ಆ್ಯಪ್ನಗರ

ಪದ್ಮಶ್ರೀ ಪುರಸ್ಕೃತ ಮೊದಲ ತೃತೀಯ ಲಿಂಗಿ ನರ್ತಕಿ ನಟರಾಜ್‌

ಸಮಾಜದಿಂದ ತೃತೀಯ ಲಿಂಗಿ ಎಂಬ ಕಾರಣಕ್ಕೆ ತಿರಸ್ಕೃತಗೊಂಡಿದ್ದ ನೃತ್ಯಗಾರ್ತಿ ನರ್ತಕಿ ನಟರಾಜ್‌ ರಾಷ್ಟ್ರವೇ ಗುರುತಿಸುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಪಡೆಯುವ ಮೂಲಕ ಸಾಧಕರಿಗೆ ಸ್ಪೂರ್ತಿಯಾಗಿದ್ದಾರೆ.

Indiatimes 27 Jan 2019, 3:24 pm
ಚೆನ್ನೈ: ತಮಿಳುನಾಡಿನ ಡ್ಯಾನ್ಸರ್‌ ನರ್ತಕಿ ನಟರಾಜ್‌ ಅವರು ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿಷ್ಠಿತ ನಾಗರಿಕ ಪ್ರಶಸ್ತಿ ಪಡೆದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ನರ್ತಕಿ ನಟರಾಜ್‌ ಪಾತ್ರರಾಗಿದ್ದಾರೆ.
Vijaya Karnataka Web Nartaki Nataraj


ಮಧುರೈನಲ್ಲಿ ಜನಿಸಿದ ನರ್ತಕಿ ಗುರುಗಳಾದ ಕೆಪಿ ಕಿಟ್ಟಪ್ಪ ಪಿಲೈ ಅವರಿಂದ ನೃತ್ಯ ಅಭ್ಯಾಸ ನಡೆಸಿದರು. ತಂಜೋರ್‌ ಕ್ವಾರ್ಟೆಟ್‌ ಆಫ್‌ ಭರತನಾಟ್ಯಮ್‌ ಶಾಲೆಯನ್ನು ಆರಂಭಿಸಿದರು.


ನೃತ್ಯದ ಮೇಲೆ ಅಪಾರ ಪ್ರೀತಿ ಹೊಂದಿದ್ದ ನರ್ತಕಿ ತೃತೀಯ ಲಿಂಗಿ ಎಂಬ ಕಾರಣಕ್ಕೆ ಸಮಾಜದಿಂದ ತಿರಸ್ಕೃತರಾಗಿದ್ದರು. ಆದರೆ ಛಲ ಬಿಡದೆ ಸಾಧನೆ ಮಾಡಿದ ನರ್ತಕಿ ರಾಷ್ಟ್ರವೇ ಗುರುತಿಸುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ.

ವಿಶ್ವಾದ್ಯಂತ ಕಾರ್ಯಕ್ರಮ ನಡೆಸಿಕೊಟ್ಟಿರುವ ನರ್ತಕಿ ಅವರ ಸಾಧನೆಯನ್ನು ಗುರುತಿಸಿದ ತಮಿಳುನಾಡು ಸರಕಾರ ಕಳೆದ ವರ್ಷ ಅವರ ಬಗೆಗಿನ ಪಾಠವನ್ನು ಶಾಲೆಯ ಪುಸ್ತಕಗಳಲ್ಲಿ ಅಳವಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ