ಆ್ಯಪ್ನಗರ

ಭಾರತೀಯ ಸೇನೆಗೆ 25 ಕೋಟಿ ರೂ. ಬೆಲೆಯ ಭೂಮಿ ದಾನ ನೀಡಿದ ಹಿರಿಯ ಸಮಾಜ ಸೇವಕ

ಮಹಾರಾಷ್ಟ್ರದ ಹಿರಿಯ ಸಮಾಸ ಸೇವಕರೊಬ್ಬರು ಭಾರತೀಯ ಸೇನೆಗೆ ಸುಮಾರು 25 ಕೋಟಿ ರೂಪಾಯಿ ಮೌಲ್ಯದ ಜಮೀನನ್ನು ದಾನವಾಗಿ ನೀಡಿದ್ದಾರೆ.

Navbharat Times 10 Sep 2019, 1:00 pm
ಮುಂಬಯಿ: ದಕ್ಷಿಣ ಮುಂಬಯಿ ಪ್ರಾಂತ್ಯದ ಹಿರಿಯ ಸಮಾಜ ಸೇವಕ ಹಾಗೂ ರಾಧಾ ಕಾಳಿನದಾಸ್ ದರ್ಯಾನಾನಿ ಟ್ರಸ್ಟ್ ಮುಖ್ಯಸ್ಥರಾದ ಪ್ರೇಮ್ ದರ್ಯಾನಾನಿ ಅವರು ಸುಮಾರು 25 ಕೋಟಿ ರೂಪಾಯಿ ಬೆಲೆ ಬಾಳುವ ಎರಡು ಎಕರೆ ಭೂಮಿಯನ್ನು ಸೇನೆಗೆ ದಾನವಾಗಿ ನೀಡಿದ್ದಾರೆ.
Vijaya Karnataka Web indian army


ದಾನವಾಗಿ ನೀಡಿದ ಭೂಮಿಯಲ್ಲಿ ಮಹಾರಾಷ್ಟ್ರದ ಮೊದಲ ಹಾಗೂ ದೇಶದ ಎರಡನೇ ಸೇನಾ ಕಾನೂನು ಕಾಲೇಜು ನಿರ್ಮಾಣವಾಗಲಿದೆ.

2018ರಲ್ಲಿಯೂ ಸೇನೆಗೆ ಭೂಮಿಯನ್ನು ದಾನವಾಗಿ ನೀಡಿದ್ದ ಆಧುನಿಕ ದಾನಶೂರ ಕರ್ಣ ಪ್ರೇಮ್ ದರ್ಯಾನಾನಿ ಅವರು, ಈಗ ಮತ್ತೆ ಎರಡು ಎಕರೆಯಷ್ಟು ಜಮೀನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದ್ದಾರೆ.

ಲೋನಾವಾಲಾದಲ್ಲಿರುವ ಕಾನೂನು ಕಾಲೇಜಿನ ಎರಡನೇ ಹಂತದ ಭೂಮಿ ಪೂಜೆ ಚೀಫ್ ಲೆಫ್ಟಿನೆಂಟ್ ಜನರಲ್ ಎಸ್ ಕೆ ಸೈನಿ ಅವರ ಗೌರವ ಹಸ್ತದಿಂದ ಸಂಪನ್ನವಾಯಿತು. ಈ ಸಂದರ್ಭದಲ್ಲಿ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಸೈನಿ, ಸೇನೆ ದೇಶಕ್ಕಾಗಿ ಸದಾ ಸಿದ್ಧವಾಗಿರುತ್ತದೆ. ಮತ್ತು ಈ ರೀತಿಯಲ್ಲಿ ಸಾಮಾನ್ಯ ಜನರು ಸೈನಿಕರೊಂದಿಗೆ ಬೆರೆಯುವುದರಿಂದ ಸೇನೆಯ ಮನೋಬಲ ಇಮ್ಮಡಿಯಾಗುತ್ತದೆ ಎಂದರು.

ವೀರ ಯೋಧರಿಗೆ ಕೃತಜ್ಞತೆ

ದೇಶದ ಆತಂರಿಕ ಹಾಗೂ ಬಾಹ್ಯ ಶತ್ರುಗಳ ವಿರುದ್ಧ ತೊಡೆ ತಟ್ಟಿ ಪ್ರಾಣತ್ಯಾಗ ಮಾಡಿರುವ ವೀರ ಯೋಧರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಭಾರತೀಯ ಸೇನೆಗೆ ಜಮೀನು ಹಸ್ತಾಂತರಿಸಲಾಗಿದೆ ಎಂದು ದರ್ಯಾನಿ ಟ್ರಸ್ಟ್ ಮುಖ್ಯಸ್ಥ ಪ್ರೇಮ ದರ್ಯಾನಿ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ