ಕಚ್ (ಗುಜರಾತ್): ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿಯ (Gangster Lawrence Bishnoi) ಸಹಚರ ಕುಲ್ವಿಂದರ್ಗೆ ಸೇರಿದ ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ದಾಳಿ ನಡೆಸಿದೆ. ಇದರೊಂದಿಗೆ ಎಂಟು ರಾಜ್ಯಗಳಲ್ಲಿ ಸುಮಾರು 70 ಕಡೆ ಎನ್ಐಎ (NIA) ಪರಿಶೀಲನೆ ಕೈಗೊಂಡಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ, ದಿಲ್ಲಿ, ಚಂಡೀಗಢ, ಉತ್ತರ ಪ್ರದೇಶ, ಗುಜರಾತ್ ಹಾಗೂ ಮಧ್ಯ ಪ್ರದೇಶದಲ್ಲಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆ ನಡೆದಿದೆ.
ಲಾರೆನ್ಸ್ ಬಿಷ್ಣೋಯಿ ಜೊತೆಗಿನ ದೀರ್ಘ ಕಾಲದ ಸಹಚರ ಕುಲ್ವಿಂದರ್ಗೆ ಸೇರಿದ ಗಾಂಧಿಧಾಮದ ಜಾಗಗಳಲ್ಲಿ ಎನ್ಐಎ ತಂಡ ಹುಡುಕಾಟ ನಡೆಸಿದೆ. ಬಿಷ್ಣೋಯಿ ಗ್ಯಾಂಗ್ನ ವ್ಯಕ್ತಿಗಳಿಗೆ ಆಶ್ರಯ ನೀಡಿರುವ ಆರೋಪಗಳು ಕುಲ್ವಿಂದರ್ ಮೇಲಿವೆ. ಆತ ಅಂತಾರಾಷ್ಟ್ರೀಯ ಡ್ರಗ್ ಸಿಂಡಿಕೇಟ್ಸ್ನೊಂದಿಗೆ ಸಂಪರ್ಕ ಹೊಂದಿರುವುದಾಗಿ ತಿಳಿದು ಬಂದಿದೆ.
ಗ್ಯಾಂಗ್ಸ್ಟರ್ ಬಿಷ್ಣೋಯಿ, ನೀರಜ್ ಬಾವನಾ ಹಾಗೂ ಅವರ ಸಹಚರರ ವಿರುದ್ಧ ಎನ್ಐಎ ಕೈಗೊಂಡಿರುವ ಅತಿ ದೊಡ್ಡ ಕಾರ್ಯಾಚರಣೆ ಇದಾಗಿದೆ. ಬಿಷ್ಣೋಯಿ ಮತ್ತು ಆತನ ಅಪರಾಧ ಜಗತ್ತಿನ ಸಹಚರರ ವಿರುದ್ಧ ದಾಖಲಾಗಿರುವ ಹಲವು ಪ್ರಕರಣಗಳನ್ನು ಎನ್ಐಎ ಕೈಗೆತ್ತು ಕೊಂಡಿದ್ದು, ಮಂಗಳವಾರ ಸುಮಾರು 70 ಜಾಗಗಳಲ್ಲಿ ದಾಳಿ ನಡೆಸಲಾಗಿದೆ. ಬಿಷ್ಣೋಯಿಯ ಸಂಪರ್ಕ ಜಾಲದ ಮೇಲೆ ನಾಲ್ಕನೇ ಬಾರಿಗೆ ಎನ್ಐಎ ಕಾರ್ಯಾಚರಣೆ ನಡೆಸಿದೆ.
ಪಂಜಾಬ್ನಲ್ಲೇ ಸುಮಾರು 30 ಜಾಗಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ಹರಿಯಾಣದ ಯಮುನಾ ನಗರ ಹಾಗೂ ಆಜಾದ್ ನಗರದಲ್ಲಿ ಎನ್ಐಎ ಜೊತೆಗೆ ಸ್ಥಳೀಯ ಪೊಲೀಸರೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಸಾರ್ವಜನಿಕರಲ್ಲಿ ಭಯ ಉಂಟು ಮಾಡಲು ಉಗ್ರರರು, ಗ್ಯಾಂಗ್ಸ್ಟರ್ಗಳು ಹಾಗೂ ಡ್ರಗ್ ಸ್ಮಗ್ಲರ್ಗಳ ಗುಂಪು ಸಂಚು ರೂಪಿಸುತ್ತಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯಿನನ್ನು ಎನ್ಐಎ 2022ರ ನವೆಂಬರ್ 24ರಂದು ಬಂಧಿಸಿತ್ತು. ಆಗ ಆತ ಭಟಿಂಡಾ ಜೈಲು ವಾಸದಲ್ಲಿದ್ದ.
ಏನಿದು ಸಂಚು?
ಡ್ರಗ್ ಸಾಗಣೆ, ಹಲ್ಲೆ ಪ್ರಕರಣಗಳಿಗೆ ಅಷ್ಟೇ ಗ್ಯಾಂಗ್ಸ್ಟರ್ಗಳು ಸೀಮಿತವಾಗಿರಲಿಲ್ಲ. ದಿಲ್ಲಿ ಸೇರಿದಂತೆ ದೇಶದ ವಿವಿಧೆಡೆ ದೊಡ್ಡ ಮಟ್ಟದಲ್ಲಿ ಭಯೋತ್ಪಾದನೆ ಸೃಷ್ಟಿಸುವ ಸಂಚನ್ನು ಇವರ ಜಾಲವು ರೂಪಿಸುತ್ತಿತ್ತು. ಯುವಕರನ್ನು ಗ್ಯಾಂಗ್ಗಳಿಗೆ ಸೇರಿಸಿಕೊಳ್ಳುವುದು, ದೇಶ ಮತ್ತು ವಿದೇಶಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಸಂಗ್ರಹಿಸುವುದು, ಪ್ರಖ್ಯಾತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟು ಮಾಡುವ ಉದ್ದೇಶ ಹೊಂದಲಾಗಿತ್ತು. ಈ ಬಗ್ಗೆ ಮೊದಲಿಗೆ ದಿಲ್ಲಿ ಪೊಲೀಸ್ ಸ್ಪೆಷಲ್ ಸೆಲ್ನಲ್ಲಿ 2022ರ ಆಗಸ್ಟ್ 4ರಂದು ಪ್ರಕರಣ ದಾಖಲಾಗಿತ್ತು. ಅನಂತರ ಎನ್ಐಎ ಅದರ ತನಿಖೆ ಕೈಗೊಂಡಿತ್ತು.
ಬಿಷ್ಣೋಯಿ ನೇತೃತ್ವದಲ್ಲಿ ಭಯೋತ್ಪಾದಕರು-ಗ್ಯಾಂಗ್ಸ್ಟರ್-ಡ್ರಗ್ ಸ್ಮಗ್ಲರ್ಗಳ ಗುಂಪು ಹಲವು ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದೆ. ಇದರೊಂದಿಗೆ ಉದ್ಯಮಿಗಳು, ವೈದ್ಯರು ಹಾಗೂ ಇತರೆ ವೃತ್ತಿಪರರಿಂದ ಹಣ ಸುಲಿಗೆ ಮಾಡಿರುವ ಪ್ರಕರಣಗಳಲ್ಲೂ ಭಾಗಿಯಾಗಿರುವುದಾಗಿ ಎನ್ಐಎ ಪತ್ತೆ ಮಾಡಿದೆ.
ಡ್ರಗ್, ಶಸ್ತ್ರಾಸ್ತ್ರಗಳ ಸ್ಮಗ್ಲಿಂಗ್, ಸುಲಿಗೆ, ಹತ್ಯೆ ಹಾಗೂ ಭಯೋತ್ಪಾದನಾ ಚಟುವಟಿಕೆಗಳನ್ನು ಲಾರೆನ್ಸ್ ಬಿಷ್ಣೋಯಿ ಜೈಲಿನಲ್ಲಿ ಕುಳಿತೆ ನಿರ್ವಹಿಸುತ್ತಿದ್ದ. ವ್ಯವಸ್ಥಿತ ಸಂಪರ್ಕ ಜಾಲದ ಮುಖೇನ ಎಲ್ಲ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದ ಎಂಬುದು ತಿಳಿದು ಬಂದಿದೆ.
ಲಾರೆನ್ಸ್ ಬಿಷ್ಣೋಯಿ ಜೊತೆಗಿನ ದೀರ್ಘ ಕಾಲದ ಸಹಚರ ಕುಲ್ವಿಂದರ್ಗೆ ಸೇರಿದ ಗಾಂಧಿಧಾಮದ ಜಾಗಗಳಲ್ಲಿ ಎನ್ಐಎ ತಂಡ ಹುಡುಕಾಟ ನಡೆಸಿದೆ. ಬಿಷ್ಣೋಯಿ ಗ್ಯಾಂಗ್ನ ವ್ಯಕ್ತಿಗಳಿಗೆ ಆಶ್ರಯ ನೀಡಿರುವ ಆರೋಪಗಳು ಕುಲ್ವಿಂದರ್ ಮೇಲಿವೆ. ಆತ ಅಂತಾರಾಷ್ಟ್ರೀಯ ಡ್ರಗ್ ಸಿಂಡಿಕೇಟ್ಸ್ನೊಂದಿಗೆ ಸಂಪರ್ಕ ಹೊಂದಿರುವುದಾಗಿ ತಿಳಿದು ಬಂದಿದೆ.
ಗ್ಯಾಂಗ್ಸ್ಟರ್ ಬಿಷ್ಣೋಯಿ, ನೀರಜ್ ಬಾವನಾ ಹಾಗೂ ಅವರ ಸಹಚರರ ವಿರುದ್ಧ ಎನ್ಐಎ ಕೈಗೊಂಡಿರುವ ಅತಿ ದೊಡ್ಡ ಕಾರ್ಯಾಚರಣೆ ಇದಾಗಿದೆ. ಬಿಷ್ಣೋಯಿ ಮತ್ತು ಆತನ ಅಪರಾಧ ಜಗತ್ತಿನ ಸಹಚರರ ವಿರುದ್ಧ ದಾಖಲಾಗಿರುವ ಹಲವು ಪ್ರಕರಣಗಳನ್ನು ಎನ್ಐಎ ಕೈಗೆತ್ತು ಕೊಂಡಿದ್ದು, ಮಂಗಳವಾರ ಸುಮಾರು 70 ಜಾಗಗಳಲ್ಲಿ ದಾಳಿ ನಡೆಸಲಾಗಿದೆ. ಬಿಷ್ಣೋಯಿಯ ಸಂಪರ್ಕ ಜಾಲದ ಮೇಲೆ ನಾಲ್ಕನೇ ಬಾರಿಗೆ ಎನ್ಐಎ ಕಾರ್ಯಾಚರಣೆ ನಡೆಸಿದೆ.
ಪಂಜಾಬ್ನಲ್ಲೇ ಸುಮಾರು 30 ಜಾಗಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ಹರಿಯಾಣದ ಯಮುನಾ ನಗರ ಹಾಗೂ ಆಜಾದ್ ನಗರದಲ್ಲಿ ಎನ್ಐಎ ಜೊತೆಗೆ ಸ್ಥಳೀಯ ಪೊಲೀಸರೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಸಾರ್ವಜನಿಕರಲ್ಲಿ ಭಯ ಉಂಟು ಮಾಡಲು ಉಗ್ರರರು, ಗ್ಯಾಂಗ್ಸ್ಟರ್ಗಳು ಹಾಗೂ ಡ್ರಗ್ ಸ್ಮಗ್ಲರ್ಗಳ ಗುಂಪು ಸಂಚು ರೂಪಿಸುತ್ತಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯಿನನ್ನು ಎನ್ಐಎ 2022ರ ನವೆಂಬರ್ 24ರಂದು ಬಂಧಿಸಿತ್ತು. ಆಗ ಆತ ಭಟಿಂಡಾ ಜೈಲು ವಾಸದಲ್ಲಿದ್ದ.
ಏನಿದು ಸಂಚು?
ಡ್ರಗ್ ಸಾಗಣೆ, ಹಲ್ಲೆ ಪ್ರಕರಣಗಳಿಗೆ ಅಷ್ಟೇ ಗ್ಯಾಂಗ್ಸ್ಟರ್ಗಳು ಸೀಮಿತವಾಗಿರಲಿಲ್ಲ. ದಿಲ್ಲಿ ಸೇರಿದಂತೆ ದೇಶದ ವಿವಿಧೆಡೆ ದೊಡ್ಡ ಮಟ್ಟದಲ್ಲಿ ಭಯೋತ್ಪಾದನೆ ಸೃಷ್ಟಿಸುವ ಸಂಚನ್ನು ಇವರ ಜಾಲವು ರೂಪಿಸುತ್ತಿತ್ತು. ಯುವಕರನ್ನು ಗ್ಯಾಂಗ್ಗಳಿಗೆ ಸೇರಿಸಿಕೊಳ್ಳುವುದು, ದೇಶ ಮತ್ತು ವಿದೇಶಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಸಂಗ್ರಹಿಸುವುದು, ಪ್ರಖ್ಯಾತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟು ಮಾಡುವ ಉದ್ದೇಶ ಹೊಂದಲಾಗಿತ್ತು. ಈ ಬಗ್ಗೆ ಮೊದಲಿಗೆ ದಿಲ್ಲಿ ಪೊಲೀಸ್ ಸ್ಪೆಷಲ್ ಸೆಲ್ನಲ್ಲಿ 2022ರ ಆಗಸ್ಟ್ 4ರಂದು ಪ್ರಕರಣ ದಾಖಲಾಗಿತ್ತು. ಅನಂತರ ಎನ್ಐಎ ಅದರ ತನಿಖೆ ಕೈಗೊಂಡಿತ್ತು.
ಬಿಷ್ಣೋಯಿ ನೇತೃತ್ವದಲ್ಲಿ ಭಯೋತ್ಪಾದಕರು-ಗ್ಯಾಂಗ್ಸ್ಟರ್-ಡ್ರಗ್ ಸ್ಮಗ್ಲರ್ಗಳ ಗುಂಪು ಹಲವು ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದೆ. ಇದರೊಂದಿಗೆ ಉದ್ಯಮಿಗಳು, ವೈದ್ಯರು ಹಾಗೂ ಇತರೆ ವೃತ್ತಿಪರರಿಂದ ಹಣ ಸುಲಿಗೆ ಮಾಡಿರುವ ಪ್ರಕರಣಗಳಲ್ಲೂ ಭಾಗಿಯಾಗಿರುವುದಾಗಿ ಎನ್ಐಎ ಪತ್ತೆ ಮಾಡಿದೆ.
ಡ್ರಗ್, ಶಸ್ತ್ರಾಸ್ತ್ರಗಳ ಸ್ಮಗ್ಲಿಂಗ್, ಸುಲಿಗೆ, ಹತ್ಯೆ ಹಾಗೂ ಭಯೋತ್ಪಾದನಾ ಚಟುವಟಿಕೆಗಳನ್ನು ಲಾರೆನ್ಸ್ ಬಿಷ್ಣೋಯಿ ಜೈಲಿನಲ್ಲಿ ಕುಳಿತೆ ನಿರ್ವಹಿಸುತ್ತಿದ್ದ. ವ್ಯವಸ್ಥಿತ ಸಂಪರ್ಕ ಜಾಲದ ಮುಖೇನ ಎಲ್ಲ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದ ಎಂಬುದು ತಿಳಿದು ಬಂದಿದೆ.