ಆ್ಯಪ್ನಗರ

ನೇಮ್‌ ಆಂಡ್‌ ಶೇಮ್‌: ಚಿನ್ಮಯಾನಂದ, ಸೆಂಗರ್‌ ಹೋರ್ಡಿಂಗ್‌ ಮೂಲಕ ಯೋಗಿಗೆ ಎಸ್‌ಪಿ ಟಕ್ಕರ್‌

ಉತ್ತರ ಪ್ರದೇಶದಲ್ಲಿ ಈಗ ‘ಹೋರ್ಡಿಂಗ್‌ ಸಮರ’ ಶುರುವಾಗಿದೆ. ಕುಲದೀಪ್‌ ಸಿಂಗ್‌ ಸೆಂಗಾರ್‌ ಮತ್ತು ಸ್ವಾಮಿ ಚಿನ್ಮಯಾನಂದ ಫೋಟೊಗಳನ್ನು ಒಳಗೊಂಡಿರುವ ಈ ಹೋರ್ಡಿಂಗ್‌ಗಳಲ್ಲಿ, ‘‘ಇವರು ನಮ್ಮ ರಾಜ್ಯದ ಹೆಣ್ಣು ಮಕ್ಕಳ ಮಾನ ದೋಚಿದ್ದಾರೆ. ಇವರ ಬಗ್ಗೆ ಹುಷಾರಾಗಿರಿ,’’ ಎಂದು ಬರೆಯಲಾಗಿದೆ.

Agencies 13 Mar 2020, 8:31 pm
ಲಖನೌ: ಉತ್ತರ ಪ್ರದೇಶದಲ್ಲಿ ಈಗ ‘ಹೋರ್ಡಿಂಗ್‌ ಸಮರ’ ಶುರುವಾಗಿದೆ. ಯೋಗಿ ಆದಿತ್ಯನಾಥ್‌ ಸರಕಾರ, ಸಿಎಎ ವಿರೋಧಿಗಳ ಪೋಸ್ಟರ್‌ಗಳನ್ನು ಲಖನೌ ಬೀದಿಗಳಲ್ಲಿ ಹಾಕಿದ ವಿವಾದ ಇನ್ನೂ ಬಿಸಿಯಾಗಿದೆ. ಇದರ ನಡುವೆಯೇ ಇದಕ್ಕೆ ಟಾಂಗ್‌ ನೀಡಲೆಂಬಂತೆ ಈ ಪೋಸ್ಟರ್‌ಗಳ ಪಕ್ಕದಲ್ಲೇ ವಿವಾದಿತ ಬಿಜೆಪಿ ನಾಯಕರ ಹೋರ್ಡಿಂಗ್‌ಗಳನ್ನು ಸಮಾಜವಾದಿ ಪಕ್ಷ ಹಾಕಿದೆ.
Vijaya Karnataka Web name and shame


ಅತ್ಯಾಚಾರ ಆರೋಪಕ್ಕೆ ಗುರಿಯಾಗಿರುವ ಮಾಜಿ ಬಿಜೆಪಿ ನಾಯಕ ಕುಲದೀಪ್‌ ಸಿಂಗ್‌ ಸೆಂಗರ್‌ ಮತ್ತು ಸ್ವಾಮಿ ಚಿನ್ಮಯಾನಂದ ಭಾವಚಿತ್ರವಿರುವ ಹೋರ್ಡಿಂಗ್‌ಗಳು ಸರಕಾರ ಹಾಕಿರುವ ಪೋಸ್ಟರ್‌ ಪಕ್ಕದಲ್ಲೇ ತಲೆ ಎತ್ತಿವೆ. ಇವುಗಳ ಮೇಲೆ ‘‘ರಾಜ್ಯದ ಹೆಣ್ಣುಮಕ್ಕಳು ಹುಷಾರಾಗಿರಿ,’’ ಎಂದು ಬರೆಯಲಾಗಿದೆ.

ಎಸ್ಪಿ ಮುಖಂಡ ಐ.ಪಿ. ಸಿಂಗ್‌ ಗುರುವಾರ ರಾತ್ರಿ ಈ ಹೋರ್ಡಿಂಗ್‌ಗಳನ್ನು ಹಾಕಿದ್ದಾರೆ.

‘‘ಪ್ರತಿಭನಾಕಾರರ ಖಾಸಗಿತನಕ್ಕೆ ಸರಕಾರ ಬೆಲೆ ನೀಡಿಲ್ಲ. ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಆದೇಶಿಸಿದರೂ ಹೋರ್ಡಿಂಗ್‌ ತೆರವುಗೊಳಿಸಿಲ್ಲ. ಹೀಗಾಗಿ ನಾನೂ ಸಹ ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲವು ಕ್ರಿಮಿನಲ್‌ಗಳ ಪೋಸ್ಟರ್‌ಗಳನ್ನು ಹಾಕಿಸಿದ್ದೇನೆ,’’ ಎಂದು ಎಸ್ಪಿ ರಾಷ್ಟ್ರೀಯ ವಕ್ತಾರರೂ ಆಗಿರುವ ಐ.ಪಿ. ಸಿಂಗ್‌ ಸಮರ್ಥಿಸಿಕೊಂಡಿದ್ದಾರೆ.

ಕುಲದೀಪ್‌ ಸಿಂಗ್‌ ಸೆಂಗಾರ್‌ ಮತ್ತು ಸ್ವಾಮಿ ಚಿನ್ಮಯಾನಂದ ಫೋಟೊಗಳನ್ನು ಒಳಗೊಂಡಿರುವ ಈ ಹೋರ್ಡಿಂಗ್‌ಗಳಲ್ಲಿ, ‘‘ಇವರು ನಮ್ಮ ರಾಜ್ಯದ ಹೆಣ್ಣು ಮಕ್ಕಳ ಮಾನ ದೋಚಿದ್ದಾರೆ. ಇವರ ಬಗ್ಗೆ ಹುಷಾರಾಗಿರಿ,’’ ಎಂದು ಬರೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ