ಆ್ಯಪ್ನಗರ

‘ನೀಡಿದ ಭರವಸೆ ಈಡರಿಸದಿದ್ದರೆ ಜನ ಮೂಲೆಗುಂಪು ಮಾಡುತ್ತಾರೆ’

ಗಡ್ಕರಿ ಮಾತಿನ ಶೈಲಿ ಇತ್ತೀಚೆಗೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ, ಪ್ರಧಾನಿ ಮೋದಿ ಅವರನ್ನು ಪರೋಕ್ಷ ಗುರಿಯಾಗಿಸಿಕೊಂಡು 'ಕಡಿಮೆ ಮಾತಾಡುವ ಅಗತ್ಯ' ಇದೆ ಟಾಂಗ್‌ ನೀಡಿದ್ದರು. ಈ ಹೇಳಿಕೆ ಬಿಜೆಪಿ ನಾಯಕರಲ್ಲಿ ತೀವ್ರ ಮುಜುಗರ ಉಂಟು ಮಾಡಿತ್ತು.

Vijaya Karnataka 28 Jan 2019, 5:00 am
ಹೊಸದಿಲ್ಲಿ: ನೀಡಿದ ಭರವಸೆಗಳನ್ನು ಈಡೇರಿಸದೇ ಹೋದರೆ ಜನ ನಿಮ್ಮನ್ನು ಮೂಲೆಗುಂಪು ಮಾಡಿ ಬಿಸಾಡುತ್ತಾರೆ ಹುಷಾರ್‌ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಮ್ಮ ಸಹವರ್ತಿ ರಾಜಕಾರಣಿಗಳಿಗೆ ಎಚ್ಚರಿಕೆಯ ಕಿವಿಮಾತು ಹೇಳಿದ್ದಾರೆ. ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಗಡ್ಕರಿ, ದೊಡ್ಡ ಕನಸುಗಳನ್ನು ತೋರಿಸುವ ನಾಯಕರನ್ನು ಜನ ಇಷ್ಟ ಪಡುತ್ತಾರೆ ನಿಜ, ಆದರೆ ಆ ಕನಸುಗಳನ್ನು ಈಡೇರಿಸದೇ ಹೋದರೆ ಅದೇ ಜನ ದಂಡಿಸುತ್ತಾರೆ ಎನ್ನುವುದನ್ನು ಮರೆಯಬಾರದು ಎಂದಿದ್ದಾರೆ.
Vijaya Karnataka Web gadkari


''ನಿಮ್ಮಿಂದ ಸಾಧಿಸಲು ಸಾಧ್ಯವಾಗುವ ಕನಸನ್ನು ಮಾತ್ರ ಬಿತ್ತನೆ ಮಾಡಿ,'' ಎಂದು ರಾಜಕಾರಣಿಗಳಿಗೆ ಸಲಹೆ ನೀಡಿದ ಅವರು,''ಈಡೇರಿಸಲಾಗದ ಒಣ ಕನಸುಗಳನ್ನು ನಾನು ತೋರಿಸುವುದಿಲ್ಲ. ಆದರೆ ಹೇಳಿದ್ದನ್ನು ಮಾಡಿಯೇ ತೀರುತ್ತೇನೆ,'' ಎಂದೂ ಹೇಳಿಕೊಂಡಿದ್ದಾರೆ.

ಗಡ್ಕರಿ ಮಾತಿನ ಶೈಲಿ ಇತ್ತೀಚೆಗೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ, ಪ್ರಧಾನಿ ಮೋದಿ ಅವರನ್ನು ಪರೋಕ್ಷ ಗುರಿಯಾಗಿಸಿಕೊಂಡು 'ಕಡಿಮೆ ಮಾತಾಡುವ ಅಗತ್ಯ' ಇದೆ ಟಾಂಗ್‌ ನೀಡಿದ್ದರು. ಈ ಹೇಳಿಕೆ ಬಿಜೆಪಿ ನಾಯಕರಲ್ಲಿ ತೀವ್ರ ಮುಜುಗರ ಉಂಟು ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ