ಆ್ಯಪ್ನಗರ

ಹೊಸ ಶೂ, ಚಪ್ಪಲಿ ಕಚ್ಚುವುದು ಸಹಜ: ಜಿಎಸ್‌ಟಿ, ಅಮಾನೀಕರಣ ಬಗ್ಗೆ ಪ್ರಧಾನ್‌ ಹೇಳಿಕೆ

ನೋಟು ಅಮಾನೀಕರಣ, ಜಿಎಸ್‌ಟಿ ಮಹತ್ವಕಾಂಕ್ಷಿ ಯೋಜನೆಗಳು

TNN 24 Oct 2017, 8:30 pm
ಹೊಸದಿಲ್ಲಿ: ಹೊಸ ಶೂ, ಚಪ್ಪಲಿ ಧರಿಸಿದರೆ ಆರಂಭದಲ್ಲಿ ಕಚ್ಚುವುದು ಸಹಜ. ನಂತರ ಅದು ಸರಿ ಹೋಗುತ್ತದೆ. ಅದೇ ರೀತಿ ಹೊಸ ಯೋಜನೆಗಳು ಜಾರಿಗೆ ಬಂದಾಗ ಕೆಲವು ಸಮಸ್ಯೆಗಳು ಎದುರಾಗುವುದು ಸಹಜ. ನಂತರ ಅದು ಜನರಿಗೆ ಪ್ರಯೋಜನವಾಗಲಿದೆ.
Vijaya Karnataka Web new shoes bite initially dharmendra pradhan in defence of gst noteban
ಹೊಸ ಶೂ, ಚಪ್ಪಲಿ ಕಚ್ಚುವುದು ಸಹಜ: ಜಿಎಸ್‌ಟಿ, ಅಮಾನೀಕರಣ ಬಗ್ಗೆ ಪ್ರಧಾನ್‌ ಹೇಳಿಕೆ


ಈ ರೀತಿಯ ವಿಶ್ಲೇಷಣೆಯನ್ನು ನೀಡಿರುವುದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌.

ನೋಟು ಅಮಾನೀಕರಣ ಹಾಗೂ ಜಿಎಸ್‌ಟಿ ಬಗ್ಗೆ ಪ್ರತಿಪಕ್ಷಗಳು ಮಾಡುತ್ತಿರುವ ಟೀಕೆಗಳಿಗೆ ಪ್ರಧಾನ್‌ ಈ ರೀತಿಯ ವಿಶ್ಲೇಷಣಾತ್ಮಕ ತಿರುಗೇಟು ನೀಡಿದ್ದಾರೆ.

ನೋಟು ಅಮಾನೀಕರಣ ಮತ್ತು ಜಿಎಸ್‌ಟಿ ಜಾರಿಯಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ. ನಿಜ. ಆರಂಭದಲ್ಲಿ ಕೆಲವು ಲೋಪಗಳು ಕಂಡುಬಂದಿವೆ. ಅದೆಲ್ಲವೂ ಈಗ ಸರಿ ಹೋಗುತ್ತಿದೆ ಎಂದು ಪ್ರಧಾನ್‌ ತಿಳಿಸಿದರು.

ಜಿಎಸ್‌ಟಿ, ನೋಟು ಅಮಾನೀಕರಣದಿಂದಾಗಿ ಉದ್ಯೋಗ ಕಡಿತಗೊಂಡಿವೆ ಎಂಬ ಪ್ರತಿಪಕ್ಷಗಳ ಟೀಕೆ ತಪ್ಪು. ಈ ರೀತಿಯ ಯಾವುದೇ ಸಮಸ್ಯೆ ಉದ್ಭವವಾಗಿಲ್ಲ. ಜಿಎಸ್‌ಟಿ ಅನುಷ್ಠಾನಗೊಂಡಾಗಿನಿಂದಲೂ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಸಚಿವರು ವಿವರಿಸಿದರು.

ಜಿಎಸ್‌ಟಿ ಅನ್ನು ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ ಎಂದು ರಾಹುಲ್‌ ಗಾಂಧಿ ಹೇಳಿಕೆ ನೀಡಿರುವುದು ಅಪ್ರಬುದ್ಧ ಹಾಗೂ ಅನಾಗರಿಕತೆಯಿಂದ ಕೂಡಿದ್ದಾಗಿದೆ ಎಂದು ಧರ್ಮೇಂದ್ರ ಪ್ರಧಾನ್‌ ತಿರುಗೇಟು ನೀಡಿದರು.

New shoes bite initially: Dharmendra Pradhan in defence of GST, noteban

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ