ಆ್ಯಪ್ನಗರ

ಪಾಕ್‌ಗೆ ಸಹಾಯ, ಭಾರತಕ್ಕೆ ಹಾನಿ: ಪ್ರತಿಪಕ್ಷಗಳ ವಿರುದ್ಧ ಮೋದಿ ಆರೋಪ

ಶುಕ್ರವಾರ ತಮಿಳುನಾಡಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ ಅವರು ಕನ್ಯಾಕುಮಾರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

Vijaya Karnataka 2 Mar 2019, 8:09 am
ಕನ್ಯಾಕುಮಾರಿ: ಪ್ರತಿಪಕ್ಷಗಳು ತಮ್ಮ ಹೇಳಿಕೆಗಳ ಮೂಲಕ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದ್ದು, ಭಾರತಕ್ಕೆ ಹಾನಿ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
Vijaya Karnataka Web modi 1


''ಕೆಲವು ಪಕ್ಷಗಳು 'ಮೋದಿ ದ್ವೇಷ'ದ ಹುಮ್ಮಸ್ಸಿನಲ್ಲಿ ದೇಶವನ್ನು ದ್ವೇಷಿಸಲು ಆರಂಭಿಸಿವೆ. ಭಯೋತ್ಪಾದನೆ ವಿರುದ್ಧ ಭಾರತದ ಸಮರವನ್ನು ಇಡೀ ವಿಶ್ವವೇ ಬೆಂಬಲಿಸುತ್ತಿದೆ. ಆದರೆ ಭಾರತದಲ್ಲೇ ಇರುವ ಕೆಲವೊಂದು ಪಕ್ಷಗಳು ನಮ್ಮ ಹೋರಾಟವನ್ನು ಅನುಮಾನಿಸುತ್ತಿವೆ,'' ಎಂದು ಕಿಡಿಕಾರಿದ್ದಾರೆ.

ಶುಕ್ರವಾರ ತಮಿಳುನಾಡಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ ಅವರು ಕನ್ಯಾಕುಮಾರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

''26/11 ಮುಂಬಯಿ ದಾಳಿಯ ಬಳಿಕ ಭಾರತೀಯ ಸೇನೆ ಸರ್ಜಿಕಲ್‌ ದಾಳಿ ನಡೆಸಲು ಅವಕಾಶ ಕೋರಿತ್ತು. ಆದರೆ ಅಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಅವಕಾಶ ನೀಡಲಿಲ್ಲ. ನಾವು ಭಯೋತ್ಪಾದನೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ಉಗ್ರರ ವಿರುದ್ಧ ಹೋರಾಡಲು ಸೇನೆಗೆ ನಮ್ಮ ಸರಕಾರ ಮುಕ್ತ ಅವಕಾಶ ನೀಡಿದೆ. ಭಯೋತ್ಪಾದನೆಯ ಕೈಯಲ್ಲಿ ಭಾರತ ಅಸಹಾಯಕವಾಗಿ ಸಿಲುಕುವ ಕಾಲ ಮುಗಿದಿದೆ,'' ಎಂದರು.

''26/11ರ ಮುಂಬಯಿ ದಾಳಿಯ ಬಳಿಕ ಭಯೋತ್ಪಾದಕರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ದೇಶದ ಜನರು ಬಯಸಿದ್ದರು. ಆದರೆ ಸರಕಾರ ಏನನ್ನೂ ಮಾಡಲಿಲ್ಲ. ಉರಿ ಮತ್ತು ಪುಲ್ವಾಮಾ ದಾಳಿಯ ಬಳಿಕ ನಮ್ಮ ಸೈನಿಕರ ಮಾಡಿದ ದಾಳಿಗಳು ಮತ್ತು ಅವರ ಧೈರ್ಯವನ್ನು ನೀವು ನೋಡಿದ್ದೀರಿ. ದೇಶ ಸೇವೆಯಲ್ಲಿರುವ ಆ ಯೋಧರಿಗೆ ನನ್ನ ನಮನಗಳು,'' ಎಂದರು.

ಅಭಿನಂದನ್‌ ಹೆಮ್ಮೆಯ ಪುತ್ರ: ಪಾಕ್‌ನಲ್ಲಿ ಬಂಧನಕ್ಕೊಳಗಾಗಿದ್ದ ಐಎಎಫ್‌ ವಿಗ್‌ ಕಮಾಂಡರ್‌ ಅಭಿನಂದನ್‌ ಅವರ ಧೈರ್ಯ ಸಾಹಸಗಳನ್ನು ಮೋದಿ ಶ್ಲಾಘಿಸಿದರು. ''ಭಾರತೀಯ ವಾಯುಪಡೆಯ ಪೈಲಟ್‌ ಮತ್ತು ವಿಂಗ್‌ ಕಮಾಂಡರ್‌ ಅಭಿನಂದನ್‌ ತಮಿಳುನಾಡಿನವರು ಹಾಗೂ ದೇಶದ ಮೊದಲ ರಕ್ಷ ಣಾ ಸಚಿವರು ಸಹ ತಮಿಳುನಾಡಿನವರು ಎಂಬುದು ನಮ್ಮ ಹೆಮ್ಮೆ,'' ಎಂದು ಮೋದಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ