ಆ್ಯಪ್ನಗರ

ನಕ್ಸಲ್ ದಾಳಿಗೆ ಸೈನಿಕ ಸೇರಿ ನಾಲ್ವರು ಬಲಿ

ಮಾವೋವಾದಿಗಳು ಗುರುವಾರ ಬಾಚೆಲಿ ಪ್ರದೇಶದಲ್ಲಿ ಸಿಐಎಸ್ಎಫ್ ಕೇಂದ್ರ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್‌ನ ಮಿನಿಬಸ್ ಅನ್ನು ಗುರಿಯಾಗಿಸಿ ಶಕ್ತಿಯುತ ಐಇಡಿಯನ್ನು ಸ್ಫೋಟಿಸಿದ್ದಾರೆ.

TIMESOFINDIA.COM 8 Nov 2018, 3:56 pm
ದಾಂತೇವಾಡ (ಛತ್ತೀಸ್‌ಗಢ): ನಕ್ಸಲರು ಐಎಡಿ ಬಳಸಿ ವಾಹನವನ್ನು ಸ್ಫೋಟಿಸಿದ ಪರಿಣಾಮ ಮೂರು ಜನ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಯೊಬ್ಬರು ದುರ್ಮರಣವನ್ನಪ್ಪಿದ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ದಾಳಿಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ.
Vijaya Karnataka Web Naxal


ದೊರೆತಿರುವ ಮಾಹಿತಿಗಳ ಪ್ರಕಾರ, ಮಾವೋವಾದಿಗಳು ಗುರುವಾರ ಬಾಚೆಲಿ ಪ್ರದೇಶದಲ್ಲಿ ಸಿಐಎಸ್ಎಫ್ ಕೇಂದ್ರ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್‌ನ ಮಿನಿಬಸ್ ಅನ್ನು ಗುರಿಯಾಗಿಸಿ ಶಕ್ತಿಯುತ ಐಇಡಿಯನ್ನು ಸ್ಫೋಟಿಸಿದ್ದಾರೆ. ಮತದಾನದ ಕರ್ತವ್ಯಕ್ಕಾಗಿ ಈ ಬಸ್ ಅನ್ನು ನಿಯೋಜಿಸಲಾಗಿತ್ತು

ಸಿಐಎಸ್ಎಫ್ ಸಿಬ್ಬಂದಿ ಮತ್ತು ಕೆಲವು ನಾಗರಿಕರು ಅಕಾಶ ನಗರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಮೃತರಲ್ಲಿ ಒಬ್ಬ ಸಿಐಎಸ್ಎಫ್ ಸಿಬ್ಬಂದಿ, ಬಸ್ ಚಾಲಕ, ನಿರ್ವಾಹಕ ಮತ್ತೊಬ್ಬ ನಾಗರಿಕರಿದ್ದಾರೆ.

ಚುನಾವಣಾ ಹೊಸ್ತಿಲಲ್ಲಿರುವ ರಾಜ್ಯದಲ್ಲಿ 10 ದಿನಗಳೊಳಗೆ ನಡೆದ ಎರಡನೇ ಮಾವೋವಾದಿ ದಾಳಿ ಇದಾಗಿದೆ.

ನವೆಂಬರ್ 12 ರಂದು ಇಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ದಾಂತೇವಾಡಾ ನಕ್ಸಲ್ ಪೀಡಿತ ಜಿಲ್ಲೆಗಳಲ್ಲೊಂದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ