ಆ್ಯಪ್ನಗರ

ಮತಗಟ್ಟೆಯಲ್ಲಿ ಸಿಕ್ಕಿಬಿದ್ದ ಕೊಲೆ ಆರೋಪಿ

ತಂದೆ ಸಾವಿಗೆ ಕಾರಣರಾದವನ್ನೊಬ್ಬನನ್ನು ಮತ ಚಲಾಯಿಸಲು ಬಂದಾಗ, ಹಿಡಿದು ಪೊಲೀಸರಿಗೊಪ್ಪಿಸಿದ ಸಿನಿಮೀಯ ಘಟನೆ ಇಲ್ಲಿನ ಹಾರೌ ಮತಗಟ್ಟೆಯಲ್ಲಿ ನಡೆದಿದೆ.

Ei Samay 26 Apr 2016, 7:41 pm
ಕೊಲ್ಕತ್ತಾ: ತಂದೆ ಸಾವಿಗೆ ಕಾರಣರಾದವನ್ನೊಬ್ಬನನ್ನು ಮತ ಚಲಾಯಿಸಲು ಬಂದಾಗ, ಹಿಡಿದು ಪೊಲೀಸರಿಗೊಪ್ಪಿಸಿದ ಸಿನಿಮೀಯ ಘಟನೆ ಇಲ್ಲಿನ ಹಾರೌ ಮತಗಟ್ಟೆಯಲ್ಲಿ ನಡೆದಿದೆ.
Vijaya Karnataka Web murder accused caught in polling booth
ಮತಗಟ್ಟೆಯಲ್ಲಿ ಸಿಕ್ಕಿಬಿದ್ದ ಕೊಲೆ ಆರೋಪಿ


ಸಿಪಿಎಂ ಕಾರ್ಯಕರ್ತ ನೂರ್ ಇಸ್ಲಾಮ್ ಮಿಸ್ತ್ರಿ ಮೇಲೆ ಕೆಲವು ದಿನಗಳ ಹಿಂದೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ರಾಜರ್‌ಹಟ್‌ನಲ್ಲಿ ಹಲ್ಲೆ ನಡೆಸಿದ್ದರು. ಮೂರು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ ಮಿಸ್ತ್ರಿ ಕೊನೆಯುಸಿರೆಳೆದಿದ್ದರು.

ಘಟನೆಗೆ ಸಂಬಂಧಿಸಿದ 11 ಆರೋಪಿಗಳಲ್ಲಿ ಪೊಲೀಸರು ಕೇವಲ ನಾಲ್ವರನ್ನು ಬಂಧಿಸಿದ್ದರು. ಇದರಿಂದ ಮಿಸ್ತ್ರಿ ಕುಟುಂಬಕ್ಕೆ ಸಮಾಧಾನವಾಗಿರಲಿಲ್ಲ. ಮಿಸ್ತ್ರಿಯ ಕಡೆ ಪುತ್ರ ತಂದೆ ಸಾವಿಗೆ ಕಾರಣರಾದವರನ್ನು ಪೊಲೀಸರಿಗೆ ಒಪ್ಪಿಸಿಯೇ ತೀರುವೆನೆಂದು ಶಪಥ ಮಾಡಿದ್ದ.

ಆರೋಪಿಗಳಲ್ಲೊಬ್ಬನಾದ ಹಫೀಜುರ್ ಮತ ಚಲಾಯಿಸಲು ಬಂದೇ ಬರುತ್ತಾನೆಂಬ ವಿಶ್ವಾಸ 18 ವರ್ಷದ ನೂರ್ ಮಗನಿಗಿತ್ತು. ಅದೇ ವಿಶ್ವಾಸದಲ್ಲಿ ಸಿಪಿಎಂ ಏಜೆಂಟ್ ಆಗಿ ಮತಗಟ್ಟೆಯಲ್ಲಿ ಕಾದು ಕುಳಿತಿದ್ದ. ಎಣಿಸಿದಂತೆಯೇ ಎಲ್ಲವೂ ನೆರವೇರಿತು. ಕಾಯುತ್ತಿದ್ದ ಆರೋಪಿ ಮತ ಚಲಾಯಿಸಲು ಬಂದ. ತಕ್ಷಣವೇ ಆತನನ್ನು ಪೊಲೀಸರಿಗೆ ಮಿಸ್ತ್ರಿ ಮಗ ಹಿಡಿದು ಕೊಟ್ಟಿದ್ದಾನೆ.

ಈ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಮಿಸ್ತ್ರಿ ಕುಟುಂಬ ಸಂತೋಷದಿಂದ ಮತ ಚಲಾಯಿಸಿದೆ. ಮತ ಚಲಾಯಿಸುವ ಮೂಲಕ ಪತಿಆತ್ಮಕ್ಕೆ ಶಾಂತಿ ಸಿಗಲಿದೆ ಎಂದು, ಪತ್ನಿ ರಿಜಿಯಾ ಬೀಬಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ