ಆ್ಯಪ್ನಗರ

ಅಸ್ಸಾಂನಿಂದ ರಾಜ್ಯಸಭೆವರೆಗೆ, ಮಾಜಿ ಸಿಎಂ ಪುತ್ರ ನ್ಯಾ. ರಂಜನ್‌ ಗೊಗೊಯ್ ವ್ಯಕ್ತಿಚಿತ್ರ

ನಿವೃತ್ತಿ ನಂತರ ಪ್ರಮುಖ ಹುದ್ದೆ ಅಲಂಕರಿಸಿದವರಲ್ಲಿ ಗೊಗೊಯ್‌ ಮೊದಲಿಗರೇನಲ್ಲ. ಈ ಹಿಂದೆ ವಿಶ್ರಾಂತ ಸಿಜೆಐ ರಂಗನಾಥ್‌ ಮಿಶ್ರಾ ಅವರೂ ಕಾಂಗ್ರೆಸ್‌ ಸೇರಿ ಸಂಸದರಾಗಿದ್ದರು. ಮತ್ತೊಬ್ಬ ನಿವೃತ್ತ ಸಿಜೆಐ ಪಿ. ಸದಾಶಿವಂ ಅವರನ್ನು ಪ್ರಧಾನಿ ಮೋದಿ ಸರಕಾರ ಈ ಹಿಂದೆ ಕೇರಳ ರಾಜ್ಯಪಾಲರನ್ನಾಗಿ ನೇಮಿಸಿತ್ತು.

Agencies 17 Mar 2020, 5:50 pm

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರನ್ನು ಕೇಂದ್ರ ಸರಕಾರ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಸೋಮವಾರ ಸಂಜೆ ನಾಮನಿರ್ದೇಶನ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
Vijaya Karnataka Web Former Chief Justice of India Justice Ranjan Gogoi


2019ರ ನವೆಂಬರ್‌ 17ರಂದು ಗೊಗೊಯ್‌ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು. ಗೊಗೊಯ್‌ ಅವರು 2001ರಲ್ಲಿ ಗುವಾಹಟಿ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. 2010ರಲ್ಲಿ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ಗೆ ವರ್ಗ ಮಾಡಲಾಗಿತ್ತು. 2011ರಲ್ಲಿಇದೇ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಹೊಂದಿದ್ದರು.

2012ರ ಏ. 23ರಿಂದ 2019ರ ನವೆಂಬರ್‌ವರೆಗೂ ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಅಯೋಧ್ಯೆ ಭೂ ವಿವಾದ ಕುರಿತು ಮಹತ್ತರ ತೀರ್ಪು ನೀಡಿದ್ದ ಪೀಠದಲ್ಲಿದ್ದರು. 1954 ರ ನವೆಂಬರ್‌ 18 ರಂದು ಜನಿಸಿದ್ದ ರಂಜನ್‌ ಗೊಗೊಯಿ, 1978 ರಲ್ಲಿ ಬಾರ್‌ ಕೌನ್ಸಿಲ್‌ಗೆ ಸೇರಿ, ಗುವಾಹಟಿ ಹೈಕೋರ್ಟ್‌ ವಕೀಲರಾಗಿ ಕೆಲಸ ಮಾಡಿದ್ದರು. ಇವರು ಅಸ್ಸಾಂ ರಾಜ್ಯದ ಮಾಜಿ ಮುಖ್ಯಮಂತ್ರಿ ಕೇಶಬ್‌ ಚಂದ್ರ ಗೊಗೊಯ್‌ ಅವರ ಪುತ್ರ.

ಪ್ರಮಾಣವಚನ ಸ್ವೀಕರಿಸಿ ಆಮೇಲೆ ಮಾತಾಡ್ತೇನೆ: ರಂಜನ್ ಗೊಗೊಯಿ

ರಂಜನ್‌ ಅವರು ದಿಲ್ಲಿಯ ಸೇಂಟ್‌ ಸ್ಟೇಫೆನ್ಸ್‌ ಕಾಲೇಜ್‌ನಲ್ಲಿ ಇತಿಹಾಸದಲ್ಲಿ (ಹಾನರ್ಸ್‌) ಪದವಿ ಹಾಗೂ ದಿಲ್ಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. ಈ ಹಿಂದೆ ವಿಶ್ರಾಂತ ಸಿಜೆಐ ರಂಗನಾಥ್‌ ಮಿಶ್ರಾ ಅವರೂ ಕಾಂಗ್ರೆಸ್‌ ಸೇರಿ ಸಂಸದರಾಗಿದ್ದರು. ಮತ್ತೊಬ್ಬ ನಿವೃತ್ತ ಸಿಜೆಐ ಪಿ. ಸದಾಶಿವಂ ಅವರನ್ನು ಪ್ರಧಾನಿ ಮೋದಿ ಸರಕಾರ ಈ ಹಿಂದೆ ಕೇರಳ ರಾಜ್ಯಪಾಲರನ್ನಾಗಿ ನೇಮಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ