ಆ್ಯಪ್ನಗರ

ನಿರ್ಭಯಾ ಹಂತಕರ ರಕ್ಷಿಸಲು ಕೊನೆವರೆಗೆ ಹೋರಾಡಿದ ವಕೀಲ ಹೇಳಿದ್ದಿಷ್ಟೇ!

ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆ ಆಗಿದೆ. ಇದೇ ಮೊದಲ ಬಾರಿಗೆ ತಿಹಾರ್‌ ಜೈಲಿನಲ್ಲಿ ಏಕಕಾಲದಲ್ಲಿ ನಾಲ್ವರನ್ನು ಗಲ್ಲು ಶಿಕ್ಷೆಗೆ ಒಳಪಡಿಸಲಾಗಿದೆ. ಕೊನೇ ಕ್ಷಣದವರೆಗೆ ಅಪರಾದಿಗಳ ಪ್ರಾಣ ಉಳಿಸಲು ಹೋರಾಡಿದ ವಕೀಲ ಎ.ಪಿ.ಸಿಂಗ್ ತಮ್ಮ ಮನದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

Vijaya Karnataka Web 20 Mar 2020, 8:27 am
ಹೊಸದಿಲ್ಲಿ: ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆ ಆಗಿದೆ. ಇದೇ ಮೊದಲ ಬಾರಿಗೆ ತಿಹಾರ್‌ ಜೈಲಿನಲ್ಲಿ ಏಕಕಾಲದಲ್ಲಿ ನಾಲ್ವರನ್ನು ಗಲ್ಲು ಶಿಕ್ಷೆಗೆ ಒಳಪಡಿಸಲಾಗಿದೆ. ಕೊನೇ ಕ್ಷಣದವರೆಗೆ ಅಪರಾದಿಗಳ ಪ್ರಾಣ ಉಳಿಸಲು ಹೋರಾಡಿದ ವಕೀಲ ಎ.ಪಿ.ಸಿಂಗ್ ತಮ್ಮ ಮನದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.
Vijaya Karnataka Web a p singh


ಸುಪ್ರೀಂಕೋರ್ಟ್ ನಲ್ಲಿ ದೋಷಿಗಳ ಅರ್ಜಿ ವಜಾಗೊಳ್ಳುತ್ತಿದ್ದಂತೆ, ಅಪರಾಧಿಗಳ ಪರ ವಾದ ಮಂಡಿಸಿದ್ದ ವಕೀಲ ಎ.ಪಿ.ಸಿಂಗ್ ಪ್ರತಿಕ್ರಿಯೆಯನ್ನು ನೀಡಿದ್ದರು.

ಸಂವಿಧಾನದಲ್ಲಿ ತಿಳಿಸಿರುವಂತೆ ಎಲ್ಲ ಕಾರ್ಯಗಳು ನಡೆಬೇಕಿತ್ತು. ಹಾಗಾಗಿ ರಾತ್ರಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮುಂದೆ ಹೋಗಿ ಜೀವ ಉಳಿಸುವ ಕೆಲಸ ಮಾಡಿದ್ದೇನೆ. ನ್ಯಾಯಾಲಯದ ಮುಂದೆ ನಾನು ಹೊಸ ವಾದವನ್ನೇ ಮಂಡಿಸಿದ್ದೇನೆ. ದೋಷಿ ಅಕ್ಷಯ್ ಪುತ್ರ ತಂದೆಯನ್ನು ಕಾಣಲು ಬಿಹಾರದಿಂದ ಬಂದಿದ್ದಾನೆ. ತಂದೆಯ ಭೇಟಿಗೆ ಅವಕಾಶ ನೀಡಬೇಕಿತ್ತು. ಮುಖೇಶ್ ಕುಟುಂಬಸ್ಥರು ದೆಹಲಿಯ ನಿವಾಸಿಗಳು. ಆದರೆ, ಅಕ್ಷಯ್ ಕುಟುಂಬ ಬಿಹಾರದ ನಕ್ಸಲ್ ಪೀಡಿತ ಪ್ರದೇಶದಲ್ಲಿದೆ. ಅಕ್ಷಯ್ನ 8 ವರ್ಷದ ಮಗನಿಗೆ ತನ್ನ ತಂದೆಯನ್ನ ನೋಡುವ ಅವಕಾಶ ಸಿಗಲಿಲ್ಲ ಎಂದು ಮರುಕ ವ್ಯಕ್ತಪಡಿಸಿದ್ದರು.



ಒಂದು ಮಗು ತಂದೆಯನ್ನ ನೋಡಿದ್ರೆ ಏನು ಆಗುತ್ತಿತ್ತು. ಮಗನಿಗೆ ತಂದೆಯ ಭೇಟಿಗೆ ಅವಕಾಶ ನೀಡದಿರೋದು ಇತಿಹಾಸದಲ್ಲಿ ಇರಲಿದೆ. ಇಂದು ಬಾಲ ವಿಕಾಸ ಇಲಾಖೆಗೆ ನಾಚಿಕೆ ಆಗಬೇಕು. ಅಕ್ಷಯ್ ನನ್ನು ನೀವು ಬಲತ್ಕಾರಿ, ಹಂತಕ ಎಂದು ಹೇಳುತ್ತೀರಿ. ಇಲ್ಲಿ ಆತನ ಪುತ್ರನ ತಪ್ಪೇನಿದೆ. ಮುಂದೊಂದು ದಿನ ಅಕ್ಷಯ್ ಪುತ್ರ ದೊಡ್ಡವನಾಗಿ ಸಂವಿಧಾನ ಓದಿದ್ರೆ, ಈ ವ್ಯವಸ್ಥೆ, ಜೈಲು ನಿಯಮ, ಮಾಧ್ಯಮ ತಂದೆಯ ಭೇಟಿಗೆ ಅವಕಾಶ ಕಲ್ಪಿಸಲಿಲ್ಲ ಎಂಬ ಭಾವನೆ ಮೂಡುತ್ತದೆ. ನಿನ್ನೆ ಹೋದರೆ ಕೊರೊನಾ ಎಂದು ಹೇಳಿದರು. ಇಂದು ಕೋರ್ಟ್ ನತ್ತ ತಿರುಗಾಡುವ ಕೆಲಸವೇ ಆಯ್ತು. ಪವನ್ ತಾಯಿ ಅಂಗವಿಕಲೆಯಾಗಿದ್ದು, ಪುತ್ರನ ಭೇಟಿಗಾಗಿ ಕಾಯುತ್ತಿದ್ದಾರೆ. ಒಬ್ಬ ತಾಯಿಯ ನೋವನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಒಬ್ಬ ತಾಯಿ ಹಿಂದೆ ಎಲ್ಲರೂ ಓಡುತ್ತಿದ್ದಾರೆ. ಹಾಗಾದ್ರೆ ಪವನ್ ತಾಯಿಗೆ ಯಾವುದೇ ಬೆಲೆ ಇಲ್ವಾ? ಎಂಟು ವರ್ಷಗಳಿಂದ ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷದರ್ಶಿಗಳು ಇರಲಿಲ್ಲ ಎಂದು ದೋಷಿ ಪರ ವಕೀಲ ಎ.ಪಿ.ಸಿಂಗ್ ಹೇಳಿದ್ದಾರೆ.


ವಿವಾದಕ್ಕೆ ಇಡಾಗಿದ್ದರು ಎ.ಪಿ. ಸಿಂಗ್‌
ಈ ಹಿಂದೆ ಸಾಕೇತ್ ನ್ಯಾಯಾಲಯ ನೀಡಿದ್ದ ತೀರ್ಪಿಗೆ ಸವಾಲು ಹಾಕುವ ಭರದಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದ ‘ನಿರ್ಭಯಾ’ ಪ್ರಕರಣದ ಆಪಾದಿತರ ಪರ ವಕೀಲ ಎ.ಪಿ.ಸಿಂಗ್ ಈಗ ವಿವಾದಕ್ಕೆ ಸಿಲುಕಿದ್ದಾರೆ. ‘‘ ನನ್ನ ಮಗಳೇನಾದರೂ ಮದುವೆಗೆ ಮುಂಚೆ ಲೈಂಗಿಕ ಸಂಬಂಧ ಹೊಂದಿದ್ದರೆ ಅಥವಾ ರಾತ್ರಿ ವೇಳೆ ಬಾಯ್‌ಫ್ರೆಂಡ್ ಜತೆ ಬೀದಿ ಸುತ್ತುತ್ತಿದ್ದರೆ ಅವಳನ್ನು ಜೀವಂತ ಸುಟ್ಟು ಬಿಡುತ್ತಿದ್ದೆ,’’ ಎಂಬ ಸಿಂಗ್ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವಕೀಲರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹಲವು ಸಂಘಟನೆಗಳು ದಿಲ್ಲಿ ವಕೀಲರ ಸಂಘಕ್ಕೆ ದೂರನ್ನೂ ನೀಡಿದ್ದವು.

ತಾನು ವಕಾಲತ್ತು ವಹಿಸಿದ್ದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗುವುದನ್ನು ತಡೆಯಲು ವಿಫಲರಾದ ಸಿಟ್ಟಿನಲ್ಲಿದ್ದ ವಕೀಲ ಸಿಂಗ್, ‘‘ಬೀದಿ ಸುತ್ತುವ ಹೆಣ್ಣು ಮಕ್ಕಳನ್ನು ಜೀವಂತ ಸುಟ್ಟು ಹಾಕಬೇಕು. ನನ್ನ ಮಗಳೇನಾದರೂ ಈ ತಪ್ಪು ಮಾಡಿದ್ದರೆ ನಾನೂ ಇದನ್ನೇ ಮಾಡುತ್ತಿದ್ದೆ. ಎಲ್ಲ ತಾಯ್ತಂದೆಯರು ಇದೇ ಮಾದರಿ ಅನುಸರಿಸಬೇಕು,’’ ಎಂದು ಪುಕ್ಕಟ್ಟೆ ಸಲಹೆ ನೀಡಿದ್ದರು. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಿಬಿಟ್ಟರೆ ಅತ್ಯಾಚಾರಗಳು ನಿಂತು ಹೋಗುತ್ತವೆಯೇ ಕಾದು ನೋಡೋಣ ಎಂದು ಹೇಳುವ ಮೂಲಕ ಸಾಕೇತ್ ಕೋರ್ಟ್‌ನ ತೀರ್ಪನ್ನು ವ್ಯಂಗ್ಯ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ