲ್ ಹಾಗೂ ಫಾಹಿಮ್ ಮಚ್ಮಾಚ್ ವಿರುದ್ಧ 50 ಪ್ರಕರಣಗಳು ದಾಖಲಾಗಿವೆ.
ದಾವೂದ್ ಸೋದರ ಸಂಬಂಧಿ ಕಸ್ಕರ್ ವಿರುದ್ಧ ಮೋಕಾ ಅಸ್ತ್ರ ಬಳಸಲು ಸಿದ್ಧತೆ
ದೇಶಬಿಟ್ಟು ಪಲಾಯನಗೊಳ್ಳಲು ಕಸ್ಕರ್ ಮುಂದಾಗಿದ್ದ ವಿಷಯ ಅರಿತು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
Agencies 30 Jul 2019, 5:00 am