ಆ್ಯಪ್ನಗರ

ಗಡ್ಡ ತೆಗೆಯದ ಮುಸ್ಲಿಂ ಪತಿಗೆ ಕುದಿಯುವ ನೀರು ಎರಚಿದಳು

ಗಡ್ಡದ ವಿಚಾರವಾಗಿ ಮುಸ್ಲಿಂ ದಂಪತಿ ಜಗಳ ತಾರಕಕ್ಕೇರಿ ಪತಿ ಸುಟ್ಟ ಗಾಯದಿಂದ ಆಸ್ಪತ್ರೆ ಸೇರಿದ್ದಾನೆ.

ಟೈಮ್ಸ್ ಆಫ್ ಇಂಡಿಯಾ 3 Jun 2017, 12:14 pm
ಅಲಿಗಢ: ಗಡ್ಡದ ವಿಚಾರವಾಗಿ ಮುಸ್ಲಿಂ ದಂಪತಿ ಜಗಳ ತಾರಕಕ್ಕೇರಿ ಪತಿ ಸುಟ್ಟ ಗಾಯದಿಂದ ಆಸ್ಪತ್ರೆ ಸೇರಿದ್ದಾನೆ.
Vijaya Karnataka Web muslim man refuses to shave beard wife throws boiling water on him
ಗಡ್ಡ ತೆಗೆಯದ ಮುಸ್ಲಿಂ ಪತಿಗೆ ಕುದಿಯುವ ನೀರು ಎರಚಿದಳು


ಗಡ್ಡ ತೆಗೆಯುವ ವಿಚಾರವಾಗಿ ಜಗಳ ನಡೆದು ಪತ್ನಿ ನಗ್ಮಾ ಬಿಸಿ ನೀರು ಎರಚಿದ ನಂತರ ಪತಿ ಸಲ್ಮಾನ್‌ ಖಾನ್‌(32) ಸುಟ್ಟ ಗಾಯದಿಂದ ನರಳುತ್ತಿದ್ದಾನೆ.

ಧಾರ್ಮಿಕ ಕಾರಣಗಳಿಂದ ಗಡ್ಡ ತೆಗೆಯಲು ಸಲ್ಮಾನ್‌ ನಿರಾಕರಿಸುತ್ತಿದ್ದ. ಇದೇ ವಿಚಾರವಾಗಿ ಅವರಿಬ್ಬರು ಸದಾ ಕಿತ್ತಾಡುತ್ತಿದ್ದರು. ತಾಳ್ಮೆ ಕಳದುಕೊಂಡ ನಗ್ಮಾ ಗಂಡನ ಮೇಲೆ ಕುದಿಯುವ ನೀರು ಎರಚಿದ್ದಾಳೆ. 'ಧಾರ್ಮಿಕ ಮನೋಭಾವದವನಾದ ನನಗೆ ಮುಕ್ತ ಮನಸ್ಸಿನ ಆಕೆಯ ಲೈಫ್‌ಸ್ಟೈಲ್‌ ಸಹ್ಯವಾಗಿರಲಿಲ್ಲ,'ಎಂದು ಸಲ್ಮಾನ್‌ ಹೇಳಿದ್ದಾನೆ.

'6 ತಿಂಗಳ ಹಿಂದಷ್ಟೇ, ಮದುವೆಯಾಗಿದ್ದ ದಂಪತಿ ನಡುವೆ ಉಡುಗೆ ತೊಡುಗೆ, ಗಡ್ಡದ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಕುರ್ತಾ ಪೈಜಾಮಾ ಬಿಟ್ಟು ಪ್ಯಾಂಟ್ ಶರ್ಟ್‌ ಧರಿಸಬೇಕು, ಗಡ್ಡ ತೆಗೆಯಬೇಕು ಎಂದು ನಗ್ಮಾ ಪಟ್ಟು ಹಿಡಿದಿದ್ದಳು. ಆದರೆ, ಸಲ್ಮಾನ್‌ ಅದಕ್ಕೆ ಒಪ್ಪಿರಲಿಲ್ಲ ಅದರ ಪರಿಣಾಮ ಹೀಗಾಗಿದೆ,' ಎಂದು ಪೊಲೀಸರು ಹೇಳಿದ್ದಾರೆ.

ಪತ್ನಿ ವಿರುದ್ಧ ಹಣ್ಣು ವ್ಯಾಪಾರಿ ಸಲ್ಮಾನ್‌, ಕೊಲೆ ಯತ್ನದ ದೂರು ದಾಖಲಿಸಿದ್ದಾನೆ.

ಮೇ 31ರಂದು ವ್ಯಾಪಾರ ಮುಗಿಸಿ ಸಲ್ಮಾನ್‌ ಮನೆಗೆ ಬಂದಾಗ ನೀರು ಕುದಿಸುತ್ತಿದ್ದ ನಗ್ಮಾ ಬಳಿ ಪ್ರಶ್ನಿಸಿದಾಗ, ಮೊಟ್ಟೆ ಬೇಯಿಸಲು ನೀರು ಕುದಿಸುತ್ತಿರುವುದಾಗಿ ಹೇಳಿದ್ದಳು. ನಂತರ ಅದನ್ನು ಸಲ್ಮಾನ್‌ ಮೇಲೆ ಎರಚಿದ್ದಾಳೆ.

'ನೋವು ಉರಿಯಿಂದ ಬೊಬ್ಬೆ ಇಟ್ಟಾಗ ಅಕ್ಕಪಕ್ಕದವರು ಸೇರಿದರು. ಜೆಎನ್‌ ಮೆಡಿಕಲ್‌ ಕಾಲೇಜಿಗೆ ಕರೆದುಕೊಂಡು ಹೋದರು. ಅಲ್ಲಿ ನನ್ನ ಚಿಕಿತ್ಸೆ ನಡೆಯುತ್ತಿದೆ,'ಎಂದು ಸಲ್ಮಾನ್‌ ಹೇಳಿದ್ದಾನೆ.

'ಮುಖ ಹಾಗೂ ತೋಳಿನ ಶೇ. 20 ಭಾಗ ಸುಟ್ಟಿದೆ, ಇನ್ನೆರೆಡು ದಿನ ಡಿಸ್ಚಾರ್ಜ್‌ ಮಾಡುತ್ತೇವೆ,' ಎಂದು ವೈದ್ಯರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ