ಉತ್ತರಾಖಂಡದ ಮುಖ್ಯಮಂತ್ರಿಯಾಗಲಿದ್ದಾರೆ 19 ವರ್ಷದ ಬಾಲಕಿ
ಜನವರಿ 24ರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಉತ್ತರಾಖಂಡ್ ಸರ್ಕಾರ ನಿರ್ಧರಿಸಿದ್ದು, 19 ವರ್ಷದ ಬಾಲಕಿಯನ್ನು ಒಂದು ದಿನದ ಮಟ್ಟಿಗೆ ಸಿಎಂ ಆಗಿ ಮಾಡಲಾಗಿದೆ.
Vijaya Karnataka Web 24 Jan 2021, 9:39 am
ಹೈಲೈಟ್ಸ್:
- ಹರಿದ್ವಾರದ ಸೃಷ್ಠಿ ಗೋಸ್ವಾಮಿ ಒಂದು ದಿನದ ಮಟ್ಟಿಗೆ ಸಿಎಂ
- ಬಾಲಕಿಯರ ಸಬಲೀಕರಣದ ಸಂದೇಶ ರವಾನೆಗೆ ಈ ಯೋಜನೆ
- ಈ ಥರ ಆಚರಣೆ ದೇಶದಲ್ಲೇ ಮೊದಲು
ಹರಿದ್ವಾರ: 19 ವರ್ಷದ ವಿದ್ಯಾರ್ಥಿನಿಯನ್ನು ಒಂದು ದಿನದ ಮಟ್ಟಿಗೆ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಉತ್ತಾರಾಖಂಡ್ ಸರ್ಕಾರ ಜನವರಿ 24ರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ. 19 ವರ್ಷದ ಸೃಷ್ಠಿ ಗೋಸ್ವಾಮಿಗೆ ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಅವಕಾಶ ಲಭಿಸಿದೆ. ಅವರು ಭಾನುವಾರ ನಡೆಯಲಿರುವ ವಿಶೇಷ ಮಕ್ಕಳ ಅಧಿವೇಶನದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಮಕ್ಕಳ ಅಧಿವೇಶನವನ್ನು ಉದ್ದೇಶಿಸಿ ಸೃಷ್ಠಿ ಭಾಷಣ ಮಾಡಲಿದ್ದು, ಮಹಿಳಾ ಸಬಲೀಕರಣ ಸಂದೇಶ ರವಾನಿಸುವ ಸಲುವಾಗಿ ಇಂಥ ವಿನೂತನ ಪ್ರುಯತ್ನಕ್ಕೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸಮ್ಮತಿಸಿದ್ದಾರೆ. ಹೆಣ್ಣು ಮಕ್ಕಳ ದಿನದಂದು ಓರ್ವ ಬಾಲಕಿಯನ್ನು ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿಯನ್ನಾಗಿ ಮಾಡುತ್ತಿರುವುದು ಇದೇ ಮೊದಲು.
ಕೃಷಿ ವಿಜ್ಞಾನ ವಿದ್ಯಾರ್ಥಿಯಾಗಿರುವ ಸೃಷ್ಠಿ ಹರಿದ್ವಾರ ಜಿಲ್ಲೆಯ ದೌಲತ್ಪುರ ಗ್ರಾಮದ ನಿವಾಸಿ. ತಂದೆಗೆ ಸಣ್ಣ ಕಿರಾಣಿ ಅಂಗಡಿ ಇದ್ದು, ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಹಿಂದೆ 2018ರಲ್ಲಿ ಉತ್ತರಾಖಂಡ್ ಮಕ್ಕಳ ಸದನದ ಶಾಸಕಿಯಾಗಿಯೂ ಸೃಷ್ಠಿ ಆಯ್ಕೆಯಾಗಿದ್ದರು. 2019ರಲ್ಲಿ ಥಾಯ್ಲಂಡ್ನಲ್ಲಿ ನಡೆದ ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ನಾಯಕತ್ವ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು.
ಬಾಲಕಿಯರ ಶಿಕ್ಷಣ ಹಾಗೂ ಸಬಲೀಕರಣಕ್ಕೆ ಕೆಲಸ ಮಾಡುತ್ತಿರುವ ಸೃಷ್ಠಿ, ಈ ಬಗ್ಗೆ ಕೆಲಸ ಮಾಡುವ ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾಳೆ. ಶಿಕ್ಷಣದತ್ತ ಬಾಲಕಿಯರನ್ನು ಸೆಳೆಯಲು ಹಲವು ಭಾಷಣಗಳನ್ನೂ ಮಾಡಿದ್ದಾಳೆ.
ಮಕ್ಕಳ ಅಧಿವೇಶನವನ್ನು ಉದ್ದೇಶಿಸಿ ಸೃಷ್ಠಿ ಭಾಷಣ ಮಾಡಲಿದ್ದು, ಮಹಿಳಾ ಸಬಲೀಕರಣ ಸಂದೇಶ ರವಾನಿಸುವ ಸಲುವಾಗಿ ಇಂಥ ವಿನೂತನ ಪ್ರುಯತ್ನಕ್ಕೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸಮ್ಮತಿಸಿದ್ದಾರೆ. ಹೆಣ್ಣು ಮಕ್ಕಳ ದಿನದಂದು ಓರ್ವ ಬಾಲಕಿಯನ್ನು ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿಯನ್ನಾಗಿ ಮಾಡುತ್ತಿರುವುದು ಇದೇ ಮೊದಲು.
ಕೃಷಿ ವಿಜ್ಞಾನ ವಿದ್ಯಾರ್ಥಿಯಾಗಿರುವ ಸೃಷ್ಠಿ ಹರಿದ್ವಾರ ಜಿಲ್ಲೆಯ ದೌಲತ್ಪುರ ಗ್ರಾಮದ ನಿವಾಸಿ. ತಂದೆಗೆ ಸಣ್ಣ ಕಿರಾಣಿ ಅಂಗಡಿ ಇದ್ದು, ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಹಿಂದೆ 2018ರಲ್ಲಿ ಉತ್ತರಾಖಂಡ್ ಮಕ್ಕಳ ಸದನದ ಶಾಸಕಿಯಾಗಿಯೂ ಸೃಷ್ಠಿ ಆಯ್ಕೆಯಾಗಿದ್ದರು. 2019ರಲ್ಲಿ ಥಾಯ್ಲಂಡ್ನಲ್ಲಿ ನಡೆದ ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ನಾಯಕತ್ವ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು.
ಬಾಲಕಿಯರ ಶಿಕ್ಷಣ ಹಾಗೂ ಸಬಲೀಕರಣಕ್ಕೆ ಕೆಲಸ ಮಾಡುತ್ತಿರುವ ಸೃಷ್ಠಿ, ಈ ಬಗ್ಗೆ ಕೆಲಸ ಮಾಡುವ ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾಳೆ. ಶಿಕ್ಷಣದತ್ತ ಬಾಲಕಿಯರನ್ನು ಸೆಳೆಯಲು ಹಲವು ಭಾಷಣಗಳನ್ನೂ ಮಾಡಿದ್ದಾಳೆ.