ಆ್ಯಪ್ನಗರ

ಫೆ.25ಕ್ಕೆ ರಾಷ್ಟ್ರೀಯ ಯುದ್ಧ ಸ್ಮಾರಕ ಲೋಕಾರ್ಪಣೆ: ಪ್ರಧಾನಿ ಮೋದಿ

ಭಾರತೀಯ ಯೋಧರ ಸೇವೆ, ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಮುಂಚೂಣಿಯಲ್ಲಿದೆ. ನಮ್ಮ ಪಡೆಗಳಿಗೆ ಯಾರೂ ಸರಿಸಾಟಿ ಇಲ್ಲ. ಯೋಧರ, ಧೈರ್ಯ, ಸಾಹಸ, ತ್ಯಾಗ, ಬಲಿದಾನ ಸದಾ ಸ್ಮರಣೀಯ ಎಂದು ಮೋದಿ ಹೇಳಿದರು.

Vijaya Karnataka Web 24 Feb 2019, 6:39 pm
ಹೊಸದಿಲ್ಲಿ: ದೇಶದ ಸೈನಿಕರನ್ನು ಗುರುತಿಸುವ ಹಾಗೂ ಅವರ ಸೇವೆಯನ್ನು ಸ್ಮರಿಸುವ ಕಾರ್ಯದಲ್ಲಿ ಎನ್‌ಡಿಎ ಸರಕಾರ ಮುಂಚೂಣಿಯಲ್ಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
Vijaya Karnataka Web ಮನ್‌ ಕಿ ಬಾತ್‌
ಮನ್‌ ಕಿ ಬಾತ್‌


ತಮ್ಮ 53ನೇ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಸೈನಿಕರು ಮತ್ತು ಅವರ ಸೇವೆ, ತ್ಯಾಗ, ಬಲಿದಾನದ ಕುರಿತು ಮೋದಿ ಬೆಳಕು ಚೆಲ್ಲಿದರು.

ಪುಲ್ವಾಮಾ ದಾಳಿಯ ನಂತರ ಪ್ರಧಾನಿ ಮೋದಿ ನಡೆಸಿಕೊಟ್ಟ ಮೊದಲ ಮನ್‌ ಕಿ ಬಾತ್‌ ಇದಾಗಿದೆ. ಹೀಗಾಗಿ ಸೈನಿಕರ ಬಗ್ಗೆ ಮೋದಿ ಸ್ವಲ್ಪ ಹೆಚ್ಚು ಗಮನ ಹರಿಸಿದರು.

ಅಲ್ಲದೇ ಈ ವರ್ಷದಲ್ಲಿ ಮೋದಿ ನಡೆಸಿಕೊಟ್ಟ ಎರಡನೇ ಮನ್‌ ಕಿ ಬಾತ್‌ ಆಗಿದೆ.

ಹೊಸದಿಲ್ಲಿಯ ಇಂಡಿಯಾ ಗೇಟ್‌ ಹಾಗೂ ಅಮರ್‌ ಜವಾನ್‌ ಜ್ಯೋತಿ ಸಮೀಪ ಯುದ್ಧ ಸ್ಮಾರಕ ನಿರ್ಮಿಸಲಾಗಿದೆ. ಅದನ್ನು ಫೆಬ್ರವರಿ 25ರಂದು ಲೋಕಾರ್ಪಣೆ ಮಾಡಲಾಗುವುದು ಎಂದರು.

ಭಾರತೀಯ ಯೋಧರ ಸೇವೆ, ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಮುಂಚೂಣಿಯಲ್ಲಿದೆ. ನಮ್ಮ ಪಡೆಗಳಿಗೆ ಯಾರೂ ಸರಿಸಾಟಿ ಇಲ್ಲ. ಯೋಧರ, ಧೈರ್ಯ, ಸಾಹಸ, ತ್ಯಾಗ, ಬಲಿದಾನ ಸದಾ ಸ್ಮರಣೀಯ ಎಂದು ಮೋದಿ ಹೇಳಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿಯನ್ನು ಮರು ಸ್ಥಾಪಿಸುವುಲ್ಲಿ ಭಾರತೀಯ ಯೋಧರ ಪಾತ್ರ ಮಹತ್ವದ್ದಾಗಿದೆ ಎಂದು ಮೋದಿ ಹೇಳಿದರು.

ಉಗ್ರರನ್ನು ಮಟ್ಟ ಹಾಕುವಲ್ಲಿಯೂ ನಮ್ಮ ಯೋಧರು ಯಶಸ್ವಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ನಮ್ಮ ಸಿಆರ್‌ಪಿಎಫ್‌ನ 40ಕ್ಕೂ ಹೆಚ್ಚು ಯೋಧರು ಉಗ್ರರ ದುಷ್ಕೃತ್ಯಕ್ಕೆ ಬಲಿಯಾಗಿದ್ದಾರೆ. ಇದಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ಪ್ರತೀಕಾರ ತೀರಿಸಿಕೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ನನಗೂ ಈ ಬಗ್ಗೆ ಸಹಮತ ಇದೆ ಎಂದರು.

ಯೋಧರ ಸೇವೆಯನ್ನು ಗುರುತಿಸುವ ನಿಟ್ಟಿನಲ್ಲಿ ನಮ್ಮಲ್ಲಿ ಯುದ್ಧ ಸ್ಮಾರಕಗಳಿರಲಿಲ್ಲ. ಈಗ ನಮ್ಮ ಸರಕಾರ ಈ ಕೊರತೆಯನ್ನು ನೀಗಿಸಿದೆ. ರಾಷ್ಟ್ರೀಯ ಯುದ್ಧ ಸ್ಮಾರಕ ಈಗ ಹೊಸದಿಲ್ಲಿಯಲ್ಲಿ ತಲೆ ಎತ್ತಿದೆ. ಅದನ್ನು ಫೆಬ್ರವರಿ 25ರಂದು ಸಮರ್ಪಿಸಲಾಗುವುದು ಎಂದು ನರೇಂದ್ರ ಮೋದಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ