ಹೊಸದಿಲ್ಲಿ: ದಿಲ್ಲಿ ವಾಯು ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗುತ್ತಿರುವ ನೆರೆಯ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಜಮೀನುಗಳಲ್ಲಿನ ಕೃಷಿ ತ್ಯಾಜ್ಯ ಸುಡುವ ಸಮಸ್ಯೆ ಇತ್ಯರ್ಥಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ವಿವರ ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶಿಸಿದೆ. ಸಮಸ್ಯೆ ನಿವಾರಣೆ ದಿಸೆಯಲ್ಲಿ ಕೈಗೊಂಡಿರುವ ಕಾರ್ಯಯೋಜನೆ ಜಾರಿಯ ಪ್ರಗತಿ ಕುರಿತು ವರದಿ ನೀಡುವಂತೆ ಎನ್ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್, ಮೂರು ರಾಜ್ಯಗಳಿಗೆ ಸೂಚನೆ ನೀಡಿದರು. ವಾಯು ಮಾಲಿನ್ಯ ನಿವಾರಣೆಗೆ ಇದುವರೆಗೆ ಕೈಗೊಂಡ ಕ್ರಮಗಳ ಜತೆಗೆ ಮುಂದಿನ ದಿನಗಳಲ್ಲಿ ಅನುಸರಿಸುವ ಮಾರ್ಗೋಪಾಯಗಳ ವಿವರ ನೀಡುವಂತೆ ನ್ಯಾಯಮೂರ್ತಿ ಗೋಯಲ್ ಆಗ್ರಹಿಸಿದರು.
ದಿಲ್ಲಿ ವಾಯು ಮಾಲಿನ್ಯ: ಮೂರು ರಾಜ್ಯಗಳಿಂದ ವರದಿ ಕೇಳಿದ ಎನ್ಜಿಟಿ
ಸಮಸ್ಯೆ ನಿವಾರಣೆ ದಿಸೆಯಲ್ಲಿ ಕೈಗೊಂಡಿರುವ ಕಾರ್ಯಯೋಜನೆ ಜಾರಿಯ ಪ್ರಗತಿ ಕುರಿತು ವರದಿ ನೀಡುವಂತೆ ಎನ್ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್, ಮೂರು ರಾಜ್ಯಗಳಿಗೆ ಸೂಚನೆ ನೀಡಿದರು.
PTI 10 Jul 2019, 5:00 am