ಮುಂಬಯಿ: ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ಎದುರಿಸಲಿರುವ ಮಹಾರಾಷ್ಟ್ರದಲ್ಲಿ ಈಗಲೇ ರಾಜಕೀಯ ಧ್ರುವೀಕರಣ ಆರಂಭವಾಗಿದೆ. ಶರದ್ ಪವಾರ್ ನೇತೃತ್ವದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ)ಯ ಮುಂಬಯಿನ ಮುಖ್ಯಸ್ಥ ಸಚಿನ್ ಆಹಿರ್ ಗುರುವಾರ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. 1999ರಿಂದಲೂ ಎನ್ಸಿಪಿ ಜತೆಗೆ ಗುರುತಿಸಿಕೊಂಡಿದ್ದ ಸಚಿನ್, ತಾವು ಪಕ್ಷ ತೊರೆಯಲು ಸೂಕ್ತ ಕಾರಣ ನೀಡಿಲ್ಲ. ''ಶರದ್ ಪವಾರ್ ಎಂದೆಂದಿಗೂ ನನ್ನ ಹೃದಯದಲ್ಲಿ ಇರುತ್ತಾರೆ. ಎನ್ಸಿಪಿಯನ್ನು ಒಡೆಯಲು ಯತ್ನಿಸುವುದಿಲ್ಲ. ನನ್ನ ದೇಹದಲ್ಲಿ ಉದ್ಧವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ಅವರು ನೀಡುವ ಶಕ್ತಿ ತುಂಬಿಕೊಂಡು ಶಿವಸೇನೆಯ ಸಂಘಟನೆಯನ್ನು ಹೆಚ್ಚಿಸಲು ಶ್ರಮಿಸುತ್ತೇನೆ,'' ಎಂದಿದ್ದಾರೆ. ಸಚಿನ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, '' ಶಿವಸೇನೆ ಬೆಳೆಯುವುದು ನಮಗೆ ಮುಖ್ಯ. ಆದರೆ ಸಿದ್ಧಾಂತಗಳನ್ನು ಮತ್ತು ನೈತಿಕತೆಯನ್ನು ಗಾಳಿಗೆ ತೂರಲ್ಲ. ಜನರ ಹೃದಯ ಗೆದ್ದು ರಾಜಕೀಯ ಮಾಡಲು ನಾವು ಬಯಸುತ್ತೇವೆ. ಇತರ ಪಕ್ಷಗಳನ್ನು ಒಡೆದು ಅಲ್ಲ,'' ಎಂದು ಹೇಳಿದ್ದಾರೆ.
ಮುಂಬಯಿ ಎನ್ಸಿಪಿ ಮುಖ್ಯಸ್ಥ ಸಚಿನ್ ಶಿವಸೇನೆಗೆ ಸೇರ್ಪಡೆ
1999ರಿಂದಲೂ ಎನ್ಸಿಪಿ ಜತೆಗೆ ಗುರುತಿಸಿಕೊಂಡಿದ್ದ ಸಚಿನ್, ತಾವು ಪಕ್ಷ ತೊರೆಯಲು ಸೂಕ್ತ ಕಾರಣ ನೀಡಿಲ್ಲ.
PTI 26 Jul 2019, 5:00 am