ಮುಂಬಯಿ: ಉರಾನ್ ಪ್ರದೇಶದಲ್ಲಿನ ಸೇತುವೆಯ ಕಂಬವೊಂದರ ಮೇಲೆ ಉಗ್ರ ಸಂಘಟನೆ ಐಸಿಸ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬರಹಗಳು ಮಂಗಳವಾರ ಪತ್ತೆಯಾಗಿವೆ. ಐಸಿಸ್ ಮುಖ್ಯಸ್ಥ ಬಾಗ್ದಾದಿ, ಉಗ್ರ ಹಫೀಜ್ ಸಯೀದ್ ಹೆಸರಿನ ಜತೆಗೆ ಖೊಪ್ಟೆ ಸೇತುವೆ ಮೇಲೆ ರಾಕೆಟ್ ಉಡಾವಣೆ ಚಿತ್ರಗಳನ್ನು ಕೆತ್ತಲಾಗಿದೆ. ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, ಕ್ರಿಕೆಟಿಗ ಎಂಎಸ್ ಧೋನಿ ಹೆಸರಿನ ಮೊದಲ ಪದಗಳ ಉಲ್ಲೇಖವಿದೆ ಎಂದು ವರದಿಯಾಗಿದೆ. ಎನ್ಐಎ, ಐಬಿ, ಮಹಾರಾಷ್ಟ್ರ ಉಗ್ರ ನಿಗ್ರಹ ಪಡೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರದೇಶದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
ಮುಂಬಯಿ ಸೇತುವೆ ಮೇಲೆ ಐಸಿಸ್ ಬರಹ!
ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, ಕ್ರಿಕೆಟಿಗ ಎಂಎಸ್ ಧೋನಿ ಹೆಸರಿನ ಮೊದಲ ಪದಗಳ ಉಲ್ಲೇಖವಿದೆ ಎಂದು ವರದಿಯಾಗಿದೆ.
PTI 5 Jun 2019, 5:00 am