ಆ್ಯಪ್ನಗರ

ವಲಸೆ ಕಾನೂನು ಜಾರಿಗೆ ಮುಂದಾದ ಕುವೈತ್‌, ದೇಶ ಬಿಡಬೇಕಾದ ಭೀತಿಯಲ್ಲಿ 8 ಲಕ್ಷ ಭಾರತೀಯರು!

ವಲಸಿಗರನ್ನ ತನ್ನ ದೇಶದಿಂದ ಕಳುಹಿಸಲು ಕುವೈತ್‌ ಮುಂದಾಗಿದ್ದು, ಇದಕ್ಕಾಗಿ ಕಾನೂನು ಜಾರಿಗೊಳಿಸಲು ಸರಕಾರ‌ ದಿಟ್ಟ ಹೆಜ್ಜೆ ಇಟ್ಟಿದೆ. ಆದರೆ ಇದರಿಂದ ಅಂದಾಜು 7 ರಿಂದ 8 ಲಕ್ಷ ಭಾರತೀಯರಿಗೆ ಸಮಸ್ಯೆಯಾಗಲಿದೆ.

THE ECONOMIC TIMES 6 Jul 2020, 11:04 am
ಕುವೈತ್‌: ತನ್ನ ದೇಶದಲ್ಲಿರುವ ವಲಸಿಗರಿಗೆ ಸಂಬಂಧಪಟ್ಟ ಕಾನೂನು ಜಾರಿಗೊಳಿಸಲು ಕುವೈತ್ ಸರಕಾರ‌ ಮುಂದಾಗಿದೆ. ಒಂದು ವೇಳೆ ವಲಸಿಗರ ಈ ಹೊಸ ಕಾನೂನು ಕುವೈತ್‌ ಸರಕಾರ ಜಾರಿ ಮಾಡಿದರೆ ಅಂದಾಜು 7 ರಿಂದ 8 ಲಕ್ಷ ಭಾರತೀಯರು ಆ ದೇಶದಿಂದ ಹೊರದಬ್ಬಲ್ಪಡಬಹುದು ಎನ್ನುವ ಕಳವಳಕಾರಿ ಮಾಹಿತಿ ಹೊರಬಿದ್ದಿದೆ. ಸದ್ಯ ಕುವೈತ್‌ನ ರಾಷ್ಟ್ರೀಯ ಅಸೆಂಬ್ಲಿಯ ಕಾನೂನು ಮತ್ತು ಶಾಸಕಾಂಗ ಸಮಿತಿಯು , 'ವಲಸೆ ಮೀಸಲು ಕರಡು ಮಸೂದೆ'ಗೆ ಅನುಮೋದನೆ ನೀಡಿದೆ. ಶೀಘ್ರದಲ್ಲೇ ಇದು ಕಾನೂನು ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
Vijaya Karnataka Web kuwait


ಇನ್ನು ಈ ನೂತನ ಕಾನೂನು ಏನು ಹೇಳುತ್ತೆ ಅಂದರೆ, ಭಾರತೀಯರ ಜನಸಂಖ್ಯೆಯು ದೇಶದ ಒಟ್ಟು ಸಂಖ್ಯೆಗಿಂತ ಶೇ. 15 ಮೀರಬಾರದು ಎಂದಿದೆ. ಸದ್ಯ ಕುವೈತ್‌ನಲ್ಲಿ ಭಾರತೀಯ ವಲಸಿಗರು ಅತೀ ಹೆಚ್ಚು ಸಂಖ್ಯೆಯಲ್ಲಿ ಅಂದರೆ ಸುಮಾರು 1.45 ಮಿಲಿಯನ್‌ ಭಾರತೀಯ ಜನಸಂಖ್ಯೆ ಇದ್ದು, ಈ ನಿಯಮದ ಅನುಸಾರ ಸುಮಾರು 8 ಲಕ್ಷ ಭಾರತೀಯರು ಹೊರ ಕಳುಹಿಸುವ ಸಾಧ್ಯತೆ ಇದೆ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ.

ವಲಸೆ ಮೀಸಲು ಕರಡು ಮಸೂದೆಯ ಪರಿಶೀಲಿಸಿರುವ ಕುವೈತ್‌ನ ರಾಷ್ಟ್ರೀಯ ಅಸೆಂಬ್ಲಿಯ ಕಾನೂನು ಮತ್ತು ಶಾಸಕಾಂಗ ಸಮಿತಿಯು ಇದು ಸಂವಿಧಾನಾತ್ಮಕವಾಗಿದೆ ಎಂದು ಘೋಷಿಸಿರುವುದಾಗಿ ಅಲ್ಲಿನ ಮಾಧ್ಯಮಗಳು ಪ್ರಕಟಿಸಿವೆ. ನಂತರ ಆಯಾ ಸಮಿತಿಗೆ ಈ ಕರಡನ್ನ ವರ್ಗಾಯಿಸಲು ಮುಂದಾಗಿದ್ದು, ಈ ಮೂಲಕ ಸಮಗ್ರ ಯೋಜನೆಯನ್ನು ರಚಿಸಲು ಪಣ ತೊಟ್ಟಿದೆ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ. ಒಂದು ವೇಳೆ ಈ ಮಸೂದೆ ಜಾರಿಯಾಗಿದ್ದೆ ಆದಲ್ಲಿ ಈ ದೇಶದಲ್ಲಿ ಜೀವಿಸುತ್ತಿರುವ ಭಾರತೀಯರು ಕೆಲಸ ಕಳೆದುಕೊಂಡು ಅಲ್ಲಿಂದ ಹೊರಬರಬೇಕಾಗಬಹುದು.

ಮುಂದುವರಿದ ಸಿದ್ದು ಜೊತೆ ಟ್ವೀಟ್‌ ವಾರ್‌: 'ನಮ್ಮನ್ನ ಕೆಲಸ ಮಾಡಲು ಬಿಡಿ' ಎಂದು ರಾಮುಲು ಟಾಂಗ್!

ಅಲ್ಲದೇ ಅತೀ ಹೆಚ್ಚು ವಲಸಿಗರ ಪೈಕಿ ಎರಡನೇ ಸ್ಥಾನದಲ್ಲಿರುವ ಈಜಿಫ್ಟ್‌ನ ಪ್ರಜೆಗಳನ್ನು ಕಳುಹಿಸಲು ಈ ಮಸೂದೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ಈ ಮಸೂದೆಯ ಪ್ರಮುಖ ಉದ್ದೇಶ, ವಲಸಿಗರಿಂದಾಗಿ ಈ ದೇಶ ಈಗ ವಲಸೆ ಬಹುಸಂಖ್ಯಾತ ದೇಶವಾಗಿ ಬದಲಾಗುತ್ತಿದೆಯಂತೆ. ಅಲ್ಲದೇ ಸದ್ಯ ಕೊರೊನಾದಿಂದಾಗಿ ಇಂಧನ ದರವು ಕುಸಿದಿದ್ದು ಸ್ಥಳೀಯರಿಗೆ ಉದ್ಯೋಗವಕಾಶಗಳನ್ನ ನೀಡಿ, ವಲಸಿಗರ ಮೇಲಿನ ಅವಲಂಬನೆಯನ್ನ ಕಡಿಮೆಗೊಳಿಸುವ ಉದ್ದೇಶವು ಇದೆ ಎನ್ನಲಾಗಿದೆ.

ಸದ್ಯ ಇರುವ ಶೇ.70 ವಲಸಿಗರ ಪೈಕಿ ವಲಸಿಗರ ಸಂಖ್ಯೆಯನ್ನ ಶೇ.30ಕ್ಕೆಇಳಿಸುವ ಯೋಜನೆಯಾಗಿದೆ ಇದಕ್ಕಾಗಿ ಕೊರೊನಾ ಆರಂಭದಿಂದಲೆ ಸರಕಾರ ಶ್ರಮಿಸುತ್ತಿದೆ ಎಂದು ತಿಳಿದುಬಂದಿದೆ. ಸದ್ಯ ಕುವೈತ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿ ಈ ವರೆಗೆ ಈ ಬಗ್ಗೆ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಸಂಬಂಧ ಸೂಕ್ಷ್ಮವಾಗಿ ನಿಗಾ ವಹಿಸಿದೆ ಎಂದು ತಿಳಿದುಬಂದಿದೆ. ಭಾರತೀಯರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮುಂದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ