ಆ್ಯಪ್ನಗರ

ಕೊರೊನಾ: ದೇಶದಲ್ಲಿ ಎರಡನೇ ಅಲೆ, ಡಿ.1ರಿಂದ ಹೊಸ ಕಠಿಣ ನಿರ್ಬಂಧಗಳು ಜಾರಿ, ಅಗತ್ಯ ಬಿದ್ದರೆ ನೈಟ್‌ ಕರ್ಫ್ಯೂ, ಇಲ್ಲಿದೆ ಫುಲ್‌ ಡಿಟೇಲ್ಸ್‌

ಕಚೇರಿಯಲ್ಲಿ ಸಿಬ್ಬಂದಿಗಳ ಹಾಜರಾತಿ ಪ್ರಮಾಣವನ್ನು ಕೂಡ ಇಂತಹ ಪ್ರದೇಶಗಳಲ್ಲಿ ಆದಷ್ಟು ತಗ್ಗಿಸಲು ರಾಜ್ಯ ಸರಕಾರಗಳು ಆದೇಶಿಸಬಹುದಾಗಿದೆ. ಅಂತಾರಾಜ್ಯ ಹಾಗೂ ರಾಜ್ಯದೊಳಗಿನ ಸರಕು ಸಾಗಣೆ ಮತ್ತು ಇತರ ಸಂಚಾರಕ್ಕೆ ಯಾವುದೇ ನಿರ್ಬಂಧಗಳಿರುವುದಿಲ್ಲ.

Vijaya Karnataka Web 25 Nov 2020, 11:06 pm
ಹೊಸದಿಲ್ಲಿ: ಸರಣಿ ಹಬ್ಬಗಳ ಸಡಗರ ಮುಗಿದ ಹಿನ್ನೆಲೆಯಲ್ಲಿಕೋವಿಡ್‌-19 ಪ್ರಸರಣ ತಡೆಗೆ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕಟ್ಟುನಿಟ್ಟಿನ ಕ್ರಮಗಳನ್ನು ಸಾರ್ವಜನಿಕವಾಗಿ ಜಾರಿಗೊಳಿಸಬೇಕು. ಪ್ರಮುಖವಾಗಿ ಕಂಟೈನ್‌ಮೆಂಟ್‌ ವಲಯಗಳಲ್ಲಿಅಗತ್ಯ ಸೇವೆಗಳ ಹೊರತಾಗಿ ಉಳಿದ ಎಲ್ಲ ಚಟುವಟಿಕೆಗಳಿಗೆ ಬಿಗಿ ನಿರ್ಬಂಧ ಹೇರಬೇಕು ಎಂದು ನೂತನ ಮಾರ್ಗಸೂಚಿಯಲ್ಲಿಕೇಂದ್ರ ಸರಕಾರ ಹೇಳಿದೆ. ಡಿ.1ರಿಂದ ದೇಶಾದ್ಯಂತ ಜಾರಿಗೆ ಬರಲಿರುವ ಹೊಸ ಮಾರ್ಗಸೂಚಿಯನ್ನು ಬುಧವಾರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ. ಜನದಟ್ಟಣೆ ತಡೆ, ಕೊರೊನಾ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್‌ ಧಾರಣೆ, ಕೈಗಳ ಸ್ವಚ್ಛತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಲಾಗಿದೆ. ಈ ಹಿಂದಿನ ತಿಂಗಳಲ್ಲಿ ಹಬ್ಬಗಳ ಆಚರಣೆಗಾಗಿ ಜನಸಾಮಾನ್ಯರು ಮಾರುಕಟ್ಟೆಗಳಲ್ಲಿಮುಗಿಬಿದ್ದ ಹಿನ್ನೆಲೆಯಲ್ಲಿ ಜನದಟ್ಟಣೆ ನಿಯಂತ್ರಣ ಕಷ್ಟಸಾಧ್ಯವಾಗಿತ್ತು. ಹಾಗಾಗಿ ಕೆಲವು ರಾಜ್ಯಗಳಲ್ಲಿಏಕಾಏಕಿ ಹೊಸ ಕೊರೊನಾ ಸೋಂಕಿತರ ಪ್ರಮಾಣದಲ್ಲಿಏರಿಕೆ ಕಂಡು ಬಂದು, ಕೊರೊನಾ 2ನೇ ಅಲೆ ಏಳುತ್ತಿರುವ ಆತಂಕ ಮೂಡಿತ್ತು. ಇದನ್ನು ಹತ್ತಿಕ್ಕಲು ಸದ್ಯ ಕಟ್ಟುನಿಟ್ಟಿನ ನಿರ್ಬಂಧಗಳ ಜಾರಿಗೆ ಅವಕಾಶವಿದ್ದು, ದೇಶಾದ್ಯಂತ ಸಕ್ರಿಯ ಸೋಂಕಿತರ ಸಂಖ್ಯೆಯನ್ನು ಗಣನೀಯವಾಗಿ ಇಳಿಕೆ ಮಾಡಬೇಕಿದೆ ಎಂದು ಸಚಿವಾಲಯ ತನ್ನ ಪ್ರಕಟಣೆಯಲ್ಲಿತಿಳಿಸಿದೆ.
Vijaya Karnataka Web new mha guidelines on covid strictly enforce containment measures regulate crowd
ಕೊರೊನಾ: ದೇಶದಲ್ಲಿ ಎರಡನೇ ಅಲೆ, ಡಿ.1ರಿಂದ ಹೊಸ ಕಠಿಣ ನಿರ್ಬಂಧಗಳು ಜಾರಿ, ಅಗತ್ಯ ಬಿದ್ದರೆ ನೈಟ್‌ ಕರ್ಫ್ಯೂ, ಇಲ್ಲಿದೆ ಫುಲ್‌ ಡಿಟೇಲ್ಸ್‌


​ಮನೆಮನೆಗೆ ಭೇಟಿ, ತಪಾಸಣೆ

ಕಂಟೈನ್‌ಮೆಂಟ್‌ ವಲಯಗಳಲ್ಲಿಕೊರೊನಾ ಮುನ್ನೆಚ್ಚರಿಕೆಗಳ ಅಗತ್ಯ ಪಾಲನೆ ಜತೆಗೆ ಈ ಹಿಂದೆ ಸೋಂಕು ಹೆಚ್ಚು ಹಾವಳಿ ಇಟ್ಟಿದ್ದ ಪ್ರದೇಶಗಳಲ್ಲಿಮನೆಮನೆಗೆ ಆರೋಗ್ಯಸೇವೆ ಕಾರ್ಯಕರ್ತರು ಭೇಟಿ ನೀಡಿ ತಪಾಸಣೆ ನಡೆಸಲು ಕೂಡ ಕೇಂದ್ರ ಸೂಚಿಸಿದೆ. ಈ ಮೂಲಕ ಸೋಂಕಿನಿಂದ ಚೇತರಿಕೆ ಕಂಡವರ ಸದ್ಯದ ಸ್ಥಿತಿಗತಿ ಮತ್ತು ಹೊಸ ಸೋಂಕಿತರು ವರದಿಯಾಗುತ್ತಿರುವ ಪ್ರಮಾಣವನ್ನು ನಿಖರವಾಗಿ ಪತ್ತೆ ಮಾಡಲು ಸಹಾಯವಾಗಲಿದೆ ಎಂದು ಗೃಹ ಸಚಿವಾಲಯ ಅಭಿಪ್ರಾಯಪಟ್ಟಿದೆ.

​ನಿರ್ಬಂಧ ಮುಂದುವರಿಕೆ

- ಗೃಹ ಸಚಿವಾಲಯದ ಅನುಮತಿ ಮೇರೆಗೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ

- ಚಿತ್ರಮಂದಿರಗಳಲ್ಲಿ 50% ಸೀಟುಗಳು ಮಾತ್ರ ಭರ್ತಿ

- ಕ್ರೀಡಾಸ್ಪರ್ಧಿಗಳ ಹೊರತು ಇತರರಿಗೆ ಈಜುಕೊಳಗಳಿಗೆ ಪ್ರವೇಶವಿಲ್ಲ

- ವ್ಯವಹಾರದ ಉದ್ದೇಶಕ್ಕಾಗಿ ಮಾತ್ರ ಎಕ್ಸಿಬಿಷನ್‌ ಆವರಣಗಳ ಬಳಕೆ

- ಒಳಾಂಗಣ ಸಮಾರಂಭಗಳಲ್ಲಿ 200 ಮಂದಿ ಭಾಗಿಯಾಗಲು ಮಾತ್ರ ಅವಕಾಶ

​ಪಾಸಿಟಿವಿಟಿ ಪ್ರಮಾಣ ಹೆಚ್ಚಿದ್ದರೆ ನೈಟ್‌ ಕರ್ಫ್ಯೂ

ಕೊರೊನಾ ತಪಾಸಣೆಯಲ್ಲಿಹೆಚ್ಚಿನ ಪ್ರಮಾಣದಲ್ಲಿ ಪಾಸಿಟಿವಿಟಿ ದಾಖಲಾಗುತ್ತಿದ್ದರೆ (ಶೇ.10ಕ್ಕೂ ಹೆಚ್ಚು) ಅಂತಹ ಪ್ರದೇಶಗಳಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ ಹೇರುವ ತೀರ್ಮಾನವನ್ನು ಆಯಾ ರಾಜ್ಯ ಸರಕಾರ/ಕೇಂದ್ರಾಡಳಿತ ಪ್ರದೇಶಗಳ ವಿವೇಚನೆಗೆ ಕೇಂದ್ರ ಒಪ್ಪಿಸಿದೆ. ಅದೇ ರೀತಿ ಕಚೇರಿಯಲ್ಲಿ ಸಿಬ್ಬಂದಿಗಳ ಹಾಜರಾತಿ ಪ್ರಮಾಣವನ್ನು ಕೂಡ ಇಂತಹ ಪ್ರದೇಶಗಳಲ್ಲಿ ಆದಷ್ಟು ತಗ್ಗಿಸಲು ರಾಜ್ಯ ಸರಕಾರಗಳು ಆದೇಶಿಸಬಹುದಾಗಿದೆ. ಅಂತಾರಾಜ್ಯ ಹಾಗೂ ರಾಜ್ಯದೊಳಗಿನ ಸರಕು ಸಾಗಣೆ ಮತ್ತು ಇತರ ಸಂಚಾರಕ್ಕೆ ಯಾವುದೇ ನಿರ್ಬಂಧಗಳಿರುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ