ಆ್ಯಪ್ನಗರ

ನೂತನ ಶಿಕ್ಷಣ ಪದ್ಧತಿ : ಶಾಲಾ ಶಿಕ್ಷಣದಲ್ಲಿ ಗಣನೀಯ ಸುಧಾರಣೆ ಶೀಘ್ರ

ಅನುಭವಯುಕ್ತ ಕಲಿಕೆ ಮಕ್ಕಳಿಗೆ ಅಗತ್ಯ ಎಂಬ ಬೇಡಿಕೆ ಸಮಾಜದಲ್ಲಿ ಹೆಚ್ಚಾಗಿ ಕೇಳಿಸುತ್ತಿದೆ. ಅದರಂತೆ ನೂತನ ಪಠ್ಯಕ್ರಮ, ಶಿಕ್ಷಣ ಪದ್ಧತಿಗೆ ಒತ್ತು ನೀಡಲಾಗುವುದು. ಸುಮಾರು 15 ವರ್ಷಗಳ ಹಿಂದಿನ ಕಲಿಕಾ ದೃಷ್ಟಿಕೋನವನ್ನು ಈಗ ಬದಲಾಯಿಸಬೇಕಿದೆ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ಹೃಷಿಕೇಶ್‌ ಸೇನಾಪತಿ ಹೇಳಿದ್ದಾರೆ.

Vijaya Karnataka 11 Dec 2022, 6:11 pm
ಹೊಸದಿಲ್ಲಿ : ಶಾಲಾ ಶಿಕ್ಷಣ ಪದ್ಧತಿಯಲ್ಲಿ ಗಣನೀಯ ಸುಧಾರಣೆ ತರುವ ನಿಟ್ಟಿನಲ್ಲಿ ರಾಷ್ಟ್ರೀಯ ಪಠ್ಯಕ್ರಮ ನಿಯಮಾವಳಿಗಳ ಚೌಕಟ್ಟು (ಎನ್‌ಸಿಎಫ್‌) ಪರಿಶೀಲನೆ ಶೀಘ್ರವೇ ಆರಂಭಗೊಳ್ಳಲಿದೆ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಹೇಳಿದೆ.
Vijaya Karnataka Web Schools can’t force parents to buy books, dress from specific vendor: Delhi govt
Representative Image.


ಅನುಭವಯುಕ್ತ ಕಲಿಕೆ ಮಕ್ಕಳಿಗೆ ಅಗತ್ಯ ಎಂಬ ಬೇಡಿಕೆ ಸಮಾಜದಲ್ಲಿ ಹೆಚ್ಚಾಗಿ ಕೇಳಿಸುತ್ತಿದೆ. ಅದರಂತೆ ನೂತನ ಪಠ್ಯಕ್ರಮ, ಶಿಕ್ಷಣ ಪದ್ಧತಿಗೆ ಒತ್ತು ನೀಡಲಾಗುವುದು. ಸುಮಾರು 15 ವರ್ಷಗಳ ಹಿಂದಿನ ಕಲಿಕಾ ದೃಷ್ಟಿಕೋನವನ್ನು ಈಗ ಬದಲಾಯಿಸಬೇಕಿದೆ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ಹೃಷಿಕೇಶ್‌ ಸೇನಾಪತಿ ಹೇಳಿದ್ದಾರೆ.

ಶಾಲಾ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳ ರಚನೆಗೆ ಅಗತ್ಯವಾದ ಚೌಕಟ್ಟನ್ನು ಎನ್‌ಸಿಎಫ್‌ ನಿರ್ಧರಿಸುತ್ತದೆ. ಜತೆಗೆ ದೇಶದಲ್ಲಿ ಅಳವಡಿಸಬೇಕಾದ ಕಲಿಕಾ ಪದ್ಧತಿ ಕುರಿತು ಕೂಡ ಮಾರ್ಗಸೂಚಿಗಳನ್ನು ನೀಡುತ್ತದೆ. 1975, 1988, 2000 ಮತ್ತು 2005ರಲ್ಲಿ ಎನ್‌ಸಿಎಫ್‌ ಶಿಕ್ಷಣ ಪದ್ಧತಿಯಲ್ಲಿ ಸುಧಾರಣೆ ತಂದಿದೆ. ಹೊರೆ ರಹಿತ ಕಲಿಕೆಗೆ ಎನ್‌ಸಿಎಫ್‌ ಕಳೆದ ಬಾರಿ ಒತ್ತು ನೀಡಿತ್ತು.

ಒಂದು ವರ್ಷದ ಪ್ರಕ್ರಿಯೆ: ಪಠ್ಯಪುಸ್ತಕಗಳ ಪರಿಷ್ಕರಣೆಗಾಗಿ ಎನ್‌ಸಿಇಆರ್‌ಟಿ ಆಹ್ವಾನದ ಮೇರೆಗೆ 2018ರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ನಾಗರಿಕರಿಂದ 1 ಲಕ್ಷಕ್ಕೂ ಅಧಿಕ ಸಲಹೆಗಳು ಬಂದಿದ್ದವು. ಅವುಗಳನ್ನು ಆಧರಿಸಿ ಎನ್‌ಸಿಎಫ್‌ ಪರಿಶೀಲನೆ ನಡೆಯಲಿದೆ. ಸುಮಾರು ಒಂದು ವರ್ಷ ಈ ಪ್ರಕ್ರಿಯೆ ಸಾಗಲಿದೆ ಎಂದು ಸೇನಾಪತಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ