ಆ್ಯಪ್ನಗರ

ಹುಡುಗರು ಹುಡುಗಿಯರನ್ನು ನೋಡುವುದು ಸಹಜ: NCP ಸಂಸದ

ಎಲ್ಲಿ ಹೋದರು ಸಹ ಹುಡುಗರು ಮತ್ತು ಗಂಡಸರು ನಮ್ಮನ್ನು ದಿಟ್ಟಿಸುತ್ತಲೇ ಇರುತ್ತಾರೆ, ಅದಕ್ಕೇನು ಮಾಡುವುದು ಎಂದು ವಿದ್ಯಾರ್ಥಿನಿಯೊಬ್ಬಳು ಪ್ರಶ್ನಿಸಿದಾಗ ಸಂಸದರು, ಹುಡುಗರನ್ನು ಹುಡುಗಿಯರನ್ನೇ ನೋಡುವುದು ಸಹಜ. ಅದನ್ನು ಬಿಟ್ಟು ಹುಡುಗರು ಹುಡುಗರನ್ನು ನೋಡಲಾಗುತ್ತಾ ಎಂದು ಉತ್ತರಿಸಿದ್ದಾರೆ.

Times Now 23 Mar 2019, 3:37 pm
ಹೊಸದಿಲ್ಲಿ: ಹುಡುಗರು ಹುಡುಗಿಯರನ್ನು ನೋಡುವುದು ಸಹಜ ಎಂದು ಹೇಳುವುದರ ಮೂಲಕ ಎನ್‌ಸಿಪಿ ನಾಯಕ , ಸಂಸದ ಉದ್ಯಾನ್‌ರಾಜೇ ಭೋಸ್ಲೆ ವಿವಾದವನ್ನು ಸೃಷ್ಟಿಸಿದ್ದಾರೆ.
Vijaya Karnataka Web udyanraje


ಶಾಲೆಯೊಂದರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದರು ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ಎಲ್ಲಿ ಹೋದರು ಸಹ ಹುಡುಗರು ಮತ್ತು ಗಂಡಸರು ನಮ್ಮನ್ನು ದಿಟ್ಟಿಸುತ್ತಲೇ ಇರುತ್ತಾರೆ, ಅದಕ್ಕೇನು ಮಾಡುವುದು ಎಂದು ವಿದ್ಯಾರ್ಥಿನಿಯೊಬ್ಬಳು ಪ್ರಶ್ನಿಸಿದಾಗ ಸಂಸದರು, ಹುಡುಗರು
ಹುಡುಗಿಯರನ್ನು ನೋಡುವುದು ಸಹಜ. ಅದನ್ನು ಬಿಟ್ಟು ಹುಡುಗರು ಹುಡುಗರನ್ನು ನೋಡಲಾಗುತ್ತಾ ಎಂದು ಉತ್ತರಿಸಿದ್ದಾರೆ.

ಆದರೆ ತಾವಾಡಿದ ಮಾತು ಎಷ್ಟು ತಪ್ಪು ಎಂದು ಅರಿತು ತಕ್ಷಣ ಎಚ್ಚೆತ್ತುಕೊಂಡ ಅವರು, ಇಂತಹ ಮನಃ ಸ್ಥಿತಿ ಬದಲಾಗಬೇಕು. ನಾನು ಸಹ ಇದನ್ನು ವಿರೋಧಿಸುತ್ತೇನೆ ಎಂದಿದ್ದಾರೆ.

ಏನೇ ಆದರೂ ಜನಪ್ರತಿನಿಧಿಯಾಗಿ ಲೋಕಸಭೆಯ ಸದಸ್ಯರಾಗಿರುವವರು, ಅಷ್ಟೇ ಅಲ್ಲದೆ ಛತ್ರಪತಿ ಶಿವಾಜಿ ಅನುಯಾಯಿ ಎಂದು ಗುರುತಿಸಿಕೊಂಡವರು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಸತಾರಾದ ಸಂಸದರಾಗಿರುವ ಅವರು ಈ ಹಿಂದೆ ಕೂಡ ಅನೇಕ ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. 1999ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಬಂಧಿಸಲ್ಪಟ್ಟಿದ್ದರು. ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಯನ್ನೆದುರಿಸುತ್ತಿದ್ದ ಅವರು, ದಶಕಗಳ ಬಳಿಕ ಬಿಡುಗಡೆಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ