ವಿಜಯವಾಡ: ಆಂಧ್ರಪ್ರದೇಶ ವಿಧಾನಸಭೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನೂತನ ಶಾಸಕರೊಬ್ಬರು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ ವ್ಯಕ್ತಿನಿಷ್ಠೆಯ ಪರಾಕಾಷ್ಠೆ ಪ್ರದರ್ಶಿಸಿದ್ದಾರೆ. ನೆಲ್ಲೂರು ಗ್ರಾಮಾಂತರ ಕ್ಷೇತ್ರದ ಶಾಸಕ ಕೋಟಂರೆಡ್ಡಿ ಶ್ರೀಧರ್ರೆಡ್ಡಿ ಅಂತಹದ್ದೊಂದು ನಿಷ್ಠೆ ಪ್ರದರ್ಶಿಸಿದ ಶಾಸಕ. ಆದರೆ, ನಿಯಮಾವಳಿಗಳ ಪ್ರಕಾರ ಅದಕ್ಕೆ ಅವಕಾಶ ಇಲ್ಲದ್ದರಿಂದ ಸ್ಪೀಕರ್ ಸಂಬಂಗಿ ಅಪ್ಪಳ ನಾಯ್ಡು ಅವರು, ಮರು ಪ್ರಮಾಣ ವಚನಕ್ಕೆ ಶ್ರೀಧರ್ರೆಡ್ಡಿಗೆ ಸೂಚನೆ ನೀಡಿದರು. ಬಳಿಕ ಅವರು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ''ಜಗನ್ ಬಗ್ಗೆ ನನಗೆ ಅಪಾರ ಅಭಿಮಾನ ಇದೆ. ನನ್ನನ್ನು ಅವರು ಎರಡು ಬಾರಿ ಶಾಸಕನನ್ನಾಗಿ ಮಾಡಿದ್ದಾರೆ. ಅವರಿಂದ ನಾನು ಯಾವುದೇ ಸ್ಥಾನಮಾನ ನಿರೀಕ್ಷಿಸುವುದಿಲ್ಲ. ಕೇವಲ ಅವರ ಮೇಲಿನ ಪ್ರೀತಿಯಿಂದ ಹೀಗೆ ಮಾಡಿದೆ'' ಎಂದು ಶ್ರೀಧರ್ ರೆಡ್ಡಿ ಹೇಳಿದ್ದಾರೆ.
ಸಿಎಂ ಜಗನ್ ಮೋಹನ್ ರೆಡ್ಡಿ ಹೆಸರಿನಲ್ಲಿ ಶಾಸಕ ಪ್ರಮಾಣ!
ನೆಲ್ಲೂರು ಗ್ರಾಮಾಂತರ ಕ್ಷೇತ್ರದ ಶಾಸಕ ಕೋಟಂರೆಡ್ಡಿ ಶ್ರೀಧರ್ರೆಡ್ಡಿ ಅಂತಹದ್ದೊಂದು ನಿಷ್ಠೆ ಪ್ರದರ್ಶಿಸಿದ ಶಾಸಕ.
Agencies 14 Jun 2019, 5:00 am