ಆ್ಯಪ್ನಗರ

ಕೇರಳದಲ್ಲಿ ನೀಟ್‌ ಬರೆದ ತಮಿಳುನಾಡು ವಿದ್ಯಾರ್ಥಿ: ಜತೆಯಲ್ಲಿ ತೆರಳಿದ್ದ ತಂದೆ ಸಾವು

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಬರೆದ ಪುತ್ರನ ಜತೆ ಕೇರಳಕ್ಕೆ ತೆರಳಿದ್ದ ತಮಿಳುನಾಡಿನ ವ್ಯಕ್ತಿಯೊಬ್ಬರು ಅಲ್ಲೇ ಹೃದಯಾಘಾತದಿಂದ ಅಸುನೀಗಿದ ಹೃದಯ ವಿದ್ರಾವಕ ಘಟನೆ ಭಾನುವಾರ ನಡೆದಿದೆ. ಅವರಿಗೆ 46 ವರ್ಷವಾಗಿತ್ತು. ಪರೀಕ್ಷೆ ಮುಗಿಯುವ ತನಕ ವಿದ್ಯಾರ್ಥಿಗೆ ತನ್ನ ತಂದೆ ಸಾವಿಗೀಡಾದ ಸುದ್ದಿಯನ್ನು ಅಧಿಕಾರಿಗಳು ತಿಳಿಸಲಿಲ್ಲ.

Vijaya Karnataka 7 May 2018, 9:52 am
ಚೆನ್ನೈ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಬರೆದ ಪುತ್ರನ ಜತೆ ಕೇರಳಕ್ಕೆ ತೆರಳಿದ್ದ ತಮಿಳುನಾಡಿನ ವ್ಯಕ್ತಿಯೊಬ್ಬರು ಅಲ್ಲೇ ಹೃದಯಾಘಾತದಿಂದ ಅಸುನೀಗಿದ ಹೃದಯ ವಿದ್ರಾವಕ ಘಟನೆ ಭಾನುವಾರ ನಡೆದಿದೆ. ಅವರಿಗೆ 46 ವರ್ಷವಾಗಿತ್ತು. ಪರೀಕ್ಷೆ ಮುಗಿಯುವ ತನಕ ವಿದ್ಯಾರ್ಥಿಗೆ ತನ್ನ ತಂದೆ ಸಾವಿಗೀಡಾದ ಸುದ್ದಿಯನ್ನು ಅಧಿಕಾರಿಗಳು ತಿಳಿಸಲಿಲ್ಲ.
Vijaya Karnataka Web Body of Candidates father who died


ತಂದೆಯನ್ನು ಕಳೆದುಕೊಂಡ ವಿದ್ಯಾರ್ಥಿಗೆ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಸಾಂತ್ವನ ಹೇಳುವುದರ ಜತೆಗೆ ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ 3 ಲಕ್ಷ ರೂಪಾಯಿ ಪರಿಹಾರ ಕೂಡ ಮಂಜೂರು ಮಾಡಿಸಿದ್ದಾರೆ.

ತಮಿಳುನಾಡಿನ ತಿರುವರೂರ್‌ ಜಿಲ್ಲೆಯ ವಿಲಾಂಗುಡಿ ಗ್ರಾಮದ ಕಸ್ತೂರಿ ಮಹಾಲಿಂಗಂ ಅವರು ಶನಿವಾರ ತಮ್ಮ ಪುತ್ರ ಕೃಷ್ಣಸ್ವಾಮಿ ಜತೆ ಕೇರಳದ ಎರ್ನಾಕುಲಮ್‌ಗೆ ಹೋಗಿದ್ದರು. ಭಾನುವಾರ ಬೆಳಗ್ಗೆ ಪುತ್ರನನ್ನು ಪರೀಕ್ಷಾ ಕೇಂದ್ರದಲ್ಲಿ ಬಿಟ್ಟು ಲಾಡ್ಜ್‌ಗೆ ಮರಳಿದ್ದ ಅವರಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕುಳಿಯಲಿಲ್ಲ.


ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಪ್ರವೇಶಕ್ಕೆ ಭಾನುವಾರ ದೇಶಾದ್ಯಂತ ನಡೆದ ನೀಟ್‌ನಲ್ಲಿ 1.33 ದಶಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಕನ್ನಡ ಸೇರಿದಂತೆ 11 ಭಾಷೆಗಳಲ್ಲಿ ಪರೀಕ್ಷೆ ನಡೆಯಿತು. ದೇಶದಲ್ಲಿ ಈ ವರ್ಷ 66,000 ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳು ಲಭ್ಯವಿವೆ. ಅಭ್ಯರ್ಥಿಗಳ ಬಿಗಿ ತಪಾಸಣೆ ನಡೆಸಿ ಪರೀಕ್ಷಾ ಕೇಂದ್ರಕ್ಕೆ ಬಿಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ