ಆ್ಯಪ್ನಗರ

ದಿಲ್ಲಿ ಬಳಿಕ ಮುಂಬಯಿನಲ್ಲಿ ಹೆಚ್ಚಾದ ವಾಯುಮಾಲಿನ್ಯ

ಕಳೆದ ಕೆಲವು ದಿನಗಳ ಹಿಂದೆ ರಾಷ್ಟ್ರ ರಾಜಧಾನಿ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಉಂಟಾಗಿದ್ದ ವಾಯುಮಾಲಿನ್ಯ ಇದೀಗ ಮುಂಬಯಿ ನಗರಕ್ಕೂ ಕಾಲಿಟ್ಟಿದೆ.

Mumbai Mirror 10 Dec 2017, 8:40 pm
ಹೊಸದಿಲ್ಲಿ: ಕಳೆದ ಕೆಲವು ದಿನಗಳ ಹಿಂದೆ ರಾಷ್ಟ್ರ ರಾಜಧಾನಿ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಉಂಟಾಗಿದ್ದ ವಾಯುಮಾಲಿನ್ಯ ಇದೀಗ ಮುಂಬಯಿ ನಗರಕ್ಕೂ ಕಾಲಿಟ್ಟಿದೆ.
Vijaya Karnataka Web mumbai is not delhi yet but rising air pollution is taking a toll on our lungs
ದಿಲ್ಲಿ ಬಳಿಕ ಮುಂಬಯಿನಲ್ಲಿ ಹೆಚ್ಚಾದ ವಾಯುಮಾಲಿನ್ಯ


ದಿಲ್ಲಿ ನಗರಕ್ಕೆ ಹೋಲಿಸಿದರೆ ಮುಂಬಯಿನಲ್ಲಿ ಅಷ್ಟೊಂದು ಮಟ್ಟಕ್ಕೆ ಮಾಲಿನ್ಯ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಸಾಕಷ್ಟು ಹದಗೆಡುವ ಯಾವುದೇ ಸಂಶಯವಿಲ್ಲ ಎಂದು ಇಲ್ಲಿನ ವೈದ್ಯರೇ ಹೇಳುತ್ತಾರೆ. ಇದಕ್ಕೆ ಮುಖ್ಯ ನಿದರ್ಶನ ಇತ್ತೀಚೆಗೆ ನಗರದ ಆಸ್ಪತ್ರೆಗೆ ದಾಖಲಾದ ರೋನಕ್‌ ರಜಾವತ್‌.

ಹೌದು, ಕೆಲ ದಿನಗಳ ಹಿಂದೆ ರೋನಕ್‌ ರಜಾವತ್‌ ಅಪಘಾತದಿಂದಾಗಿ ಉಸಿರಾಡಲು ತೊಂದರೆ ಅನುಭವಿಸಿ ನಗರದ ಮುಳುಂಡ್‌ನ ಫೋರ್ಟೀಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ತೊಂದರೆ ಉಲ್ಭಣಿಸುತ್ತಾ ಹೋದಂತೆ ವೈದ್ಯರು ಸಿಟಿ ಸ್ಕ್ಯಾನ್‌ ಮಾಡಿಸುವಂತೆ ರಜಾವತ್‌ಗೆ ಸೂಚಿಸಿದ್ದರು. ಸಿಟಿ ಸ್ಕ್ಯಾನ್‌ ವರದಿಯಲ್ಲಿ ಶ್ವಾಸಕೋಶದಲ್ಲಿ ಸೂಕ್ಷ್ಮ ಕಣಗಳು ಸೇರಿಕೊಂಡಿರುವುದು ಪತ್ತೆಯಾಗಿದೆ. ಆದರೆ ರಜಾವತ್‌ಗೆ ಧೂಮಪಾನದ ಚಟವಿರಲಿಲ್ಲ. ಹೀಗಾಗಿ ಈ ವರದಿ ವೈದ್ಯರಿಗೂ ಶಾಕ್‌ ನೀಡಿತ್ತು.

ರಜಾವತ್‌ ಕುಟುಂಬಸ್ಥರ ಬಳಿ ಈ ವಿಚಾರ ತಿಳಿಸಿದಾಗ ಅವರ ಮನೆಯ ಸುತ್ತಮುತ್ತ ನಡೆಯುತ್ತಿದ್ದ ಕಟ್ಟಡ ಕಾಮಗಾರಿಯ ದೂಳಿನಿಂದಾಗಿ ರಜಾವತ್‌ ಶ್ವಾಸಕೋಶಕ್ಕೆ ಬ್ಯಾಕ್ಟೀರಿಯಾಗಳ ದಾಳಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಒಂದು ವೇಳೆ ಶ್ವಾಸಕೋಶಕ್ಕೆ ಬ್ಯಾಕ್ಟೀರಿಯಾ ಸೋಂಕು ಉಂಟಾದರೆ ಇದನ್ನು ಹೋಗಲಾಡಿಸಲು ವರ್ಷಗಳೇ ಬೇಕು ಎನ್ನುತ್ತಾರೆ ಫೋರ್ಟೀಸ್‌ ಆಸ್ಪತ್ರೆಯ ವೈದ್ಯ ದೇಧಿಯಾ. ಇವರ ಪ್ರಕಾರ ಮುಂಬಯಿಯಲ್ಲಿ 2015ಕ್ಕೆ ಹೋಲಿಸಿದರೆ ಶ್ವಾಸಕೋಶದ ಸಮಸ್ಯೆಯಿಂದ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಾಲೇ ಬಂದಿದೆ.

ಸದ್ಯ ರಜಾವತ್‌ ಆಸ್ಪತ್ರೆಯುಂದ ಡಿಸ್ಚಾರ್ಜ್‌ ಆಗಿದ್ದು, ಪ್ರತಿನಿತ್ಯ ಮಾಸ್ಕ್‌ ಧರಿಸುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ದಿನೇ ದಿನೇ ವಾಯುಮಾಲಿನ್ಯದಿಂದ ತೊಂದರೆಗೊಳಗಾಗುವವರ ಸಂಖ್ಯೆ ಏರುತ್ತಲೇ ಸಾಗಿದೆ.

ಕೆಇಎಂ ಆಸ್ಪತ್ರೆಯ ಹೃದಯ ವೈದ್ಯಕೀಯ ವಿಭಾಗದ ಡಾ. ಅಮಿತಾ ಅಥವಾಲೆ ಮತ್ತು ತಂಡದವರು ನಡೆಸಿದ ಸಮೀಕ್ಷೆ ಪ್ರಕಾರ, ಬೋರಿವಲಿ, ಚೆಂಬುರ್, ಖಾರ್, ಅಂಧೇರಿ, ವರ್ಲಿ, ಮತ್ತು ಭಂಡಪ್‌ನಲ್ಲಿ ಅತಿ ಹೆಚ್ಚು ಕಟ್ಟಡ ಕಾಮಗಾರಿ ಕೆಲಸಗಳು ಸಾಗುತ್ತಿದೆ. ಈ ಪ್ರದೇಶದಲ್ಲಿ ಹೆಚ್ಚು ವಾಯುಮಾಲಿನ್ಯ ತೊಂದರೆಯೂ ಕಾಣಿಸಿಕೊಂಡಿದೆಯಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ