ಆ್ಯಪ್ನಗರ

ಉಗ್ರರಿಗೆ ಹಣ ಪೂರೈಕೆ: ಜಮ್ಮು ಕಾಶ್ಮೀರದ 11 ಕಡೆ ಎನ್‌ಐಎ ದಾಳಿ

ಟ್ರಾಲ್, ಅವಂತಿಪೋರಾ ಹಾಗೂ ಪುಲ್ವಾಮಾದಲ್ಲಿ ಜೈಷೆ ಮೊಹಮ್ಮದ್ ಸಂಘಟನೆಯ ಸಕ್ರಿಯ ಕಾರ್ಯಕರ್ತರ ಮನೆಗಳ ಮೇಲೂ ಶೋಧನೆ ನಡೆಸಲಾಯಿತು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

Vijaya Karnataka Web 27 Feb 2019, 9:42 pm
ಹೊಸದಿಲ್ಲಿ: ಪುಲ್ವಾಮಾ ಭಯೋತ್ಪಾದಕ ದಾಳಿ ಪ್ರಕರಣ ಹಾಗೂ ಭಯೋತ್ಪಾದಕರಿಗೆ ಹಣ ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ದಕ್ಷಿಣ ಕಾಶ್ಮೀರದ 11 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧನೆ ನಡೆಸಿತು.
Vijaya Karnataka Web ಎನ್‌ಐಎ
ಎನ್‌ಐಎ


ಇಬ್ಬರು ಜೈಷೆ ಮೊಹಮ್ಮದ್ ಭಯೋತ್ಪಾದಕರ ಮನೆಗಳು ಹಾಗೂ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿಗಳಾದ ಮುದಸರ್ ಅಹಮ್ಮದ್ ಹಾಗೂ ಸಜ್ಜಾನ್ ಭಟ್ ಅವರ ನಿವಾಸಗಳು ಸೇರಿದಂತೆ ಹಲವು ಕಡೆ ಶೋಧನೆ ನಡೆಸಲಾಯಿತು.

ಟ್ರಾಲ್, ಅವಂತಿಪೋರಾ ಹಾಗೂ ಪುಲ್ವಾಮಾದಲ್ಲಿ ಜೈಷೆ ಮೊಹಮ್ಮದ್ ಸಂಘಟನೆಯ ಸಕ್ರಿಯ ಕಾರ್ಯಕರ್ತರ ಮನೆಗಳ ಮೇಲೂ ಶೋಧನೆ ನಡೆಸಲಾಯಿತು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಗುಪ್ತ ಬರಹಗಳನ್ನು ಒಳಗೊಂಡ ಡೈರಿ ಸೇರಿದಂತೆ ಆಕ್ಷೇಪಾರ್ಹ ಮಾಹಿತಿಗಳನ್ನು ತನಿಖಾ ಸಂಸ್ಥೆ ವಶಪಡಿಸಿಕೊಂಡಿದೆ.

ದಕ್ಷಿಣ ಕಾಶ್ಮೀರದ ಮೂರು ಪ್ರತ್ಯೇಕತಾವಾದಿ ನಾಯಕರ ಮನೆಗಳ ಮೇಲೂ ಶೋಧನೆ ನಡೆಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ