ಆ್ಯಪ್ನಗರ

ಆರ್ಯರು ಅನ್ಯದೇಶೀಯರಲ್ಲ, ಮೂಲನಿವಾಸಿಗಳು: ಪುರಾವೆ ನೀಡಿದ ಡಿಎನ್‌ಎ ಪರೀಕ್ಷೆ

ಆರ್ಯರು ಭಾರತಕ್ಕೆ ದಂಡೆತ್ತಿ ಬಂದವರು. ಆರ್ಯರ ಆಕ್ರಮಣದಿಂದಲೇ ಹರಪ್ಪ ಸಂಸ್ಕೃತಿ ನಾಶವಾಯಿತು ಎಂದು ಇತಿಹಾಸದಲ್ಲಿ ಹಲವಾರು ಸಿದ್ಧಾಂತಗಳಿವೆ. ಆದರೆ, ನೂತನ ಸರ್ವೇಕ್ಷಣಾ ಸಂಶೋಧನೆಯೊಂದು ಈ ಎಲ್ಲ ಸಿದ್ಧಾಂತಗಳನ್ನು ಬದಿಗೊತ್ತಿದೆ. ಆರ್ಯರು ಕೂಡ ಭಾರತದ ಮೂಲ ನಿವಾಸಿಗಳು ಎಂಬುದಕ್ಕೆ ಪುರಾವೆ ನೀಡಿದೆ. ಈ ಕುರಿತ ಮಾಹಿತಿ ಇಲ್ಲಿದೆ.

TIMESOFINDIA.COM 7 Sep 2019, 5:06 pm
ನವದೆಹಲಿ: ಆರ್ಯರು ಭಾರತದ ಮೂಲ ನಿವಾಸಿಗಳಲ್ಲ. ಅವರು ಆಗ್ನೇಯ ಏಷ್ಯಾದಿಂದ ಭಾರತಕ್ಕೆ ದಂಡೆತ್ತಿ ಬಂದವರು. ಹರಪ್ಪಾ ಸಂಸ್ಕೃತಿಯ ನಾಶಕ್ಕೆ ಆರ್ಯರ ಆಕ್ರಮಣವೂ ಪ್ರಮುಖ ಕಾರಣ ಎಂದು ಇತಿಹಾಸ ತಿಳಿಸುತ್ತದೆ. ಈ ಕುರಿತಂತೆ ಹಲವಾರು ವಿದ್ವಾಂಸರು ಸಿದ್ಧಾಂತಗಳನ್ನೇ ಮಂಡಿಸಿದ್ದಾರೆ.
Vijaya Karnataka Web harappa rakhigari


ಆದರೆ, ಇತ್ತೀಚೆಗೆ ಪ್ರಕಟಗೊಂಡಿರುವ ಸರ್ವೇಕ್ಷಣಾ ಅಧ್ಯಯನ ವರದಿಯೊಂದು ಆರ್ಯರ ಆಕ್ರಮಣ ಸಿದ್ಧಾಂತಗಳಿಗೆ ಸವಾಲೊಡ್ಡಿದೆ. ಆರ್ಯರು ಕೂಡ ಇಲ್ಲಿನ ಮೂಲ ನಿವಾಸಿಗಳಾಗಿರಬಹುದು ಎಂಬ ಅಂಶವನ್ನು ಬೆಳಕಿಗೆ ತಂದಿದೆ.

ಸಿಂಧೂ ನಾಗರಿಕತೆ ಪ್ರಮುಖ ತಾಣಗಳಲ್ಲಿ ಒಂದಾದ ಹರಿಯಾಣದ ರಾಖಿಗಿರಿ ನಿವೇಶನದಲ್ಲಿ ಇತ್ತೀಚೆಗಷ್ಠೇ ಮಾನವನ ಅಸ್ಥಿಪಂಜರದ ಪಳೆಯುಳಿಕೆ ದೊರೆತಿತ್ತು. ಇದನ್ನು ಡಿಎನ್‌ಎ ವಿಶ್ಲೇಷಣೆಗೆ ಒಳಪಡಿಸಿದ ನಂತರ ಇದು ಸಿಂಧೂ ನಾಗರಿಕತೆಯ ಮೂಲ ನಿವಾಸಿಯದ್ದು ಎಂಬುದು ಖಾತರಿಯಾಗಿದೆ. ಈ ಪಳೆಯುಳಿಕೆ ಕ್ರಿಸ್ತಪೂರ್ವ 7000 ದಷ್ಟು ಹಿಂದಿನದ್ದಾಗಿದೆ. ಅಂದರೆ, ಇಂದಿಗೆ ಸುಮಾರು 9 ಸಾವಿರ ವರ್ಷಗಳಷ್ಟು ಹಿಂದಿನದ್ದು. ಅಂದಿನಿಂದಲೂ ಭಾರತದಲ್ಲಿ ನೆಲೆಸಿರುವುದು ಮೂಲ ನಿವಾಸಿಗಳೇ. ಆರ್ಯರು ವಲಸೆ ಬಂದಿರುವ ಕುರಿತು ಗಮನಾರ್ಹ ಆಧಾರಗಳಿಲ್ಲ . ಹೀಗಾಗಿ ಇತಿಹಾಸದಲ್ಲಿ ಆರ್ಯರ ವಲಸೆ ಕುರಿತ ಸಿದ್ಧಾಂತಗಳನ್ನು ತೆಗೆಯಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ಈ ಮಹತ್ವದ ಸಂಶೋಧನೆಯು ಆರ್ಯರ ವಲಸೆ - ಆಕ್ರಮಣ ಸಿದ್ಧಾಂತವನ್ನು ಸಂಪೂರ್ಣವಾಗಿ ಬದಿಗೊತ್ತಿದೆ. ಅಸ್ಥಿಪಂಜರವು ಮೊಹೆಂಜೋದಾರೋ ಪ್ರದೇಶದ ಕೋಟೆಯ ಎತ್ತರದ ಪ್ರದೇಶದಲ್ಲಿ ಪತ್ತೆಯಾಗಿದೆ. ಅಲ್ಲದೆ ಇದು ಪ್ರವಾಹದಿಂದ ಮರಣ ಹೊಂದಿರುವುದೇ ಹೊರತು ಆರ್ಯರ ಆಕ್ರಮಣಗಳಿಗೆ ತುತ್ತಾಗಿರುವುದಲ್ಲ. ಆರ್ಯರ ಆಕ್ರಮಣ ಸಿದ್ಧಾಂತಗಳಿಗೆ ಯಾವುದೇ ದೃಢ ಆಧಾರಗಳಿಲ್ಲ ಎಂದು ಸಂಶೋಧನಾ ತಂಡದ ನೇತೃತ್ವ ವಹಿಸಿದ್ದ ಪುಣೆಯ ಡೆಕ್ಕನ್‌ ಕಾಲೇಜಿನ ವಿಶ್ರಾಂತ ಕುಲಪತಿ ವಸಂತ್‌ ಶಿಂಧೆ ಹೇಳಿದ್ದಾರೆ.

ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ನ ವಾಗೀಶ್‌ ನರಸಿಂಹನ್‌ ಮತ್ತು ಡೇವಿಡ್‌ ರೀಚ್‌, ಬೀರಬಲ್‌ ಸಾಹ್ನಿ ಇನ್‌ಸ್ಟಿಟ್ಯೂಟ್‌ ಆಫ್‌ ಪಾಲೆಯೋಸೈನ್ಸಸ್‌ನ ನೀರಜ್‌ ರಾಯ್‌, ಸೇರಿದಂತೆ ಒಟ್ಟು28 ಸಂಶೋಧಕರ ತಂಡ ಸಂಶೋಧನೆಯಲ್ಲಿ ತೊಡಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ