ಆ್ಯಪ್ನಗರ

ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಸ್ವಾಮಿ ವಿರೋಧ

ನ್ಯಾಷನಲ್ ಹೇರಾಲ್ಡ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧದ ಮೇಲ್ಮನವಿಗೆ ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ವಿರೋಧಿಸಿದ್ದಾರೆ.

ಏಜೆನ್ಸೀಸ್ 16 Mar 2016, 4:27 am
ಹೊಸದಿಲ್ಲಿ: ನ್ಯಾಷನಲ್ ಹೇರಾಲ್ಡ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧದ ಮೇಲ್ಮನವಿಗೆ ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ವಿರೋಧಿಸಿದ್ದಾರೆ.
Vijaya Karnataka Web national herald case swamy opposes trial court order
ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಸ್ವಾಮಿ ವಿರೋಧ


ಕೆಳ ನ್ಯಾಯಾಲಯ ಹಣಕಾಸು ಹಾಗೂ ಕಾರ್ಪೋರೆಟ್ ವ್ಯವಹಾರಗಳು ಮತ್ತು ಆದಾಯ ತೆರಿಗೆ ಹಾಗೂ ಇತರ ಇಲಾಖೆಗಳು ನೀಡಿದ ದಾಖಲೆಗಳು ಹಾಗೂ ವಿಚಾರಣಾ ನ್ಯಾಯಾಲಯದ ಆದೇಶ ಬದಿಗೊತ್ತಿ ಮೇಲ್ಮನವಿ ಸಲ್ಲಿಸಿರುವುದನ್ನು ತಾವು ವಿರೋಧಿಸುವುದಾಗಿ ದಿಲ್ಲಿ ಹೈಕೋರ್ಟ್‌ನಲ್ಲಿ ಮಂಗಳವಾರ ಹೇಳಿದರು. ನ್ಯಾಯಮೂರ್ತಿ ಪಿ.ಎಸ್. ತೇಜಿ ಅವರ ಎದುರು ಹೇಳಿಕೆ ನೀಡಿದ ಅವರು, ಎಐಸಿಸಿ ಖಜಾಂಚಿ ಮೋತಿಲಾಲ್ ವೋರಾ ಹಾಗೂ ಯಂಗ್ ಇಂಡಿಯಾ ಸಲ್ಲಿಸಿರುವ ಅರ್ಜಿಗೆ ಯಾವುದೇ ಉತ್ತರ ನೀಡುವುದಿಲ್ಲ ಎಂದರು.



ಇದು ಕಾನೂನಿನ ವಿಷಯವಾಗಿದ್ದು,ಅರ್ಜಿದಾರರಿಗೆ ಅಲ್ಲಿ ಯಾವುದೇ ಸ್ಥಾನ ಇಲ್ಲದೇ ಇರುವುದರಿಂದ ಹಾಗೂ ನ್ಯಾಯಾಲಯ ನೀಡಿರುವ ತೀರ್ಪುಗಳಿವೆ ಹಾಗಾಗಿ ನಾನು ಯಾವುದೇ ಉತ್ತರ ದಾಖಲಿಸಲು ಹೋಗುವುದಿಲ್ಲ ಎಂದು ನ್ಯಾಯಾಲಯದೆದುರು ಹೇಳಿದರು. ಇದೇ ವೇಳೆ, ದಿಲ್ಲಿ ಹೈಕೋರ್ಟ್ ಪೀಠ ಸ್ವಾಮಿ ಅವರಿಗೆ ನೋಟಿಸ್ ಜಾರಿ ಮಾಡಿತು, ಅಲ್ಲದೇ ಏಪ್ರಿಲ್ ನಾಲ್ಕಕ್ಕೆ ಉತ್ತರಿಸುವಂತೆ ಆದೇಶಿಸಿತು. ಜನವರಿ 11 ರಂದು ವಿಚಾರಣಾ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗಳಿಗೆ ವೋರಾ ಹಾಗೂ ಯಂಗ್ ಇಂಡಿಯಾ ತಡೆಯಾಜ್ಞೆ ತರಲು ಯತ್ನಿಸಿತ್ತು.

ಇದಕ್ಕೂ ಮೊದಲು ನಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪಿಗಳಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇತರರು ಡಿಸೆಂಬರ್ 19, 2015 ರಂದು ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ