ಆ್ಯಪ್ನಗರ

ಪ್ರಾರ್ಥನೆ ಸಲ್ಲಿಸಿದ್ದಕ್ಕಾಗಿ ರಸ್ತೆಯೇ ನಮ್ಮದು ಎನ್ನಲಾಗಲ್ಲ

ಯಾಕೆಂದರೆ ಮುಂಚಿತವಾಗಿಯೇ ಹಲವು ಕಟ್ಟಡಗಳು, ಸ್ಮಾರಕಗಳು, ಶಿಲಾಶಾಸನಗಳು ಹಿಂದೂಗಳದ್ದಾಗಿದೆ. ರಸ್ತೆಗಳಲ್ಲಿ ಪ್ರಾರ್ಥನೆ ಮಾಡಿದಾಕ್ಷಣ ಅದು ನಮ್ಮದಾಗುವುದಿಲ್ಲ . ಅದು ಸಾರ್ವಜನಿಕರ ಆಸ್ತಿ ಎಂದು ಸುಪ್ರೀಂಕೋರ್ಟ್‌ನಲ್ಲಿ ಶುಕ್ರವಾರ ದಾವೆದಾರರಾದ ರಾಮ್‌ಲಲ್ಲಾ ವಿರಾಜ್‌ಮಾನ್‌ ಪರವಾಗಿ ವಕೀಲ ಸಿ.ಎಸ್‌. ವೈದ್ಯನಾಥನ್‌ ವಾದಿಸಿದ್ದಾರೆ.

PTI 17 Aug 2019, 5:00 am
ಹೊಸದಿಲ್ಲಿ: ಮುಸ್ಲಿಂ ಸಮುದಾಯದವರು ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿರಬಹುದು. ಹಾಗೆಂದ ಮಾತ್ರಕ್ಕೆ ಅವರಿಗೆ ಆ ಜಾಗದ ಹಕ್ಕು ಲಭಿಸುವುದಿಲ್ಲ. ಯಾಕೆಂದರೆ ಮುಂಚಿತವಾಗಿಯೇ ಹಲವು ಕಟ್ಟಡಗಳು, ಸ್ಮಾರಕಗಳು, ಶಿಲಾಶಾಸನಗಳು ಹಿಂದೂಗಳದ್ದಾಗಿದೆ. ರಸ್ತೆಗಳಲ್ಲಿ ಪ್ರಾರ್ಥನೆ ಮಾಡಿದಾಕ್ಷಣ ಅದು ನಮ್ಮದಾಗುವುದಿಲ್ಲ . ಅದು ಸಾರ್ವಜನಿಕರ ಆಸ್ತಿ ಎಂದು ಸುಪ್ರೀಂಕೋರ್ಟ್‌ನಲ್ಲಿ ಶುಕ್ರವಾರ ದಾವೆದಾರರಾದ ರಾಮ್‌ಲಲ್ಲಾ ವಿರಾಜ್‌ಮಾನ್‌ ಪರವಾಗಿ ವಕೀಲ ಸಿ.ಎಸ್‌. ವೈದ್ಯನಾಥನ್‌ ವಾದಿಸಿದ್ದಾರೆ.
Vijaya Karnataka Web supreme


ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠದಲ್ಲಿ ರಾಮಜನ್ಮಭೂಮಿ ಪ್ರಕರಣದ ನಿತ್ಯ ವಿಚಾರಣೆ ವೇಳೆ ವಾದಿಸಿದ ವೈದ್ಯನಾಥನ್‌, ''ಹಿಂದಿನಿಂದಲೂ ವಿವಾದಿತ ಸ್ಥಳದಲ್ಲಿನ ಕಟ್ಟಡವನ್ನು ಮಸೀದಿ ಎಂದು ಪರಿಗಣಿಸಲಾಗಿರಲಿಲ್ಲ. ಯಾಕೆಂದರೆ ಕಟ್ಟಡದೊಳಗಿನ ವಿನ್ಯಾಸ ಇಸ್ಲಾಂ ಧರ್ಮದ ನಂಬಿಕೆಗಳಿಗೆ ಹೊಂದುತ್ತಿರಲಿಲ್ಲ. ಮಾನವರ ಅಥವಾ ಪ್ರಾಣಿಗಳ ಚಿತ್ರವನ್ನು ಇಸ್ಲಾಂ ಸಂಪ್ರದಾಯದ ಪ್ರಾರ್ಥನಾ ಸ್ಥಳ ಹೊಂದಿರುವುದಿಲ್ಲ,'' ಎಂದು 1990ರಲ್ಲಿ ಕ್ಲಿಕ್ಕಿಸಲಾದ ಬಾಬ್ರಿ ಕಟ್ಟಡದ ಕೆಲವು ಫೋಟೊಗಳನ್ನು ವೈದ್ಯನಾಥನ್‌ ಕೋರ್ಟ್‌ಗೆ ಸಲ್ಲಿಸಿದರು.

''ವಿವಾದಿತ ಭೂಮಿಯಲ್ಲಿರುವ ಕಟ್ಟಡದ 14 ಕಂಬಗಳಲ್ಲಿ ಶಿವನ ಸಹಿತ ಅನೇಕ ಹಿಂದೂ ದೇವರ ಚಿತ್ರ ಹಾಗೂ ಸಂಕೇತಗಳಿವೆ. ಹೀಗಾಗಿ ಇದು ಮಸೀದಿಯಾಗಿರಲು ಸಾಧ್ಯವೇ ಇಲ್ಲ ,'' ಎಂದು 1950ರಲ್ಲಿ ಸಲ್ಲಿಸಿದ್ದ ಫೈಜಾಬಾದ್‌ ಕಮಿಷನರ್‌ ಅವರ ವರದಿಯ ಪ್ರತಿಯನ್ನೂ ವೈದ್ಯನಾಥನ್‌ ನ್ಯಾಯಪೀಠದ ಮುಂದಿರಿಸಿದರು. ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಿದಲ್ಲಿ ಅದು ಷರಿಯತ್‌ ಕಾನೂನಿಗೆ ವಿರುದ್ಧವಾಗಿರುತ್ತದೆ. ದೇವಾಲಯ ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂಬ ತಮ್ಮ ವಾದಕ್ಕೆ ಇವನ್ನು ಪುರಾವೆಗಳಾಗಿ ಪರಿಗಣಿಸುವಂತೆ ಅವರು ಮನವಿ ಮಾಡಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ