ಆ್ಯಪ್ನಗರ

ತರೂರ್‌ ಮುಖಕ್ಕೆ ಮಸಿ ಬಳಿದರೆ ಮುಸ್ಲಿಂ ನಾಯಕನಿಂದ ಇನಾಮು

ಒಂದೊಮ್ಮೆ 2019ರಲ್ಲಿ ಬಿಜೆಪಿ ಮತ್ತೆ ಜಯ ಗಳಿಸಿದರೆ ಭಾರತ 'ಹಿಂದೂ ಪಾಕಿಸ್ತಾನ' ಆಗುತ್ತದೆ ಎಂಬ ಹೇಳಿಕೆಯಿಂದ ಸಿಟ್ಟಾಗಿರುವ ಆಲಿಗಢದ ಮುಸ್ಲಿಂ ಯುವ ನಾಯಕರೊಬ್ಬರು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮುಖಕ್ಕೆ ಮಸಿ ಬಳಿಯುವವರಿಗೆ 11 ಸಾವಿರ ರೂ. ಬಹುಮಾನ ನೀಡುವುದಾಗಿ ಪ್ರಕಟಿಸಿದ್ದಾರೆ.

Vijaya Karnataka 14 Jul 2018, 8:59 am
ಆಗ್ರಾ: ಒಂದೊಮ್ಮೆ 2019ರಲ್ಲಿ ಬಿಜೆಪಿ ಮತ್ತೆ ಜಯ ಗಳಿಸಿದರೆ ಭಾರತ 'ಹಿಂದೂ ಪಾಕಿಸ್ತಾನ' ಆಗುತ್ತದೆ ಎಂಬ ಹೇಳಿಕೆಯಿಂದ ಸಿಟ್ಟಾಗಿರುವ ಆಲಿಗಢದ ಮುಸ್ಲಿಂ ಯುವ ನಾಯಕರೊಬ್ಬರು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮುಖಕ್ಕೆ ಮಸಿ ಬಳಿಯುವವರಿಗೆ 11 ಸಾವಿರ ರೂ. ಬಹುಮಾನ ನೀಡುವುದಾಗಿ ಪ್ರಕಟಿಸಿದ್ದಾರೆ.
Vijaya Karnataka Web taroor


ಆಲಿಗಢದ ಮುಸ್ಲಿಂ ಯುವ ಸಂಘಟನೆಯ ಅಧ್ಯಕ್ಷರಾಗಿರುವ ಮೊಹಮ್ಮದ್‌ ಆಮೀರ್‌ ರಶೀದ್‌ ಪ್ರಕಾರ, ಶಶಿ ತರೂರ್‌ ಕೇವಲ ಹಿಂದೂಗಳ ಭಾವನೆಗಳನ್ನಷ್ಟೇ ಅಲ್ಲ, ರಾಷ್ಟ್ರೀಯವಾದಿ ಮುಸ್ಲಿಮರ ಭಾವನೆಗೂ ಘಾಸಿಯುಂಟು ಮಾಡಿದ್ದಾರೆ. ''ಹಿಂದೂ-ಮುಸ್ಲಿಂ ಏಕತೆ ನಮ್ಮ ಸಾಂಸ್ಕೃತಿಕ ಪರಂಪರೆ. ತರೂರ್‌ ಅವರು ಅದನ್ನು ಅಪಮಾನಿಸಲು ಯತ್ನಿಸಿದ್ದಾರೆ.'' ಎಂದು ರಶೀದ್‌ ಕಿಡಿ ಕಾದಿರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ