ಆ್ಯಪ್ನಗರ

ಮೋದಿ ಕಮಲ ತುಲಾಭಾರಕ್ಕೆ ಹೂವು ಪೂರೈಸಿದ್ದು ಮುಸ್ಲಿಂ ಕುಟುಂಬ

ಈ ತುಲಾಭಾರ ಸೇವೆಗೆ 112 ಕೆ.ಜಿ ಕಮಲ ಹೂವುಗಳನ್ನು ಬಳಕೆ ಮಾಡಲಾಗಿತ್ತು. ಈ ಕಮಲದ ಹೂವುಗಳನ್ನು ಪೂರೈಕೆ ಮಾಡಿದ್ದು ಯಾರು ಗೊತ್ತೆ. ಮುಸ್ಲಿಂ ಕುಟುಂಬ.

Vijaya Karnataka Web 9 Jun 2019, 10:47 am
ಗುರುವಾಯೂರು: ಪ್ರಧಾನಿಯಾಗಿ 2 ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ನರೇಂದ್ರ ಮೋದಿ ಗುರುವಾಯೂರಿನ ಶ್ರೀಕೃಷ್ಣ ದೇವಾಲಯಕ್ಕೆ ತೆರಳಿ ತುಲಾಭಾರ ಸೇವೆ ಮಾಡಿಸಿಕೊಂಡಿದ್ದು ಭಾರಿ ಸುದ್ದಿಯಾಗಿತ್ತು.
Vijaya Karnataka Web ತುಲಾಭಾರ
ತುಲಾಭಾರ


ಕೇರಳದಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಗೆಲ್ಲದಿದ್ದರೂ ಅಲ್ಲಿನ ಜನರಿಗೆ ಅಭಿನಂದನೆ ಸಲ್ಲಿಸಲು ನರೇಂದ್ರ ಮೋದಿ ಬಂದಿದ್ದರು. ಈ ಸಂದರ್ಭದಲ್ಲಿ ಪ್ರಸಿದ್ಧ ಗುರುವಾಯೂರು ದೇಗುಲಕ್ಕೂ ಮೋದಿ ಭೇಟಿ ಕೊಟ್ಟರು.

ಈ ಸಂದರ್ಭದಲ್ಲಿ ನರೇಂದ್ರ ಮೋದಿ ತುಲಾಭಾರ ಸೇವೆ ಕೂಡ ಮಾಡಿದರು. ಇದಕ್ಕಾಗಿ ಬಳಸಿದ್ದು ಕಮಲದ ಹೂವುಗಳನ್ನು

ಈ ತುಲಾಭಾರ ಸೇವೆಗೆ 112 ಕೆ.ಜಿ ಕಮಲ ಹೂವುಗಳನ್ನು ಬಳಕೆ ಮಾಡಲಾಗಿತ್ತು. ಈ ಕಮಲದ ಹೂವುಗಳನ್ನು ಪೂರೈಕೆ ಮಾಡಿದ್ದು ಯಾರು ಗೊತ್ತೆ. ಮುಸ್ಲಿಂ ಕುಟುಂಬ.

ತುಲಾಭಾರ ಸೇವೆಗೆ ಒಂದಷ್ಟು ಹೂವುಗಳನ್ನು ತಮಿಳುನಾಡಿನ ನಾಗರ್ ಕೋಯಿಲ್ ನಿಂದ ತರಿಸಿಕೊಳ್ಳಲಾಗಿತ್ತು. ಇನ್ನು ಉಳಿದಿದ್ದನ್ನು ಕೇರಳದ ತಿರುಣ್ಣಾವಾಯ ಗ್ರಾಮದ ಮುಸ್ಲಿಂ ಕುಟುಂಬದವರು ಪೂರೈಸಿದರು.

ಈ ಗ್ರಾಮದವರು ಮುಸಲ್ಮಾನ ಕುಟುಂಬಗಳು ಕಮಲದ ಹೂವು ಬೆಳೆಯುತ್ತಿದ್ದು, ದಶಕಗಳಿಂದಲೂ ದೇವಾಲಯಕ್ಕೆ ಪೂರೈಕೆ ಮಾಡುತ್ತಿವೆ.

ಗುರುವಾಯೂರು ದೇವಾಲಯ ಸೇರಿದಂತೆ ಕೇರಳದ ವಿವಿಧ ದೇವಾಲಯಗಳಿಗೆ ಒಟ್ಟಾರೆ 20,000 ಕಮಲದ ಹೂವುಗಳನ್ನು ಪೂರೈಕೆ ಮಾಡುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ