ಒಡಿಶಾ, ಛತ್ತೀಸ್ಗಢದಲ್ಲಿ ವಿಶೇಷ ಪಡೆಯಿಂದ ಕಾರ್ಯಾಚರಣೆ
ರಾಯ್ಪುರ: ಛತ್ತೀಸ್ಗಢದ ದಂತೇವಾಡ ಮತ್ತು ಒಡಿಶಾದ ಕೋರಾಪುಟ್ ಜಿಲ್ಲೆಗಳಲ್ಲಿ ಬುಧವಾರ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಏಳು ಮಾವೋವಾದಿ ನಕ್ಸಲರನ್ನು ಹತ್ಯೆಗೈಯಲಾಗಿದೆ.
ನಕ್ಸಲ್ ಪೀಡಿತ ಒಡಿಶಾದ ಸುಕ್ಮಾ ಮತ್ತು ದಂತೇವಾಡ ಜಿಲ್ಲೆಗಳ ಗಡಿ ಭಾಗದ ಗೊಂಡೇರಸ್ ಗ್ರಾಮದ ಬಳಿ ನಕ್ಸಲರು ಅಡಗಿರುವ ಗುಪ್ತಚರ ಮಾಹಿತಿ ಆಧರಿಸಿ ವಿಶೇಷ ಕಾರ್ಯ ಪಡೆಗಳು ಶೋಧ ಕಾರ್ಯ ನಡೆಸಿದವು. ಈ ವೇಳೆ ಏಕಾಏಕಿ ಮಾವೋವಾದಿಗಳು ಗುಂಡಿನ ದಾಳಿ ಆರಂಭಿಸಿದರು. ಪ್ರತಿಯಾಗಿ ಪಡೆಗಳು ಗುಂಡು ಹಾರಿಸಿದಾಗ ಒಬ್ಬ ಮಹಿಳಾ ನಕ್ಸಲ್ ಸೇರಿ ಇಬ್ಬರು ಹತರಾದರು ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಪೊಲೀಸ್ ಅಧಿಕಾರಿ ಪಿ. ಸುಂದರ್ರಾಜ್ ತಿಳಿಸಿದ್ದಾರೆ.
ಉಳಿದ ಕೆಲವು ನಕ್ಸಲರು ಪರಾರಿಯಾದರು. ಮೃತ ನಕ್ಸಲರಿಂದ ಇನ್ಸಾಸ್ ರೈಫಲ್, 12 ಬೋರ್ ಗನ್ ವಶಪಡಿಸಿಕೊಳ್ಳಲಾಗಿದೆ. ಪುರುಷ ಮಾವೋವಾದಿಯ ಮೃತದೇಹವನ್ನು ಪರಾರಿಯಾದ ನಕ್ಸಲರು ಅರಣ್ಯದೊಳಗೆ ಎಳೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳಾ ಪಡೆಗೆ ಮಾಜಿ ಮಾವೋವಾದಿಗಳು : ದಂತೇಶ್ವರಿ ಲಡಕಿ ಹೆಸರಿನ ಮಹಿಳಾ ಕಮಾಂಡೋಗಳು ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ವಿಶೇಷ. ಈ ಮಹಿಳಾ ಪಡೆಯಲ್ಲಿ 10ಕ್ಕೂ ಹೆಚ್ಚು ಮಾಜಿ ಮಹಿಳಾ ನಕ್ಸಲರು ಇದ್ದಾರೆ ಎಂಬುದು ಗಮನಾರ್ಹ. ಒಟ್ಟು 30 ಮಹಿಳಾ ಕಮಾಂಡೋಗಳು ಈ ಪಡೆಯಲ್ಲಿದ್ದಾರೆ. ಆ ಪೈಕಿ 10 ಮಹಿಳಾ ನಕ್ಸಲರು ಶರಣಾಗತರಾಗಿದ್ದವರು ಎಂದು ಡಿಎಸ್ಪಿ ದಿನೇಶ್ವರಿ ನಂದ್ ಹೇಳಿದ್ದಾರೆ.
ಏ.9ರಂದು ಬಿಜೆಪಿ ಶಾಸಕ ಭೀಮಾ ಮಾಂಡವಿ ಹಾಗೂ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿ ನಕ್ಸಲರು ದಾಳಿ ಮಾಡಿ ಹತ್ಯೆಗೈದ ನಂತರ ದಂತೇವಾಡದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ.
.............................
ಒಡಿಶಾದಲ್ಲಿ 5 ನಕ್ಸಲರ ಹತ್ಯೆ
ಆಂಧ್ರಪ್ರದೇಶ ಗಡಿ ಬಳಿಯ ಕೋರಾಪುಟ್ ಜಿಲ್ಲೆಯ ಕಿತುವಾಕಾಂತಿ ಅರಣ್ಯ ಪ್ರದೇಶದ ಬಳಿ ವಿಶೇಷ ಕಾರ್ಯಪಡೆ ನಡೆಸಿದ ಎನ್ಕೌಂಟರ್ನಲ್ಲಿ ಮೂವರು ಮಹಿಳಾ ನಕ್ಸಲರು ಸೇರಿದಂತೆ ಐದು ಮಾವೋವಾದಿಗಳನ್ನು ಹೊಡೆದುರುಳಿಸಲಾಗಿದೆ.
ರಾಯ್ಪುರ: ಛತ್ತೀಸ್ಗಢದ ದಂತೇವಾಡ ಮತ್ತು ಒಡಿಶಾದ ಕೋರಾಪುಟ್ ಜಿಲ್ಲೆಗಳಲ್ಲಿ ಬುಧವಾರ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಏಳು ಮಾವೋವಾದಿ ನಕ್ಸಲರನ್ನು ಹತ್ಯೆಗೈಯಲಾಗಿದೆ.
ನಕ್ಸಲ್ ಪೀಡಿತ ಒಡಿಶಾದ ಸುಕ್ಮಾ ಮತ್ತು ದಂತೇವಾಡ ಜಿಲ್ಲೆಗಳ ಗಡಿ ಭಾಗದ ಗೊಂಡೇರಸ್ ಗ್ರಾಮದ ಬಳಿ ನಕ್ಸಲರು ಅಡಗಿರುವ ಗುಪ್ತಚರ ಮಾಹಿತಿ ಆಧರಿಸಿ ವಿಶೇಷ ಕಾರ್ಯ ಪಡೆಗಳು ಶೋಧ ಕಾರ್ಯ ನಡೆಸಿದವು. ಈ ವೇಳೆ ಏಕಾಏಕಿ ಮಾವೋವಾದಿಗಳು ಗುಂಡಿನ ದಾಳಿ ಆರಂಭಿಸಿದರು. ಪ್ರತಿಯಾಗಿ ಪಡೆಗಳು ಗುಂಡು ಹಾರಿಸಿದಾಗ ಒಬ್ಬ ಮಹಿಳಾ ನಕ್ಸಲ್ ಸೇರಿ ಇಬ್ಬರು ಹತರಾದರು ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಪೊಲೀಸ್ ಅಧಿಕಾರಿ ಪಿ. ಸುಂದರ್ರಾಜ್ ತಿಳಿಸಿದ್ದಾರೆ.
ಉಳಿದ ಕೆಲವು ನಕ್ಸಲರು ಪರಾರಿಯಾದರು. ಮೃತ ನಕ್ಸಲರಿಂದ ಇನ್ಸಾಸ್ ರೈಫಲ್, 12 ಬೋರ್ ಗನ್ ವಶಪಡಿಸಿಕೊಳ್ಳಲಾಗಿದೆ. ಪುರುಷ ಮಾವೋವಾದಿಯ ಮೃತದೇಹವನ್ನು ಪರಾರಿಯಾದ ನಕ್ಸಲರು ಅರಣ್ಯದೊಳಗೆ ಎಳೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳಾ ಪಡೆಗೆ ಮಾಜಿ ಮಾವೋವಾದಿಗಳು : ದಂತೇಶ್ವರಿ ಲಡಕಿ ಹೆಸರಿನ ಮಹಿಳಾ ಕಮಾಂಡೋಗಳು ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ವಿಶೇಷ. ಈ ಮಹಿಳಾ ಪಡೆಯಲ್ಲಿ 10ಕ್ಕೂ ಹೆಚ್ಚು ಮಾಜಿ ಮಹಿಳಾ ನಕ್ಸಲರು ಇದ್ದಾರೆ ಎಂಬುದು ಗಮನಾರ್ಹ. ಒಟ್ಟು 30 ಮಹಿಳಾ ಕಮಾಂಡೋಗಳು ಈ ಪಡೆಯಲ್ಲಿದ್ದಾರೆ. ಆ ಪೈಕಿ 10 ಮಹಿಳಾ ನಕ್ಸಲರು ಶರಣಾಗತರಾಗಿದ್ದವರು ಎಂದು ಡಿಎಸ್ಪಿ ದಿನೇಶ್ವರಿ ನಂದ್ ಹೇಳಿದ್ದಾರೆ.
ಏ.9ರಂದು ಬಿಜೆಪಿ ಶಾಸಕ ಭೀಮಾ ಮಾಂಡವಿ ಹಾಗೂ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿ ನಕ್ಸಲರು ದಾಳಿ ಮಾಡಿ ಹತ್ಯೆಗೈದ ನಂತರ ದಂತೇವಾಡದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ.
.............................
ಒಡಿಶಾದಲ್ಲಿ 5 ನಕ್ಸಲರ ಹತ್ಯೆ
ಆಂಧ್ರಪ್ರದೇಶ ಗಡಿ ಬಳಿಯ ಕೋರಾಪುಟ್ ಜಿಲ್ಲೆಯ ಕಿತುವಾಕಾಂತಿ ಅರಣ್ಯ ಪ್ರದೇಶದ ಬಳಿ ವಿಶೇಷ ಕಾರ್ಯಪಡೆ ನಡೆಸಿದ ಎನ್ಕೌಂಟರ್ನಲ್ಲಿ ಮೂವರು ಮಹಿಳಾ ನಕ್ಸಲರು ಸೇರಿದಂತೆ ಐದು ಮಾವೋವಾದಿಗಳನ್ನು ಹೊಡೆದುರುಳಿಸಲಾಗಿದೆ.