ಆ್ಯಪ್ನಗರ

ಹರಿಯಾಣ ನಿಕಿತಾ ಮರ್ಡರ್‌ ಕೇಸ್‌: ಆರೋಪಿಗಳಾದ ತೌಸೀಫ್‌-ರೇಹಾನ್‌ ಅರೆಸ್ಟ್‌, ಲವ್‌ ಜಿಹಾದ್‌ ಬಳಿಕ ಹಳೆ ವೈಷಮ್ಯದ ಟ್ವಿಸ್ಟ್‌!

ಗುಂಡೇಟಿಗೆ ಬಲಿಯಾದ 21 ವರ್ಷದ ವಿದ್ಯಾರ್ಥಿನಿಯ ಹೆಸರು ನಿಖಿತಾ ತೋಮರ್‌. ಫರೀದಾಬಾದ್‌ನ ಬಲ್ಲಭಗಢದ ಕಾಲೇಜೊಂದರಲ್ಲಿ ಬಿ.ಕಾಂ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದ ನಿಖಿತಾ ಪರೀಕ್ಷೆ ಬರೆಯಲು ಸೋಮವಾರ ಕಾಲೇಜಿಗೆ ಬಂದಿದ್ದಳು. ಇವಳೊಂದಿಗೆ 2018ರಿಂದಲೂ ಸ್ನೇಹ ಇರಿಸಿಕೊಂಡಿದ್ದ ತೌಸೀಫ್‌ ಹಾಗೂ ಆತನ ಸ್ನೇಹಿತ ರೇಹಾನ್‌ ಕಾರಿನಲ್ಲಿ ಬಂದು ಹೊಂಚು ಹಾಕಿ ಕುಳಿತಿದ್ದರು. ನಿಖಿತಾ ಪರೀಕ್ಷೆ ಮುಗಿಸಿ ಗೆಳತಿಯ ಜತೆ ಹೊರಬಂದ ಕೂಡಲೇ ಆಕೆಯತ್ತ ಬಂದ ಇವರಿಬ್ಬರೂ ಕಾರಿನಲ್ಲಿ ಕುಳಿತುಕೊಳ್ಳುವಂತೆ ಬಲವಂತ ಮಾಡಿದರು. ಬಳಿಕ ನಡೆದಿದ್ದು ಬೆಚ್ಚಿಬೀಳಿಸುವ ದೃಶ್ಯ.

Vijaya Karnataka Web 28 Oct 2020, 10:01 am
ಫರೀದಾಬಾದ್‌: ಅಪಹರಣದ ವಿಫಲ ಯತ್ನದ ಬಳಿಕ ಕುಪಿತಗೊಂಡ ದುಷ್ಕರ್ಮಿಯೊಬ್ಬ ಹಾಡಹಗಲೇ ಕಾಲೇಜು ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಬೆಚ್ಚಿ ಬೀಳಿಸುವ ವಿಡಿಯೊ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಹರಿಯಾಣದ ಫರೀದಾಬಾದ್‌ನಲ್ಲಿಈ ಬರ್ಬರ ಕೃತ್ಯ ಸೋಮವಾರ ಮಧ್ಯಾಹ್ನ ನಡೆದಿದೆ. ಇನ್ನು ಯುವತಿಯನ್ನು ಶೂಟ್‌ ಮಾಡಿದ ಯುವಕ ಹಾಗೂ ಆತನಿಗೆ ಸಹಾಯ ಮಾಡಿದ ಗೆಳಯನನ್ನು ಫರೀದಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಘಟನೆ ಬಳಿಕ ಶೂಟೌಟ್‌ ನಡೆಸಿ ಪ್ರಮುಖ ಆರೋಪಿ ತೌಸೀಫ್‌ ಎಂಬಾತನನ್ನು ಮೊದಲು ಪೊಲೀಸರು ಬಂಧಿಸಿದ್ದರು ಇದೀಗ ಘಟನೆಗೆ ಸಹಾಯ ಮಾಡಿದ ರೇಹಾನ್‌ನನ್ನೂ ಕೂಡ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಸ್ಥಳದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಜಾಲಾಡಿದ ಪೊಲೀಸರು, ಮಂಗಳವಾರ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು ತೀವ್ರ ತರದಲ್ಲಿ ವಿಚಾರಣೆ ನಡೆಸಿದ್ದಾರೆ.
Vijaya Karnataka Web nikita tomar murder tauseef killed college student out of revenge for earlier arrest
ಹರಿಯಾಣ ನಿಕಿತಾ ಮರ್ಡರ್‌ ಕೇಸ್‌: ಆರೋಪಿಗಳಾದ ತೌಸೀಫ್‌-ರೇಹಾನ್‌ ಅರೆಸ್ಟ್‌, ಲವ್‌ ಜಿಹಾದ್‌ ಬಳಿಕ ಹಳೆ ವೈಷಮ್ಯದ ಟ್ವಿಸ್ಟ್‌!


ಕಾಲೇಜು ಮುಂಭಾಗ ನಡೆದದ್ದೇನು?!

ಗುಂಡೇಟಿಗೆ ಬಲಿಯಾದ 21 ವರ್ಷದ ವಿದ್ಯಾರ್ಥಿನಿಯ ಹೆಸರು ನಿಖಿತಾ ತೋಮರ್‌. ಫರೀದಾಬಾದ್‌ನ ಬಲ್ಲಭಗಢದ ಕಾಲೇಜೊಂದರಲ್ಲಿ ಬಿ.ಕಾಂ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದ ನಿಖಿತಾ ಪರೀಕ್ಷೆ ಬರೆಯಲು ಸೋಮವಾರ ಕಾಲೇಜಿಗೆ ಬಂದಿದ್ದಳು. ಇವಳೊಂದಿಗೆ 2018ರಿಂದಲೂ ಸ್ನೇಹ ಇರಿಸಿಕೊಂಡಿದ್ದ ತೌಸೀಫ್‌ ಹಾಗೂ ಆತನ ಸ್ನೇಹಿತ ರೇಹಾನ್‌ ಕಾರಿನಲ್ಲಿ ಬಂದು ಹೊಂಚು ಹಾಕಿ ಕುಳಿತಿದ್ದರು. ನಿಖಿತಾ ಪರೀಕ್ಷೆ ಮುಗಿಸಿ ಗೆಳತಿಯ ಜತೆ ಹೊರಬಂದ ಕೂಡಲೇ ಆಕೆಯತ್ತ ಬಂದ ಇವರಿಬ್ಬರೂ ಕಾರಿನಲ್ಲಿ ಕುಳಿತುಕೊಳ್ಳುವಂತೆ ಬಲವಂತ ಮಾಡಿದರು. ಇದಕ್ಕೆ ಯುವತಿ ನಿರಾಕರಿಸಿದಾಗ, ಆಕೆಯ ಮೇಲೆ ಹಲ್ಲೆಗೆ ಮುಂದಾದರು. ಹಲ್ಲೆಯಿಂದ ತಪ್ಪಿಸಿಕೊಂಡು ಯುವತಿ ಅಣತಿ ದೂರ ಹೋಗುತ್ತಿದ್ದಂತೆಯೇ ಆಕೆಯನ್ನು ಹಿಂಬಾಲಿಸಿದ ತೌಸೀಫ್‌ ಪಿಸ್ತೂಲ್‌ನಿಂದ ಗುಂಡಿನ ದಾಳಿ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ನಿಖಿತಾಳನ್ನು ಗಮನಿಸಿದ ತೌಸೀಫ್‌ ಬಳಿಕ ಸ್ನೇಹಿತ ರೇಹಾನ್‌ ಜತೆ ಕಾರಿನಲ್ಲಿ ಪರಾರಿಯಾಗಿದ್ದಾನೆ. ಗುಂಡೇಟಿನಿಂದ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಳು.

ಬಿಹಾರ ಚುನಾವಣೆ ಲೈವ್‌: ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭ, 2 ಐಇಡಿ ಪತ್ತೆ, ಮತದಾರರಿಗೆ ಪ್ರಧಾನಿ ಮೋದಿ ಮನವಿ!

ಲವ್‌ ಜಿಹಾದ್‌ ಆಯಾಮದಲ್ಲೂ ತನಿಖೆ

ನಿಖಿತಾ ಹಾಗೂ ತೌಸೀಫ್‌ ಇಬ್ಬರೂ 2018ರಿಂದಲೇ ಪರಿಚಿತರು. ಪರಸ್ಪರ ಸಲುಗೆಯಿಂದ ಇದ್ದರು. ಹೀಗೆ ಇದ್ದ ತೌಸೀಫ್‌ ಇಸ್ಲಾಂಗೆ ಮತಾಂತರ ಆಗುವಂತೆ ನಿಖಿತಾಗೆ ಒತ್ತಡ ಹಾಕಿದ್ದ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಅಲ್ಲದೆ ಇಸ್ಲಾಂ ಬಗ್ಗೆ ಅವಹೇಳನ ನಡೆಸುವಂತೆಯು ತೌಸೀಫ್‌ ಒತ್ತಡ ಹಾಕಿದ್ದ ಎಂದು ನಿಖಿತಾಳ ಸಹೋದರ ಆರೋಪಿಸಿದ್ದಾರೆ. ಆದರೆ ಅಂಕಿತಾ ಇದಕ್ಕೆ ಒಪ್ಪದೆ ಇದ್ದಿದ್ದರಿಂದ ಈ ರೀತಿ ಕೊಲೆ ಮಾಡಲಾಗಿದೆ. ಇದೊಂದು ಲವ್‌ ಜಿಹಾದ್‌ ಕೊಲೆ ಎಂದು ಸಹೋದರ ಆರೋಪಿಸಿದ್ದಾನೆ. ಆದರೆ ಫರೀದಾಬಾದ್‌ ಪೊಲೀಸರು ಎಫ್‌ಐಆರ್‌ನಲ್ಲಿ ಎಲ್ಲೂ ಕೂಡ ಲವ್‌ ಜಿಹಾದ್‌ ಬಗ್ಗೆ ಪ್ರಸ್ತಾಪಿಸಿಲ್ಲ, ತನಿಖೆ ನಡೆಸುತ್ತಿದ್ದಂತೆ ರಿಪೋರ್ಟ್‌ಗೆ ತಿದ್ದುಪಡಿ ತರಲಾಗುವುದು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಕೌಟುಂಬಿಕ ಭ್ರಷ್ಟಾಚಾರ ದೇಶಕ್ಕೆ ಅಂಟಿದ್ದ ಗೆದ್ದಲು: ನರೇಂದ್ರ ಮೋದಿ

ಹಳೆ ವೈಷಮ್ಯ ಕೊಲೆಕೆ ಕಾರಣ?

ಇನ್ನು ಲವ್‌ ಜಿಹಾದ್‌ ಬಳಿಕ ಇದೀಗ ಮತ್ತೊಂದು ಟ್ವಿಸ್ಟ್‌ ನಿಖಿತಾ ಕೊಲೆ ಕೇಸ್‌ಗೆ ಸಿಕ್ಕಿದೆ. 2018ರಿಂದಲೇ ನಿಖಿತಾ ಹಾಗೂ ತೌಸೀಫ್‌ ಇಬ್ಬರೂ ಪರಿಚಿತರಾಗಿದ್ದರು ಕೂಡ ತೌಸೀಫ್‌ನ ವ್ಯಕ್ತಿತ್ವ ಬದಲಾಗುತ್ತ ಬರುತ್ತಿತ್ತಂತೆ. ಈ ಹಿನ್ನೆಲೆ ನಿಖಿತಾ ಆಕೆಯ ಗೆಳೆತನವನ್ನೇ ಬಿಟ್ಟಿದ್ದಳಂತೆ. ಆದರೆ ತೌಸೀಫ್‌ ಆಕೆಯ ಮನೆ ಬಳಿ ಬರುವುದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸುವ ಕೆಲಸ ಮಾಡಿದ್ದರಂತೆ. ಈ ಹಿನ್ನೆಲೆ ಅಂಕಿತಾ ಮನೆಯವರು ಪೊಲೀಸರಿಗೆ ದೂರು ಕೂಡ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್‌ ಅಧಿಕಾರಿ" ಪೊಲೀಸ್‌ ಕೇಸ್‌ನಿಂದಾಗಿ ತೌಸೀಫ್‌ನ ವೈದ್ಯಕೀಯ ಶಿಕ್ಷಣ ಅರ್ಧಕ್ಕೆ ನಿಂತು ಬಿಟ್ಟಿತ್ತು. ತೌಸೀಫ್‌ನ ಪೋಷಕರು ಮನವಿ ಮೇರೆಗೆ ಅಂಕಿತಾ ಕುಟುಂಬದವರು ಕೇಸ್‌ ವಾಪಸ್‌ ಪಡೆದುಕೊಂಡಿದ್ದಾದರು ತನ್ನ ಶಿಕ್ಷಣ ಅರ್ಧಕ್ಕೆ ನಿಂತು ಬಿಟ್ಟಿತ್ತು ಎನ್ನುವ ದ್ವೇಷ ತೌಸೀಫ್‌ಗೆ ಇತ್ತು ಎಂದು ತಿಳಿಸಿದ್ದಾರೆ. ಅದೇನೆ ಇದ್ದರೂ ಎಲ್ಲವೂ ತನಿಖೆಯಲ್ಲಿ ಬೆಳಕಿಗೆ ಬರಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ