ಆ್ಯಪ್ನಗರ

ಆಧಾರ್‌ ದಾಖಲೆ ಭಂಡಾರಕ್ಕೆ ಸಿಐಎಸ್‌ಎಫ್‌ ಕಮಾಂಡೋಗಳಿಂದ 24‍X7 ಭದ್ರತೆ

ಬೆಂಗಳೂರಿನಲ್ಲಿರುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಆಧಾರ್‌ ಡೇಟಾ ಭಂಡಾರದ ಭದ್ರತೆಯ ಹೊಣೆಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) 80 ಕಮಾಂಡೋಗಳು ಶುಕ್ರವಾರ ಕೈಗೆತ್ತಿಕೊಂಡಿದ್ದಾರೆ.

Vijaya Karnataka Web 23 Dec 2017, 6:19 pm
ಹೊಸದಿಲ್ಲಿ: ಬೆಂಗಳೂರಿನಲ್ಲಿರುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಆಧಾರ್‌ ಡೇಟಾ ಭಂಡಾರದ ಭದ್ರತೆಯ ಹೊಣೆಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) 80 ಕಮಾಂಡೋಗಳು ಶುಕ್ರವಾರ ಕೈಗೆತ್ತಿಕೊಂಡಿದ್ದಾರೆ.
Vijaya Karnataka Web nerve centre of uidai gets 24x7 commando shield
ಆಧಾರ್‌ ದಾಖಲೆ ಭಂಡಾರಕ್ಕೆ ಸಿಐಎಸ್‌ಎಫ್‌ ಕಮಾಂಡೋಗಳಿಂದ 24‍X7 ಭದ್ರತೆ


ಅತ್ಯಂತ ಮಹತ್ವದ ಆಧಾರ್‌ ದಾಖಲೆ ಭಂಡಾರಕ್ಕೆ ಸಂಭಾವ್ಯ ಉಗ್ರರ ದಾಳಿ ಮತ್ತು ಇತರ ಬೆದರಿಕೆಗಳ ಹಿನ್ನೆಲೆಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.

2014ರ ಡಿಸೆಂಬರ್‌ನಿಂದಲೇ ಸಿಐಎಸ್‌ಎಫ್‌ ಆಧಾರ್‌ ಕೇಂದ್ರವನ್ನು ಕಾಯುತ್ತಿದೆ. ಇದೀಗ ಕಾಯಂ ನೆಲೆಯಲ್ಲಿ ಭದ್ರತೆಯ ಹೊಣೆಯನ್ನು ಸಿಐಎಸ್‌ಎಫ್‌ಗೆ ವಹಿಸಲಾಗಿದೆ.

ಬೆಂಗಳೂರಿನ ಕೊಡಿಗೇಹಳ್ಳಿ ಪ್ರದೇಶದಲ್ಲಿರುವ ಯುಐಡಿಎಐ ಕೇಂದ್ರ ಕಚೇರಿಯನ್ನುಕಾಯುವ ಹೊಣೆ ಸಿಐಎಸ್‌ಎಫ್‌ಗೆ ವಹಿಸಲಾಗಿದೆ ಎಂದು ಪಡೆಯ ವಕ್ತಾರ ಅಸಿಸ್ಟೆಂಟ್‌ ಇನ್‌ಸ್ಪೆಕ್ಟರ್‌ ಜನರಲ್‌ (ಎಐಜಿ) ಹೇಮೇಂದ್ರ ಸಿಂಗ್‌ ತಿಳಿಸಿದರು.

'ದೇಶದ ಪ್ರತಿಯೊಬ್ಬ ಪ್ರಜೆಯ ಅತಿ ಸೂಕ್ಷ್ಮ ಹಾಗೂ ರಹಸ್ಯವಾದ ಬಯೋ ಮೆಟ್ರಿಕ್‌ ದಾಖಲೆಗಳನ್ನು ಇಲ್ಲಿ ಸಂಗ್ರಹಿಸಿ ನಿರ್ವಹಿಸಲಾಗುತ್ತಿದೆ. ಹೀಗಾಗಿ ಈ ಡೇಟಾ ಸೆಂಟರ್‌ನ ಭದ್ರತೆ ಅತ್ಯಂತ ಮುಖ್ಯವಾಗಿದೆ' ಎಂದು ಅವರು ತಿಳಿಸಿದರು.

ಆಧಾರ್‌ ಕೇಂದ್ರದ ಭದ್ರತೆಗಾಗಿ ಕಾಯಂ ನೆಲೆಯಲ್ಲಿ ಸಿಐಎಸ್‌ಎಫ್‌ ಪಡೆಯ ನಿಯೋಜನೆಗೆ ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗಷ್ಟೇ ಅನುಮೋದನೆ ನೀಡಿತ್ತು. ಒಟ್ಟು 162 ಭದ್ರತಾ ಸಿಬ್ಬಂದಿ ಈ ಕೇಂದ್ರವನ್ನು ಕಾಯಲಿದ್ದಾರೆ. ಕಮಾಂಡೆಂಟ್‌ ಶ್ರೇಣಿಯ ಅಧಿಕಾರಿಯೊಬ್ಬರ ನೇತೃತ್ವದ 80 ಯೋಧರ ತಂಡ ಇದೀಗ ನಿಯೋಜನೆಗೊಂಡಿದೆ. ಉಳಿದ ಸಿಬ್ಬಂದಿ ಶೀಘ್ರವೇ ಕರ್ತವ್ಯಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ಸಿಂಗ್‌ ವಿವರಿಸಿದರು.

ದಿನದ 24 ಗಂಟೆಗಳ ಕಾಲವೂ ಸತತ ಭದ್ರತೆ ಒದಗಿಸಲಿರುವ ಸಿಐಎಸ್‌ಎಫ್‌, ಉಗ್ರರ ದಾಳಿ ಅಥವಾ ವಿಧ್ವಂಸಕ ಕೃತ್ಯಗಳನ್ನು ತಡೆಯಲು ವಾಹನ ಸಹಿತ ಕ್ಷಿಪ್ರ ಕಾರ್ಯಾಚರಣೆ ಕಮಾಂಡೋಗಳನ್ನು ನಿಯೋಜಿಸಲಿದೆ. ಕೇಂದ್ರದ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆಯ ಸಂಪೂರ್ಣ ಹೊಣೆಯನ್ನು ಈ ಪಡೆಗೆ ವಹಿಸಲಾಗಿದೆ.

ಭಾರತದ ಐಟಿ ರಾಜಧಾನಿ ಎಂದೇ ಖ್ಯಾತವಾಗಿರುವ ಬೆಂಗಳೂರು 'ದೇಶ ವಿರೋಧಿ ಶಕ್ತಿಗಳ ಬೆದರಿಕೆ ಪಟ್ಟಿಯಲ್ಲಿದೆ' ಎಂದು ಸಿಂಗ್‌ ತಿಳಿಸಿದರು.

ಮನೇಸರ್‌ನಲ್ಲಿರುವ ಆಧಾರ್‌ ಕೇಂದ್ರದ ಭದ್ರತೆಯನ್ನೂ ಶೀಘ್ರವೇ ಸಿಐಎಸ್‌ಎಫ್‌ ವಹಿಸಿಕೊಳ್ಳಲಿದೆ ಎಂದು ಅವರು ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ