ಆ್ಯಪ್ನಗರ

ಫಡ್ನವೀಸ್‌ಗೆ 'ಶಾಂತಿದೂತ' ಪ್ರಶಸ್ತಿ ನೀಡಿದ ಮುಸ್ಲಿಮರು

ಹಝ್ ಹೌಸ್‌ನಲ್ಲಿ ನಡೆದ ಇಫ್ತಾರ್ ಕೂಟದ ವೇಳೆ ಕೆಲವು ಮುಸ್ಲಿಂ ಸಂಘಟನೆಗಳು ಅಮನ್ ಕಾ ಮಸೀಹ (ಶಾಂತಿದೂತ) ಎಂಬ ಪ್ರಶಸ್ತಿಯೊಂದಿಗೆ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಸನ್ಮಾಸಿದವು.

ಟೈಮ್ಸ್ ಆಫ್ ಇಂಡಿಯಾ 18 Jun 2017, 12:36 pm
ಮುಂಬಯಿ: ಹಝ್ ಹೌಸ್‌ನಲ್ಲಿ ನಡೆದ ಇಫ್ತಾರ್ ಕೂಟದ ವೇಳೆ ಕೆಲವು ಮುಸ್ಲಿಂ ಸಂಘಟನೆಗಳು ಅಮನ್ ಕಾ ಮಸೀಹ (ಶಾಂತಿದೂತ) ಎಂಬ ಪ್ರಶಸ್ತಿಯೊಂದಿಗೆ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಸನ್ಮಾಸಿದವು.
Vijaya Karnataka Web muslim groups give messiah of peace award to devendra fadnavis
ಫಡ್ನವೀಸ್‌ಗೆ 'ಶಾಂತಿದೂತ' ಪ್ರಶಸ್ತಿ ನೀಡಿದ ಮುಸ್ಲಿಮರು


ಕಳೆದ ಮೂರು ವರ್ಷಗಳಲ್ಲಿ ಮಹಾರಾಷ್ಟ್ರ ರಾಜ್ಯ ಕೋಮು ಗಲಭೆಗಳಿಂದ ಮುಕ್ತವಾಗಿದೆ. ಭಾವೈಕ್ಯತೆ ಸಾರುವಲ್ಲಿ ಫಡ್ನವೀಸ್ ಮುಖ್ಯ ಪಾತ್ರವಹಿಸಿದ್ದಾರೆ ಎಂದು ಮುಸ್ಲಿಂ ಸಂಘಟನೆಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೋರೆಗಾಂವ್ ಪ್ರದೇಶ ದಾರುಲ್-ಉಲೂಮ್ ಫೈಝಾನ್-ಇ-ರಾಝಾ ಸಂಘಟನೆಯ ಮುಫ್ತಿ ಮೊಹಮ್ಮದ್ ಮಂಜೂರ್ ಝೈಯೆ ಅವರು ಫಡ್ನವೀಸ್‌ಗೆ ಈ ಪ್ರಶಸ್ತಿ ಪ್ರದಾನ ಮಾಡಿದರು. ಮುಫ್ತಿ ಝೈಯೆ ಅವರು ಮಹೀಮ್ ದರ್ಗಾ ಜತೆ ಕೈ ಜೋಡಿಸಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ವಿರುದ್ಧ ಹೋರಾಡಿದ್ದಾರೆ.

'ಬಿಜೆಪಿ ತತ್ವಗಳಿಗೆ ತದ್ವಿರುದ್ಧವಾಗಿರುವ ಮುಸ್ಲಿಂ ಸಂಘಟನೆಗಳೂ ಸಹ ಕೋಮು ಘರ್ಷಣೆಯನ್ನು ತಡೆಗಟ್ಟುವಲ್ಲಿ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರಕಾರ ಮುಖ್ಯ ಪಾತ್ರವಹಿಸಿರುವುದನ್ನು ಒಪ್ಪಿಕೊಳ್ಳುತ್ತಿರುವುದು ಸಂತಸ ತಂದಿದೆ 'ಎಂದು ಬಿಜೆಪಿ ನಗರ ಉಪಾಧ್ಯಕ್ಷ ಹೈದರ್ ಅಜಮ್ ಹೇಳಿಕೊಂಡಿದ್ದಾರೆ.

ಬಹುಸಂಖ್ಯಾತರಲ್ಲಿರುವ ಕೆಲವು ಬಲಿಷ್ಠರು ಅಲ್ಪಸಂಖ್ಯಾತರ ಮೇಲೆ ಸವಾರಿ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು ಅಜಮ್ ಒಪ್ಪಿಕೊಂಡರಾದರೂ, 'ಸರಕಾರ ಯಾರ ವಿರುದ್ಧವೂ ಪಕ್ಷಪಾತ ಹೊಂದಿಲ್ಲ. 'ಸಬ್ ಕಾ ಸಾತ್ ಸಬ್ ಕಾ ವಿಕಾಸ್' ಇದು ಕೇವಲ ಘೋಷಣೆ ಅಲ್ಲ. ನಮ್ಮ ತತ್ವ' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ