ಆ್ಯಪ್ನಗರ

ಅರ್ನಬ್‌-ದಾಸ್‌ಗುಪ್ತಾ ನಡುವಿನ ವಾಟ್ಸಾಪ್‌ ಚಾಟ್‌ ಬಗ್ಗೆ ಜಂಟಿ ಸದನ ಸಮಿತಿ ತನಿಖೆಗೆ ಎನ್‌ಸಿಪಿ ಆಗ್ರಹ

ಟಿಆರ್‌ಪಿಗಾಗಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಬಳಸಿಕೊಂಡಿರುವುದು ಅತ್ಯಂತ ಆಘಾತಕಾರಿ ಬೆಳವಣಿಗೆ ಎಂದಿರುವ ಎನ್‌ಸಿಪಿ ಈ ಬಗ್ಗೆ ಜಂಟಿ ಸದನ ಸಮಿತಿಯಿಂದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದೆ.

Agencies 18 Jan 2021, 4:45 pm
ಮುಂಬಯಿ: ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಹಾಗೂ ಬಾರ್ಕ್‌ ಮಾಜಿ ಸಿಇಒ ಪಾರ್ಥೊ ದಾಸ್‌ಗುಪ್ತಾ ನಡುವೆ ನಡೆದಿದ್ದು ಎನ್ನಲಾದ ವಾಟ್ಸಾಪ್‌ ಸಂಭಾಷಣೆ ಸೋರಿಕೆಯಾದ ಬೆನ್ನಲ್ಲೇ ಈ ಬಗ್ಗೆ ತನಿಖೆ ನಡೆಸಲು ಜಂಟಿ ಸದನ ಸಮಿತಿ ರಚಿಸಬೇಕು ಎಂದು ಎನ್‌ಸಿಪಿ ಆಗ್ರಹಿಸಿದೆ.
Vijaya Karnataka Web Arnab Goswami


ಸೋರಿಕೆಯಾದ ವಾಟ್ಸಾಪ್‌ ಸಂಭಾಷಣೆಗಳು ದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಬಾಲಕೋಟ್‌ ದಾಳಿಯ ಮಾಹಿತಿ ಅರ್ನಬ್‌ ಗೋಸ್ವಾಮಿಗೆ ಮೊದಲೇ ತಿಳಿದಿತ್ತು ಎಂಬ ವಿಷಯವೂ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್‌ಸಿಪಿ ಮುಖ್ಯಸ್ಥ ಮಹೇಶ್‌ ತಾಪಸೆ, "ಟಿಆರ್‌ಪಿಗಾಗಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಬಳಸಿಕೊಂಡಿರುವುದು ಅತ್ಯಂತ ಆಘಾತಕಾರಿ ಬೆಳವಣಿಗೆ,” ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಸಂಬಂಧ ಮಹಾರಾಷ್ಟ್ರ ಗೃಹ ಖಾತೆ ಸಚಿವ ಅನಿಲ್‌ ದೇಶ್‌ಮುಖ್‌ ಅವರನ್ನು ಮಂಗಳವಾರ ಭೇಟಿಯಾಗುವುದಾಗಿ ಹೇಳಿರುವ ತಾಪಸೆ, ಈ ‘ಚಾಟ್‌ಗೇಟ್‌’ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಂದ ಸ್ಪಷ್ಟನೆ ಬಯಸುತ್ತಿರುವುದಾಗಿ ಹೇಳಿದ್ದಾರೆ.

ಟಿಆರ್‌ಪಿ ಹಗರಣ: ಅರ್ನಬ್‌, ದಾಸ್‌ಗುಪ್ತಾ ನಡುವಿನ ಸ್ಫೋಟಕ ವ್ಯಾಟ್ಸಪ್‌ ಸಂದೇಶ ಸೋರಿಕೆ

ಇಂಥಹ ಅತ್ಯಂತ ಸೂಕ್ಷ್ಮ ಗೌಪ್ಯ ವಿಚಾರ ಅರ್ನಬ್‌ ಗೋಸ್ವಾಮಿಗೆ ಮೊದಲೇ ಹೇಗೆ ತಿಳಿಯಿತು. ಹಾಗೂ ಇದರ ಮೂಲ ಯಾವುದು ಎಂಬುದನ್ನು ಗೃಹ ಇಲಾಖೆ ಪತ್ತೆ ಹಚ್ಚಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಮ್ಮ ಟಿವಿ ಚರ್ಚೆಗಳಲ್ಲಿ ಆತ ಪಾಲ್ಗಾರ್‌ ಘಟನೆಗೆ ಕೋಮು ಬಣ್ಣ ಬಳಿಯಲು ಯತ್ನಿಸಿದ್ದ. ಸುಶಾಂತ್‌ ಸಿಂಗ್‌ ಪ್ರಕರಣದಲ್ಲಿ ಸುಳ್ಳು ಕಥೆ ಹೆಣೆಯಲು ಹೊರಟಿದ್ದ. ಮಹಾವಿಕಾಸ್‌ಅಘಾಡಿ ಸರಕಾರವನ್ನು ಅಸ್ಥಿರಗೊಳಿಸಬೇಕು ಎಂಬ ಒಂದೇ ಉದ್ದೇಶದಿಂದ ಆತ ಹೀಗೆ ಮಾಡಿದ್ದ ಎಂದು ಅವರು ದೂರಿದ್ದಾರೆ.

ಅರ್ನಬ್‌ ಗೋಸ್ವಾಮಿಯ ಬಗ್ಗೆ ಬಿಜೆಪಿಯೂ ತಮ್ಮ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಟಿಆರ್‌ಪಿ ಹಗರಣದಲ್ಲಿ ಬಂಧಿತರಾಗಿರುವ ಬಾರ್ಕ್‌ ಮಾಜಿ ಸಿಇಒ ಪಾರ್ಥೊ ದಾಸ್‌ಗುಪ್ತಾ ಆರೋಗ್ಯದಲ್ಲಿ ಏರುಪೇರಾಗಿದ್ದು ಇದೀಗ ಸರಕಾರಿ ಸ್ವಾಮ್ಯದ ಮುಂಬಯಿನ ಜೆಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಹಿಂದೆ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿದ್ದ ಮುಂಬಯಿ ಪೊಲೀಸರು, ರಿಪಬ್ಲಿಕ್‌ ಟಿವಿಯ ರೇಟಿಂಗ್‌ ಏರಿಸಲು ಅರ್ನಬ್‌ ಗೋಸ್ವಾಮಿ ದಾಸ್‌ಗುಪ್ತಾಗೆ ಲಕ್ಷಾಂತರ ರೂಪಾಯಿ ಲಂಚ ನೀಡಿದ್ದ ಎಂದು ಆರೋಪಿಸಿದ್ದರು. ಇದಾದ ಬಳಿಕ ಇವರಿಬ್ಬರ ನಡುವೆ ನಡೆದಿದ್ದು ಎನ್ನಲಾದ ವಾಟ್ಸಾಪ್‌ ಸಂಭಾಷಣೆಗಳು ಸೋರಿಕೆಯಾಗಿ ವೈರಲ್‌ ಆಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ