ಆ್ಯಪ್ನಗರ

'ವಂದೇಮಾತರಂ' ಹಾಡಿದವನ ಕುಟುಂಬಕ್ಕೆ ಬಹಿಷ್ಕಾರ

ಬಂಕಿಮ್‌ಚಂದ್ರ ಚಟ್ಟೋಪಾಧ್ಯಾಯರ 'ವಂದೇಮಾತರಂ' ರಾಷ್ಟ್ರೀಯ ಗೀತೆಯ ಅಭಿಮಾನಿಯಾಗಿರುವುದಕ್ಕೆ ತಮ್ಮ ಸಮುದಾಯದ ಕೆಲವು ಗುಂಪುಗಳಿಂದ ತೀವ್ರ ಬೆದರಿಕೆಗಳು ಬರುತ್ತಿವೆ ಎಂದು ಆಗ್ರಾ ನಿವಾಸಿ ಗುಲ್‌ಚಮನ್‌ ಶೇರ್ವಾನಿ ದೂರಿದ್ದಾರೆ.

Vijaya Karnataka Web 29 Nov 2017, 12:36 pm
ಆಗ್ರಾ (ಉತ್ತರಪ್ರದೇಶ): ಬಂಕಿಮ್‌ಚಂದ್ರ ಚಟ್ಟೋಪಾಧ್ಯಾಯರ 'ವಂದೇಮಾತರಂ' ರಾಷ್ಟ್ರೀಯ ಗೀತೆಯ ಅಭಿಮಾನಿಯಾಗಿರುವುದಕ್ಕೆ ತಮ್ಮ ಸಮುದಾಯದ ಕೆಲವು ಗುಂಪುಗಳಿಂದ ತೀವ್ರ ಬೆದರಿಕೆಗಳು ಬರುತ್ತಿವೆ ಎಂದು ಆಗ್ರಾ ನಿವಾಸಿ ಗುಲ್‌ಚಮನ್‌ ಶೇರ್ವಾನಿ ದೂರಿದ್ದಾರೆ.
Vijaya Karnataka Web muslim disowned for singing vande mataram
'ವಂದೇಮಾತರಂ' ಹಾಡಿದವನ ಕುಟುಂಬಕ್ಕೆ ಬಹಿಷ್ಕಾರ


'ವಂದೇಮಾತರಂ' ಮೇಲಿನ ತಮ್ಮ ಪ್ರೀತಿಯಿಂದಾಗಿ ತಮ್ಮ ಕುಟುಂಬಕ್ಕೆ ಮುಸ್ಲಿಂ ಸಂಘಟನೆಗಳು ಬಹಿಷ್ಕಾರ ಹಾಕಿದ್ದು, ಮುಸ್ಲಿಂ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಮುಸ್ಲಿಮರೇ ಹೆಚ್ಚಾಗಿರುವ ಆಗ್ರಾದ ಅಜಂಪುರದ ನಿವಾಸಿಯಾಗಿರುವ 34 ವರ್ಷದ ಶೇರ್ವಾನಿ ಕುಟುಂಬದ ಎಲ್ಲರೂ ತ್ರಿವರ್ಣ ಧ್ವಜದ ಬಣ್ಣಗಳಿರುವ ಉಡುಗೆಯನ್ನೇ ಧರಿಸುತ್ತಾರೆ. ವಂದೇ ಮಾತರಂ ಹಾಡುತ್ತಿರುವುದಕ್ಕಾಗಿ ಮುಸ್ಲಿಂ ಶಾಲೆಗಳು ತಮ್ಮ ಮಕ್ಕಳನ್ನು ಹೊರಹಾಕಿವೆ; ಅಲ್ಲದೆ ಹಲವು ಸಂಘಟನೆಗಳು ವಂದೇಮಾತರಂ ಹಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ ಎಂದು ಶೇರ್ವಾನಿ ಅವರು ವಿಕ ಸೋದರ ಸಂಸ್ಥೆ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದರು.

ಶೇರ್ವಾನಿ ಪಾದರಕ್ಷೆಗಳ ಬಿಡಿಭಾಗಗಳ ಸಾಗಣೆ ವೃತ್ತಿ ಮಾಡಿಕೊಂಡಿದ್ದು, ಅವರ ಪತ್ನಿ ವಿವಿಧ ಕಂಪನಿಗಳಿಗೆ ಶೂಗಳನ್ನು ಹೊಲಿದು ಕೊಡುತ್ತಾರೆ.

ಶೇರ್ವಾನಿ ಅವರ ಒಬ್ಬ ಮಗಳನ್ನು ಶಾಲೆಯಿಂದ ಹೊರಗೆ ಹಾಕಿರುವುದನ್ನು ಒಂದು ಶಾಲೆ ಒಪ್ಪಿಕೊಂಡಿದೆ. ಶಾಲೆ ನಡೆಸುತ್ತಿರುವ ಅಸ್ಲಾಂ ಖಾನ್‌, 'ಶೇರ್ವಾನಿ ಮಗಳು ಇಲ್ಲಿ ಓದುತ್ತಿದ್ದಳು. ಸಮುದಾಯದ ಹಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಾವು ಅನಿವಾರ್ಯವಾಗಿ ಆಕೆಯನ್ನು ಶಾಲೆಯಿಂದ ಹೊರಹಾಕಬೇಕಾಯಿತು. ವಿದ್ಯಾರ್ಥಿನಿ ಮತ್ತು ಅವಳ ಕುಟುಂಬದ ಎಲ್ಲರೂ ರಾಷ್ಟ್ರಧ್ವಜದ ಬಣ್ಣಗಳ ಉಡುಗೆ ಧರಿಸುತ್ತಿರುವುದು ಸಮುದಾಯ ಆಕ್ಷೇಪಕ್ಕೆ ಕಾರಣವಾಗಿದೆ. ಅವಳ ತಂದೆ ರಾಷ್ಟ್ರೀಯ ಗೀತೆ ಹಾಡುವುದರ ವಿರುದ್ಧ ಫತ್ವಾ ಕೂಡ ಹೊರಡಿಸಲಾಗಿದೆ. ಹಾಗಿದ್ದರೂ 'ವಂದೇ ಮಾತರಂ' ಹಾಡುವುದನ್ನು ಮುಂದುವರಿಸಿದ್ದಾನೆ' ಎಂದು ತಿಳಿಸಿದರು.

ಆಲ್‌ ಇಂಡಿಯಾ ಮಜ್ಲಿಸ್‌ ಇ ಇತ್ತೆಹಾದುಲ್‌ ಮುಸ್ಲಿಮೀನ್‌ (ಎಐಎಂಐಎಂ) ಸಂಘಟನೆಯ ಆಗ್ರಾ ಘಟಕದ ಅಧ್ಯಕ್ಷ ಮೊಹಮ್ಮದ್‌ ಇದ್ರಿಶ್‌ ಆಲಿ ಕೂಡ ಶೇರ್ವಾನಿಗೆ ಸಮುದಾಯ ಬಹಿಷ್ಕಾರ ಹಾಕಿರುವುದನ್ನು ಒಪ್ಪಿಕೊಂಡಿದ್ದಾರೆ.

'ದಿಲ್ಲಿ ಜಾಮಾ ಮಸೀದಿಯ ಶಾಹಿ ಇಮಾಮ್‌ ಮೌಲಾನಾ ಅಹ್ಮದ್‌ ಬುಖಾರಿ ತಮ್ಮ ವಿರುದ್ಧ ಫತ್ವಾ ಹೊರಡಿಸಿದ್ದು, ತಮ್ಮನ್ನು ಕಾಫಿರ್‌ ಎಂದು ಕರೆದಿದ್ದಾರೆ. ಆದರೆ ಈ ಫತ್ವಾಗಳಿಂದ ವಂದೇ ಮಾತರಂ ಹಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ನಾನು ಚಿಕ್ಕವನಿದ್ದಾಗಲೇ ನನಗೆ ವಂದೇಮಾತರಂ ಎಂದರೆ ಬಲು ಅಚ್ಚುಮೆಚ್ಚು. ಆಗಲೇ ನಮ್ಮ ಕುಟುಂಬವನ್ನು ಮುಸ್ಲಿಮರು ಬಹಿಷ್ಕರಿಸಿದ್ದರು' ಎಂದು ಶೇರ್ವಾನಿ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ