ಆ್ಯಪ್ನಗರ

ಹಿಂದೂ ಕುಟುಂಬ ಬಿಟ್ಟು ಹೋದ ದೇಗುಲಕ್ಕೆ 26 ವರ್ಷಗಳಿಂದ ಮುಸ್ಲಿಮರ ರಕ್ಷಣೆ

ಲದ್ದೇವಾಲ ಸಮೀಪ ಕಿರಿದಾದ ಗಲ್ಲಿಯೊಂದರಲ್ಲಿ ಕಳೆದ 26 ವರ್ಷಗಳಿಂದ ಮುಸ್ಲಿಮರು ದೇವಾಲಯವೊಂದರ ನಿರ್ವಹಣೆ, ರಕ್ಷಣೆಯ ಜವಾಬ್ದಾರಿ ನಿಭಾಯಿಸುತ್ತಾ ಬಂದಿದ್ದಾರೆ.

TIMESOFINDIA.COM 17 Sep 2018, 12:55 pm
ಮುಜಫ್ಪರ್‌ನಗರ: ಇಲ್ಲಿಂದ ಒಂದು ಕಿ.ಮೀ ದೂರವಿರುವ ಲದ್ದೇವಾಲ ಸಮೀಪ ಕಿರಿದಾದ ಗಲ್ಲಿಯೊಂದರಲ್ಲಿ ಕಳೆದ 26 ವರ್ಷಗಳಿಂದ ಮುಸ್ಲಿಮರು ದೇವಾಲಯವೊಂದರ ನಿರ್ವಹಣೆ, ರಕ್ಷಣೆಯ ಜವಾಬ್ದಾರಿ ನಿಭಾಯಿಸುತ್ತಾ ಬಂದಿದ್ದಾರೆ.
Vijaya Karnataka Web 1


ಇಲ್ಲಿ ವಾಸವಿದ್ದ ಹಿಂದೂ ಕುಟುಂಬವೊಂದು 1990ರ ದಶಕದಲ್ಲಿ ಬಾಬರಿ ಮಸೀದಿ ಧ್ವಂಸ ಬಳಿಕ ಉದ್ಭವಿಸಿದ್ದ ಗಲಭೆಯ ಹಿನ್ನೆಲೆಯಲ್ಲಿ ಆ ಪ್ರದೇಶ ಬಿಟ್ಟು ತೆರಳಿತ್ತು. ಅಂದಿನಿಂದಲೂ ಅಲ್ಲಿರುವ ಮುಸ್ಲಿಮರು ಪ್ರತಿದಿನ ಆ ದೇಗುಲವನ್ನು ಸ್ವಚ್ಛಗೊಳಿಸುತ್ತಾರೆ. ಪ್ರತಿ ದೀಪಾವಳಿ ಸಮಯದಲ್ಲಿ ಬಣ್ಣ ಹೊಡೆಸುತ್ತಾರೆ. ಪ್ರಾಣಿಗಳು ಪ್ರವೇಶಿಸದಂತೆ ರಕ್ಷಿಸುತ್ತ ಬಂದಿದ್ದಾರೆ.

ಕೋಮುಗಲಭೆಯ ಕಾರಣಕ್ಕೆ ಹಿಂದೂ ಕುಟುಂಬವು ಇಲ್ಲಿಂದ ಹೋಗಿದ್ದನ್ನುಅರುವತ್ತು ವರ್ಷದ ಮೆಹರ್‌ಬಾನಿ ಅಲಿ ನೆನಪಿಸಿಕೊಳ್ಳುತ್ತಿದ್ದಾರೆ. ಜಿತೇಂದರ್‌ ಕುಮಾರ್‌ ಕುಟುಂಬ ಈ ಜಾಗ ತೊರೆಯುವುದನ್ನು ಆ ಒತ್ತಡದ ಸನ್ನಿವೇಶದಲ್ಲೂ ತಡೆಯಲು ಪ್ರಯತ್ನಿಸಿದೆ. ಅವರು ಕೆಲವು ಸಮಯದ ಬಳಿಕ ಮರಳುವ ವಾಗ್ದಾನ ನೀಡಿದರು. ಅಂದಿನಿಂದ ಮುಸ್ಲಿಮರೇ ಈ ದೇವಾಲಯವನ್ನು ನೋಡಿಕೊಳ್ಳುತ್ತ ಬಂದಿರುವುದಾಗಿ ಅಲಿ ಹೇಳುತ್ತಾರೆ.

ಇಲ್ಲಿ 35 ಮುಸ್ಲಿಂ ಕುಟುಂಬಗಳಿವೆ. ಸುತ್ತ 20 ಹಿಂದೂ ಕುಟುಂಬಗಳಿದ್ದವು. 1970ರಲ್ಲಿ ದೇಗುಲ ನಿರ್ಮಿಸಲಾಗಿತ್ತು. ಆ ಹಿಂದೂ ಕುಟುಂಬ ವಾಪಸಾಗಲಿ ಎಂದು ಬಯಸುತ್ತಿದ್ದು, ದೇಗುಲವನ್ನು ಅವರ ವಶಕ್ಕೆ ನೀಡಲು ಇಚ್ಛಿಸುತ್ತೇನೆ ಎಂದು ಸ್ಥಳೀಯ ನಿವಾಸಿ ಜಮೀರ್‌ ಅಹ್ಮದ್‌ ಹೇಳುತ್ತಾರೆ. ಆದರೆ ದೇಗುಲದ ವಿಗ್ರಹವನ್ನು ಕುಟುಂಬ ಹೋಗುವಾಗ ಕೊಂಡೊಯ್ದಿದೆ. ಈಗ ದೇಗುಲ ಮಾತ್ರ ಇದೆ. ಹೀಗಾಗಿ ಬೀಗ ಹಾಕುತ್ತಿದ್ದೇವೆ ಎಂದು ಸ್ಥಳೀಯರು ಹೇಳಿದ್ದಾರೆ.

ಮುಜಫ್ಫರ್‌ನಗರದ ನಂಹೆದಾ ಗ್ರಾಮದಲ್ಲಿ ಮುಸ್ಲಿಮರೇ ಇಲ್ಲದಿದ್ದರೂ 59 ಹಿಂದೂವೊಬ್ಬರು 120 ವರ್ಷದ ಹಿಂದಿನ ಮಸೀದಿಯ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ ಎಂಬುದು ಕೂಡ ಗಮನಾರ್ಹ.

ಯಾರದೇ ಪ್ರಾರ್ಥನಾ ಸ್ಥಳಕ್ಕೆ ಹಾನಿಯಾದರೆ ಅವರಿಗೆ ನಮ್ಮ ಮೇಲಿರುವ ನಂಬಿಕೆ ಹೊರಟು ಹೋಗುತ್ತದೆ. ನಾವು ಹಾಗಾಗಲು ಬಿಡುವುದಿಲ್ಲ ಎಂದು ದೇಗುಲವನ್ನು ರಕ್ಷಿಸುತ್ತ ಬಂದಿರುವ ಮುಸ್ಲಿಮರು ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ