ಆ್ಯಪ್ನಗರ

ಮಗ ಹುತಾತ್ಮನಾದನೆಂದು ಕಣ್ಣೀರಿಡಲಾರೆ: ಮೃತ ಪೊಲೀಸ್‌ ಅಧಿಕಾರಿ ತಂದೆ ಮಾತು

'ನನ್ನ ಮಗ ದೇಶದ ಹಿತರಕ್ಷಣೆಗಾಗಿ ಹೋರಾಡಿ ಹುತಾತ್ಮನಾಗಿದ್ದಾನೆ, ಆತನ ಮರಣಕ್ಕೆ ನಾನು ಕಣ್ಣೀರಿಡಲಾರೆ' ಹೀಗೆಂದು ಭಾವನಾತ್ಮಕವಾಗಿ ಹೇಳಿದವರು ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಮಡಿದ ಸಬ್‌-ಇನ್ಸ್‌ಪೆಕ್ಟರ್‌ ಅಮಿತಾಬ್‌ ಮಲಿಕ್‌ ಅವರ ತಂದೆ.

TNN 14 Oct 2017, 7:25 pm
ಕೋಲ್ಕತ್ತಾ: 'ನನ್ನ ಮಗ ದೇಶದ ಹಿತರಕ್ಷಣೆಗಾಗಿ ಹೋರಾಡಿ ಹುತಾತ್ಮನಾಗಿದ್ದಾನೆ, ಆತನ ಮರಣಕ್ಕೆ ನಾನು ಕಣ್ಣೀರಿಡಲಾರೆ' ಹೀಗೆಂದು ಭಾವನಾತ್ಮಕವಾಗಿ ಹೇಳಿದವರು ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಮಡಿದ ಸಬ್‌-ಇನ್ಸ್‌ಪೆಕ್ಟರ್‌ ಅಮಿತಾಬ್‌ ಮಲಿಕ್‌ ಅವರ ತಂದೆ.
Vijaya Karnataka Web my son is a martyr i wont shed tears
ಮಗ ಹುತಾತ್ಮನಾದನೆಂದು ಕಣ್ಣೀರಿಡಲಾರೆ: ಮೃತ ಪೊಲೀಸ್‌ ಅಧಿಕಾರಿ ತಂದೆ ಮಾತು


ಗೂರ್ಖಾ ನಾಯಕ ಬಿಮಲ್‌ ಗುರುಂಗ್‌ ಮತ್ತು ಪೊಲೀಸರ ನಡುವೆ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಸಬ್‌-ಇನ್ಸ್‌ಪೆಕ್ಟರ್‌ ಅಮಿತಾಬ್‌ ಮಲಿಕ್‌ ಬಲಿಯಾಗಿದ್ದಾರೆ. ಘಟನೆಯಲ್ಲಿ ನಾಲ್ವರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಈ ಘಟನೆಗೂ ಮುನ್ನ ಇವರು ತಮ್ಮ ವೃತ್ತಿಯನ್ನೇ ಬದಲಾಯಿಸುವ ಚಿಂತನೆ ನಡೆಸಿದ್ದರು ಎಂದು ಅವರ ತಂದೆ ಸೌಮನ್‌ ಹೇಳಿದರು.

ನೀವು ಓರ್ವ ಪೊಲೀಸ್‌ ಅಧಿಕಾರಿ ತಂದೆಯೆಂದು ಹೇಳಿಕೊಳ್ಳಲು ಹೆಮ್ಮೆ ಪಡೆಬೇಕು. ಇನ್ಯಾವುದೋ ಕೆಲಸದ ಆಸೆಗೆ ಸೇನೆಯನ್ನು ಬಿಡುವುದಿಲ್ಲ ಎಂದು ಖಡಕ್‌ ಆಗಿಯೇ ತಂದೆಗೆ ಸಂದೇಶ ರವಾನಿಸಿದ್ದ ಅಮಿತಾಬ್‌ 2015ರಲ್ಲಿ ಡಾರ್ಜ್‌ಲಿಂಗ್‌ಗೆ ನೇಮಕಗೊಂಡಿದ್ದರು. ನನ್ನ ಮಗ ಹುತಾತ್ಮನಾಗಿದ್ದಾರೆ, ನಾನು ಆತನ ಮರಣಕ್ಕೆ ಕಣ್ಣೀರಿಡಲಾರೆ, ಆದರೆ ದೇಶ ಸೇವೆ ಮಾಡುತ್ತಾ ಮೃತಪಟ್ಟಿದ್ದಾನೆ ಎಂಬ ಹೆಮ್ಮೆಯಿದೆ ಎಂದು ಸೌಮನ್‌ ಭಾವುಕತೆಯಿಂದಲೇ ತಮ್ಮ ಮಾತುಗಳನ್ನು ಮತ್ತೆ ಮತ್ತೆ ಹೇಳುತ್ತಿದ್ದರು.

ಅಮಿತಾಬ್‌ ತಂದೆಗಿದ್ದಷ್ಟು ದುಃಖವನ್ನು ತಡೆದುಕೊಳ್ಳುವ ಶಕ್ತಿ ಅವರ ತಾಯಿ ಗಂಗೆಗಾಗಲೀ, ಕಿರಿಯ ಸಹೋದರ, ಅರುಣವ ಇಲ್ಲವೇ ಅಮಿತಾಬ್‌ ಅವರ ಸ್ನೇಹಿತರಿಗಾಗಲೀ ಇರಲಿಲ್ಲ. ಅಮಿತಾಬ್‌ ಮೃತವಾರ್ತೆಗೆ ಹುಟ್ಟೂರಾದ ಮಧ್ಯಾಮ್‌ಗ್ರಾಮದ ಶರತ್‌ ಕಾನನವೇ ಮೌನವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ