ಆ್ಯಪ್ನಗರ

ನಮ್ಮದು ರಾಜಕೀಯ ಪಕ್ಷವಲ್ಲ, ವೇದಿಕೆ: ಸಿಧು

ಅವಾಜ್‌ ಇ ಪಂಜಾಬ್‌ ಒಂದು ರಾಜಕೀಯ ಪಕ್ಷವಲ್ಲ. ಅದು ಪಂಜಾಬ್‌ನ ಒಳಿತಿಗಾಗಿ ದುಡಿಯುವ ರಾಜಕೀಯ ವೇದಿಕೆಯಾಗಿದ್ದು, ಸಮಾನ ಮನಸ್ಕ ಪಕ್ಷಗಳಿಗೆ ಈ ವೇದಿಕೆಗೆ ಸ್ವಾಗತವಿದೆ ಎಂದು ಮಾಜಿ ಕ್ರಿಕೆಟಿಗ ಹಾಲಿ ರಾಜಕಾರಣಿ ನವಜೋತ್‌ ಸಿಂಗ್‌ ಸಿಧು ಹೇಳಿದ್ದಾರೆ.

ಏಜೆನ್ಸೀಸ್ 22 Sep 2016, 4:32 am
ಅಮೃತಸರ: ಅವಾಜ್‌ ಇ ಪಂಜಾಬ್‌ ಒಂದು ರಾಜಕೀಯ ಪಕ್ಷವಲ್ಲ. ಅದು ಪಂಜಾಬ್‌ನ ಒಳಿತಿಗಾಗಿ ದುಡಿಯುವ ರಾಜಕೀಯ ವೇದಿಕೆಯಾಗಿದ್ದು, ಸಮಾನ ಮನಸ್ಕ ಪಕ್ಷಗಳಿಗೆ ಈ ವೇದಿಕೆಗೆ ಸ್ವಾಗತವಿದೆ ಎಂದು ಮಾಜಿ ಕ್ರಿಕೆಟಿಗ ಹಾಲಿ ರಾಜಕಾರಣಿ ನವಜೋತ್‌ ಸಿಂಗ್‌ ಸಿಧು ಹೇಳಿದ್ದಾರೆ. ಈ ಮೂಲಕ ಅವರು ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿ ಜತೆಗಿನ ಸಂಧಾನದ ಬಾಗಿಲನ್ನು ತೆರೆದಿರಿಸಿದ್ದಾರೆ.
Vijaya Karnataka Web navjot singh sidhu
ನಮ್ಮದು ರಾಜಕೀಯ ಪಕ್ಷವಲ್ಲ, ವೇದಿಕೆ: ಸಿಧು


ಆಮ್‌ ಆದ್ಮಿ ಪಕ್ಷ ಮತ್ತು ಆವಾಜ್‌ ಇ ಪಂಜಾಬ್‌ ಜತೆಯಾಗಿ ಪಂಜಾಬ್‌ ವಿಧಾನಸಭೆ ಚುನಾವಣೆಯನ್ನು ಎದುರಿಸಲಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸಿಧು ಹೇಳಿಕೆಗೆ ಮಹತ್ವ ಬಂದಿದೆ. ಆಪ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಾಂಗ್ರೆಸ್‌ ಕೂಡ ಚಿಂತನೆ ನಡೆಸುತ್ತಿದ್ದು, ಮೂರು ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಲಿವೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಸಿಧು ರಾಜಕೀಯ ವೇದಿಕೆಯಿಂದ ಆಡಳಿತ ವಿರೋಧಿ ಮತ ಬ್ಯಾಂಕ್‌ ಛಿದ್ರಗೊಂಡು ಆಡಳಿತಾರೂಢ ಅಕಾಲಿದಳ-ಬಿಜೆಪಿ ಮೈತ್ರಿಕೂಟಕ್ಕೆ ಲಾಭವಾಗಲಿದೆ ಎಂಬ ವಾದವನ್ನು ಸಿಧು ತಳ್ಳಿಹಾಕಿದರು. ಮತಬ್ಯಾಂಕ್‌ ವಿಭಜನೆಯಿಂದ ಬಾದಲ್‌-ಅಮರೀಂದರ್‌(ಕಾಂಗ್ರೆಸ್‌ ನಾಯಕ) ಅಪವಿತ್ರ ಕೂಟಕ್ಕೆ ಲಾಭವಾಗಬಾರದು ಎಂಬ ಕಾರಣಕ್ಕಾಗಿಯೇ ನೂತನ ವೇದಿಕೆ ರಚಿಸಿ, ಸಮಾನ ಮನಸ್ಕ ಪಕ್ಷಗಳನ್ನು ಆಹ್ವಾನಿಸುತ್ತಿರುವುದಾಗಿ ಸಿಧು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ