ಆ್ಯಪ್ನಗರ

ತಾಯಿ ಮದುವೆ ಮುರಿದಳೆಂಬ ಶಂಕೆ; ಪ್ರತೀಕಾರಕ್ಕೆ ಬಾಲಕ ಬಲಿ

ನಡೆಯಬೇಕಿದ್ದ ಮದುವೆ ಮುರಿದು ಬೀಳಲು ಕಾರಣಳೆಂಬ ಆರೋಪದ ಮೇಲೆ ಆಕೆಯ ಮಗುವನ್ನೇ ಕೊಂದರು. ಅಷ್ಟಕ್ಕೂ ಆ ಮಗು ಏನು ತಪ್ಪು ಮಾಡಿತ್ತು?

TIMESOFINDIA.COM 11 Oct 2019, 1:03 pm
ಮುಜಪ್ಫರ್ ನಗರ: ನೆರೆಮನೆಯ ನಿವಾಸಿಯಾಗಿದ್ದ ಮಹಿಳೆ ಮದುವೆಯನ್ನು ಮುರಿದಳೆಂಬ ಶಂಕೆಯಲ್ಲಿ ಆಕೆಯ 9 ವರ್ಷದ ಮಗನನ್ನು ಅಪಹರಿಸಿ ಕೊಂದು ಹಾಕಿದ ಹೇಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
Vijaya Karnataka Web KIll Knife


ಶಾಮ್ಲಿಯಲ್ಲಿ ಈ ಅಮಾನುಷ ಕೃತ್ಯ ನಡೆದಿದ್ದು, ಫರ್ಹಾನ್ ಅಹಮದ್ ಹತ್ಯೆಯಾದ ಬಾಲಕನಾಗಿದ್ದಾನೆ.

ಪಶ್ಚಿಮ ಬಂಗಾಳ: ಆರೆಸ್ಸೆಸ್‌ಗೆ ಸೇರಿದ ಶಿಕ್ಷಕ, ಗರ್ಭಿಣಿ ಪತ್ನಿ, ಪುತ್ರನ ಭೀಕರ ಹತ್ಯೆ

ಬುಧವಾರದಿಂದ ಮಗ ನಾಪತ್ತೆಯಾಗಿದ್ದಾನೆಂದು ಹುಡುಕಾಟ ನಡೆಸಿದ್ದ ಕುಟುಂಬಕ್ಕೆ ಗುರುವಾರ ಮುಂಜಾನೆ ನಿವಾಸದಿಂದ ಸ್ವಲ್ಪ ದೂರದಲ್ಲಿರುವ ಚರಂಡಿಯಲ್ಲಿ ಶವ ಪತ್ತೆಯಾಗಿತ್ತು.

ತನಿಖೆ ಆರಂಭಿಸಿದ ಪೊಲೀಸರು ಬಾಲಕನ ಅನುಮಾನದ ಆಧಾರದ ಮೇಲೆ ನೆರೆಮನೆಯ ನಾಲ್ಕು ಮಂದಿಯನ್ನು ಬಂಧಿಸಿದರು. ವಿಚಾರಣೆ ನಡೆಸಿದಾಗ ಹೊರಬಿದ್ದ ಸತ್ಯ ಪೊಲೀಸರನ್ನೇ ಬೆಚ್ಚಿ ಬೀಳಿಸಿತು. ಫರ್ಹಾನ್ ತಾಯಿ ರಾಣಿ ತಮ್ಮ ಮನೆಯಲ್ಲಿ ನಡೆಯಬೇಕಿದ್ದ ಮದುವೆಯನ್ನು ಮುರಿದಿದ್ದು, ಅದಕ್ಕೆ ಪ್ರತೀಕಾರವಾಗಿ ಮಗುವನ್ನು ಕೊಂದಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ