ಆ್ಯಪ್ನಗರ

ಪುಲ್ವಾಮಾ ಉಗ್ರ ದಾಳಿ ಪ್ರತೀಕಾರ ಇನ್ನೂ ಇದೆ: ಮತ್ತಷ್ಟು ಸರ್ಜಿಕಲ್‌ ಸ್ಟ್ರೈಕ್‌ ಕುರಿತು ಪಾಕ್‌ಗೆ ಎಚ್ಚರಿಕೆ ಕೊಟ್ಟ ಅಜಿತ್‌ ದೋವಲ್‌

ಪುಲ್ವಾಮಾ ದಾಳಿಯ ಪ್ರತೀಕಾರ ಇನ್ನೂ ಮುಗಿದಿಲ್ಲ. ಉಗ್ರರು, ಉಗ್ರ ನೆಲೆಗಳನ್ನು ಸಂಪೂರ್ಣ ನಾಶವಾಗುವವರೆಗೂ ಸರ್ಜಿಕಲ್‌ ಸ್ಟ್ರೈಕ್‌ ಮುಂದುವರಿಯಲಿದೆ. ಯಾವ ವೇಳೆ, ಯಾವ ರೀತಿಯ ದಾಳಿ ನಡೆಸಬೇಕು ಎಂಬುದನ್ನು ನಿರ್ಧರಿಸಲಿದ್ದೇವೆ ಎಂದು ಅವರು ತಿಳಿಸಿದರು.

Vijaya Karnataka Web 19 Mar 2019, 4:24 pm
ಗುರುಗಾಂವ್‌: ಜಮ್ಮು ಕಾಶ್ಮೀರದ ಪುಲ್ವಾಮಾ ಬಳಿ ಉಗ್ರ ದಾಳಿಯಲ್ಲಿ 40ಕ್ಕೂ ಹೆಚ್ಚು ವೀರ ಯೋಧರು ಹುತಾತ್ಮರಾದ ಘಟನೆಯನ್ನು ನಾವಿನ್ನೂ ಮರೆತಿಲ್ಲ. ಇದಕ್ಕೆ ಇನ್ನೂ ತಕ್ಕ ಪ್ರತೀಕಾರ ತೆಗೆದುಕೊಳ್ಳುತ್ತೇವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web ಅಜಿತ್‌ ದೋವಲ್‌
ಅಜಿತ್‌ ದೋವಲ್


ಕೇಂದ್ರೀಯ ಅರೆ ಸೇನಾ ಮೀಸಲು ಪಡೆ (ಸಿಆರ್‌ಪಿಎಫ್‌)ಯ 80ನೇ ವಾರ್ಷಿಕೋತ್ಸವದಲ್ಲಿ ಯೋಧರನ್ನು ಉದ್ದೇಶಿಸಿ ಅಜಿತ್‌ ದೋವಲ್‌ ಮಾತನಾಡಿದರು.

ಪುಲ್ವಾಮಾದಲ್ಲಿ ಯೋಧರ ಬಲಿದಾನವನ್ನು ನಾವು ಎಂದೂ ಮರೆಯುವುದಿಲ್ಲ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಇದರ ಬಗ್ಗೆ ಸಾಕಷ್ಟು ನೋವು ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ಅಜಿತ್‌ ದೋವಲ್‌ ತಿಳಿಸಿದರು.

ಪುಲ್ವಾಮಾ ದಾಳಿಯ ಪ್ರತೀಕಾರ ಇನ್ನೂ ಮುಗಿದಿಲ್ಲ. ಉಗ್ರರು, ಉಗ್ರ ನೆಲೆಗಳನ್ನು ಸಂಪೂರ್ಣ ನಾಶವಾಗುವವರೆಗೂ ಸರ್ಜಿಕಲ್‌ ಸ್ಟ್ರೈಕ್‌ ಮುಂದುವರಿಯಲಿದೆ. ಯಾವ ವೇಳೆ, ಯಾವ ರೀತಿಯ ದಾಳಿ ನಡೆಸಬೇಕು ಎಂಬುದನ್ನು ನಿರ್ಧರಿಸಲಿದ್ದೇವೆ ಎಂದು ಅವರು ತಿಳಿಸಿದರು.

ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳನ್ನು ನಾಶಪಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಕ್ರಮ ಕೈಗೊಂಡರೂ ಸರಿ, ಇಲ್ಲವೇ ನಾವೇ ನಮ್ಮ ಕೆಲಸ ಮಾಡಬೇಕಾಗುತ್ತದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರರು ಹೇಳಿದರು.

ಒಂದು ವೇಳೆ ದಾಳಿ ನಡೆಸಲೇಬೇಕಾದರೆ ಯಾವ ರೀತಿ ಹೇಗೆ ಎಂಬ ನಿರ್ಧಾರನವನ್ನು ಕೈಗೊಳ್ಳಲು ಕೇಂದ್ರ ಸರಕಾರ ಅತ್ಯಂಥ ಸಮರ್ಥವಾಗಿದೆ. ಕೇಂದ್ರದಲ್ಲಿರುವ ನಾಯಕರೂ ದೃಢ ಹಾಗೂ ಕೆಚ್ಚೆದೆಯ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮೋದಿ ಆಡಳಿತದ ಬಗ್ಗೆ ಅಜಿತ್‌ ದೋವಲ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ