ಮುಜಫ್ಫರ್ನಗರ : ದಂಗೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ಆರು ಮಂದಿ ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಪೊಲೀಸರಿಗೆ ಆದೇಶಿಸಿದೆ. ದಂಗೆಗೆ ಪ್ರೇರೇಪಿಸಿ ಒಬ್ಬ ಯುವಕನನ್ನು ಹತ್ಯೆಗೈದಿರುವ ಆರೋಪ ಹೊತ್ತಿರುವ ಆರು ಆರೋಪಿಗಳ ವಿರುದ್ಧ ಹಲವು ಬಾರಿ ಅರೆಸ್ಟ್ ವಾರೆಂಟ್ ಹೊರಡಿಸಲಾಗಿತ್ತು. ಆದರೆ ಆರೋಪಿಗಳು ಶರಣಾಗಿರಲಿಲ್ಲ, ಬದಲಿಗೆ ತಪ್ಪಿಸಿಕೊಂಡು ತಿರುಗುತ್ತಿದ್ದ ಕಾರಣ ಕೋರ್ಟ್ ಖಡಕ್ ಆದೇಶ ನೀಡಿದೆ. ಪ್ರಕರಣದ ವಿಚಾರಣೆಯನ್ನು ಜೂನ್ 7ಕ್ಕೆ ಮುಂದೂಡಲಾಗಿದೆ. 2013ರ ಆ.27ರಂದು ಮುಜಫ್ಫರ್ನಗರದ ಕಾವಲ್ ಗ್ರಾಮದಲ್ಲಿ ಶಾಹನವಾಜ್ ಎಂಬ ಯುವಕನ್ನು ಹತ್ಯೆಗೈಯಲಾಗಿತ್ತು. ಪರಿಣಾಮವಾಗಿ ಜಿಲ್ಲೆಯಾದ್ಯಂತ ಭಾರಿ ದಂಗೆ ನಡೆದಿತ್ತು. 40 ಸಾವಿರ ಜನರ ಮನೆಗಳಿಗೆ ಹಾನಿ ಉಂಟಾಗಿತ್ತು. 60ಕ್ಕೂ ಅಧಿಕ ಮಂದಿ ದಂಗೆಗೆ ಬಲಿಯಾಗಿದ್ದರು.
ದಂಗೆ ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಆದೇಶ
ದಂಗೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ಆರು ಮಂದಿ ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಪೊಲೀಸರಿಗೆ ಆದೇಶಿಸಿದೆ.
Vijaya Karnataka 8 May 2019, 5:00 am