ಆ್ಯಪ್ನಗರ

ಬಿಜೆಪಿ ಶಾಸಕನ ಹತ್ಯೆ ಸಂಚುಕೋರ ನಕ್ಸಲ್‌ ನಾಯಕನ ಎನ್‌ಕೌಂಟರ್‌

ಮಾವೋವಾದಿಗಳ ಮಿಲಿಟರಿ ತುಕುಡಿ-24ರ ಕಮಾಂಡರ್‌ ಜೋಗ ತಲೆಗೆ ಎಂಟು ಲಕ್ಷ ರೂ. ಬಹುಮಾನ ಘೋಷಣೆಯಾಗಿತ್ತು. ಕಳೆದ ಏ.9ರಂದು ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕ ಭೀಮಾ ಮಾಂಡವಿ ಅವರನ್ನು ನಕ್ಸಲರು ಹತ್ಯೆಗೈದಿದ್ದರು.

Vijaya Karnataka 3 May 2019, 5:00 am
ರಾಯಪುರ: ಛತ್ತೀಸ್‌ಗಢದ ಬಿಜೆಪಿ ಶಾಸಕನ ಹತ್ಯೆ ಪ್ರಕರಣದ ಸಂಚುಕೋರನಾಗಿದ್ದ ನಕ್ಸಲ್‌ ಕಮಾಂಡರ್‌ ಮದ್ವಿ ಮುಯ್ಯ ಅಲಿಯಾಸ್‌ ಜೋಗ ಕುಂಜಮ್‌(29)ನ್ನನ್ನು ದಾಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಗುರುವಾರ ಹತ್ಯೆಗೈದಿವೆ.
Vijaya Karnataka Web naxal


ಮಾವೋವಾದಿಗಳ ಮಿಲಿಟರಿ ತುಕುಡಿ-24ರ ಕಮಾಂಡರ್‌ ಜೋಗ ತಲೆಗೆ ಎಂಟು ಲಕ್ಷ ರೂ. ಬಹುಮಾನ ಘೋಷಣೆಯಾಗಿತ್ತು. ಕಳೆದ ಏ.9ರಂದು ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕ ಭೀಮಾ ಮಾಂಡವಿ ಅವರನ್ನು ನಕ್ಸಲರು ಹತ್ಯೆಗೈದಿದ್ದರು.

ದಾಂತೇವಾಡದ ಜಿಲ್ಲಾ ಮೀಸಲು ಪಡೆ ಮತ್ತು ಜಿಲ್ಲಾ ಪೊಲೀಸರ ಜಂಟಿ ಪಡೆ ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಶೋಧ ಕಾರ್ಯ ಆರಂಭಿಸಿತ್ತು. ಗಸ್ತು ತಂಡ ಕಾಡಿನೊಳಗೆ ಮುನ್ನಡೆಯುತ್ತಿದ್ದಂತೆ ನಕ್ಸಲರ ಒಂದು ಗುಂಪು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ನಕ್ಸಲ್‌ ಕಮಾಂಡರ್‌ ಜೋಗ ಮೃತಪಟ್ಟ. ಸ್ಥಳದಿಂದ ಒಂದು ರೈಫಲ್‌ ವಶಪಡಿಸಿಕೊಳ್ಳಲಾಗಿದೆ ಎಂದು ನಕ್ಸಲ್‌ ವಿರೋಧಿ ಕಾರ್ಯಾಚರಣೆ ಡಿಜಿ ಗಿರಿಧಾರಿ ನಾಯಕ್‌ ತಿಳಿಸಿದ್ದಾರೆ.

2017ರ ಏಪ್ರಿಲ್‌ 24ರಲ್ಲಿ ಸುಕ್ಮಾ ಜಿಲ್ಲೆಯ ಬುರ್ಕಾಪಲ್‌ನಲ್ಲಿ ಭದ್ರತಾ ಪಡೆಗಳ ವಿರುದ್ಧ ನಡೆದ ದಾಳಿಯಲ್ಲಿ ಜೋಗ ಭಾಗವಹಿಸಿದ್ದ. ಈ ದಾಳಿಯಲ್ಲಿ 25 ಪೊಲೀಸರು ಹುತಾತ್ಮರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ