ಆ್ಯಪ್ನಗರ

ನೀರವ್‌ ಮೋದಿಯಿಂದ ಸಾಕ್ಷ್ಯ ನಾಶಕ್ಕೆ ಸರ್ವ ಪ್ರಯತ್ನ: ಸಿಬಿಐ

ಪಿಎನ್‌ಪಿ ಹಗರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸಲು ನೀರವ್‌ ಮೋದಿ ಹರಸಾಹಸ ಪಟ್ಟಿದ್ದಾರೆ ಎಂದು ಸ್ಪಷ್ಟವಾಗಿದೆ.

TIMESOFINDIA.COM 23 May 2018, 12:17 pm
ಹೊಸದಿಲ್ಲಿ: ಪಿಎನ್‌ಪಿ ಹಗರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸಲು ನೀರವ್‌ ಮೋದಿ ಹರಸಾಹಸ ಪಟ್ಟಿದ್ದಾರೆ ಎಂದು ಸ್ಪಷ್ಟವಾಗಿದೆ.
Vijaya Karnataka Web nirav


ಸಿಬಿಐ ಪ್ರಕರಣದ ಕುರಿತು ತನಿಖೆ ಆರಂಭಿಸಿದ ಬಳಿಕ, ಸಾಕ್ಷ್ಯಗಳನ್ನು ನಾಶಪಡಿಸಲು ಎಲ್ಲ ರೀತಿಯ ಪ್ರಯತ್ನ ಪಟ್ಟಿರುವುದು ತಿಳಿದುಬಂದಿದೆ.

ಸಂಸ್ಥೆಯ ಕಿರಿಯ ಎಕೌಂಟೆಂಟ್‌ ರಾಹುಲ್‌ ಸಿಸೋದಿಯಾ ಹಾಗೂ ಕಚೇರಿ ಸಹಾಯಕ ರವೀಂದ್ರ ದಿನಕರ್‌ ಹಿಂದೇಲ್ಕರ್‌ ಅವರನ್ನು ಸಿಬಿಐ ವಿಚಾರಣೆ ನಡೆಸಿದ್ದು, ಪ್ರಕರಣ ಸಂಬಂಧ ಮಹತ್ವದ ವಿಚಾರಗಳನ್ನು ತಿಳಿದು ಕೊಳ್ಳಲಾಗಿದೆ.
ಡೈಮಂಡ್ಸ್‌ ಆರ್‌ಯುಎಸ್‌, ಸ್ಟೆಲ್ಲಾರ್ ಡೈಮಂಡ್‌ ಮತ್ತು ಸೋಲಾರ್‌ ಎಕ್ಸ್‌ಪೋರ್ಟ್ಸ್‌ ಸಂಸ್ಥೆಗಳಿಗೆ ಸೇರಿದ ಸುಮಾರು 50ಕ್ಕೂ ಹೆಚ್ಚು ದಾಖಲೆಗಳಿರುವ ಪೆಟ್ಟಿಗೆಗಳನ್ನು ಬಚ್ಚಿಡಲು ಹುನ್ನಾರ ನಡೆಸಿದ್ದರು ಎಂಬ ಅಂಶ ಸಿಬಿಐ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಈರ್ವರಿಂದಲೂ ಲಿಖಿತ ಹೇಳಿಕೆ ಪಡೆಯಲಾಗಿದ್ದು, ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದಂತೆ ಮಾಡಿರುವ ಕೆಲಸಗಳ ಕುರಿತು ಮಾಹಿತಿ ಸಿಕ್ಕಿದೆ. ಈ ಸಂಬಂಧ ಕೋರ್ಟ್‌ಗೂ ಸಿಬಿಐ ಅಧಿಕಾರಿಗಳು ಹೇಳಿಕೆಗಳನ್ನು ಸಲ್ಲಿಸಿದ್ದಾರೆ.

ಸಿಬಿಐನಿಂದ ಬಂಧಿಸಲ್ಪಟ್ಟ ಮಿತೇನ್‌ ಪಾಂಡ್ಯ, ರವೀಂದ್ರ ಹಾಗೂ ಇನ್ನೂ 3 ಮಂದಿ ಕಚೇರಿ ಸಹಾಯಕರಲ್ಲಿ ಕಡತಗಳನ್ನು ಸ್ಥಳಾಂತರಗೊಳಿಸುವಂತೆ ತಿಳಿಸಿದ್ದಾರೆ ಎಂದು ಸಿಸೋದಿಯಾ ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ