ಆ್ಯಪ್ನಗರ

ಮೋದಿಯೇ ಮತ್ತೆ ಪ್ರಧಾನಿ ಆದರೆ ಒಳಿತು: ಇನ್ಫಿ ಮೂರ್ತಿ

ವಿಜಯ ಕರ್ನಾಟಕದ ಸಹೋದರ ಸಂಸ್ಥೆ ಎಕನಾಮಿಕ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಇನ್ಫೋಸಿಸ್‌ ಸಹ ಸ್ಥಾಪಕ ಎನ್‌.ಆರ್‌ ನಾರಾಯಣ ಮೂರ್ತಿ ಅವರು, ಮೋದಿ ಅವರು ಭ್ರಷ್ಟಾಚಾರ ನಿವಾರಣೆಗಾಗಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೊಗಳಿದ್ದಾರೆ.

Vijaya Karnataka Web 14 Nov 2018, 10:36 pm
ಹೊಸದಿಲ್ಲಿ: ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಮುಂದುವರಿಯುವುದು ದೇಶಕ್ಕೆ ಒಳಿತು ಎಂದು ಇನ್ಫೋಸಿಸ್‌ ಸಹಸ್ಥಾಪಕ ಎನ್‌.ಆರ್‌ ನಾರಾಯಣ ಮೂರ್ತಿ ಪ್ರತಿಪಾದಿಸಿದ್ದಾರೆ.
Vijaya Karnataka Web narayana murthy


ವಿಜಯ ಕರ್ನಾಟಕದ ಸಹೋದರ ಸಂಸ್ಥೆ ಎಕನಾಮಿಕ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು, ಮೋದಿ ಅವರು ಭ್ರಷ್ಟಾಚಾರ ನಿವಾರಣೆಗಾಗಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೊಗಳಿದ್ದಾರೆ.

ಆರ್‌ಬಿಐ ಮತ್ತು ಸರರಕಾರದ ನಡುವಿನ ಸಂಘರ್ಷದ ಬಗ್ಗೆ ಮಾತನಾಡಿದ ಅವರು ಸಂಸ್ಥೆಗಳು ಪ್ರಬಲವಾಗಿರಬೇಕು, ದುರ್ಬಲಗೊಳಿಸಬಾರದು ಎಂದಿದ್ದಾರೆ.

* ಪ್ರಧಾನಿ ಮೋದಿ ಮತ್ತು ಸಚಿವರು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕೇಂದ್ರದ ಮಟ್ಟದಲ್ಲಿ ತುಂಬ ಪ್ರಯತ್ನಪಡುತ್ತಿದ್ದಾರೆ.

* ಕೇಂದ್ರ ಸರಕಾರದ ವಿರುದ್ಧ ಯಾವುದೇ ಭ್ರಷ್ಟಾಚಾರದ ದೂರು ಕೇಳಿಬಂದ ಹಾಗಿಲ್ಲ.

* ಮೋದಿ ಅವರು ಆರ್ಥಿಕ ಪ್ರಗತಿಯನ್ನು ಧ್ಯೇಯವಾಗಿಟ್ಟುಕೊಂಡ ಸರಕಾರವನ್ನು ಮುನ್ನಡೆಸುತ್ತಿದ್ದಾರೆ.

* ಸ್ವಚ್ಛ ಭಾರತ, ಜಿಎಸ್‌ಟಿ ಸರಿಯಾಗಿ ಅನುಷ್ಠಾನವಾಗದಿದ್ದರೆ ಅದಕ್ಕೆ ಜನರ ಮನೋಸ್ಥಿತಿ, ಅಧಿಕಾರಿಗಳು ಹೊಣೆ, ಮೋದಿಯಲ್ಲ.

* ದೇಶದ ಅಭಿವೃದ್ಧಿಯೇ ಧ್ಯೇಯವಾಗಿ ಹೊಂದಿರುವ, ಶಿಸ್ತು, ಸ್ವಚ್ಛತೆ, ಆರ್ಥಿಕ ಅಭಿವೃದ್ಧಿಯ ಗುರಿ ಹೊತ್ತ ನಾಯಕನನ್ನು ಹೊಂದಿರುವುದು ಒಳ್ಳೆಯದು. ಈ ಸರಕಾರವೇ ಮುಂದುವರಿಯುವುದು ಒಳ್ಳೆಯದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ