ಆ್ಯಪ್ನಗರ

ನಿರ್ಭಯಾ ಅಪರಾಧಿಗಳ ಸಾವು ಸನ್ನಿಹಿತ; ಅಪರಾಧಿಗಳ ಮೇಲೆ ಹದ್ದಿನ ಕಣ್ಣು!

ಮರಣದಂಡನೆಗೆ ಗುರಿಯಾಗಿರುವ ನಾಲ್ವರು ನಿರ್ಭಯಾ ಪ್ರಕರಣದ ಅಪರಾಧಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಮುಕೇಶ್‌ ಸಿಂಗ್‌, ಪವನ್‌ ಕುಮಾರ್‌ ಗುಪ್ತಾ, ವಿನಯ್‌ ಶರ್ಮಾ ಹಾಗೂ ಅಕ್ಷಯ್‌ ಗೆ ಫೆ.1 ರಂದು ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆ ಜಾರಿಯಾಗಲಿದ್ದು, ತಿಹಾರ್‌ ಜೈಲಿನಲ್ಲಿ ಅವರ ವರ್ತನೆ, ನಡವಳಿಕೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ತನ್ನ ಸಾವು ಸನ್ನಿಹಿತವಾಗುತ್ತಿದೆ ಎಂದು ತಿಳಿದಿರುವ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ಅಪರಾಧಿಗಳು ಆತ್ಮಹತ್ಯೆ ಮಾಡಿಕೊಳ್ಳದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

Vijaya Karnataka Web 25 Jan 2020, 1:45 pm
ಮರಣದಂಡನೆಗೆ ಗುರಿಯಾಗಿರುವ ನಾಲ್ವರು ನಿರ್ಭಯಾ ಪ್ರಕರಣದ ಅಪರಾಧಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಮುಕೇಶ್‌ ಸಿಂಗ್‌, ಪವನ್‌ ಕುಮಾರ್‌ ಗುಪ್ತಾ, ವಿನಯ್‌ ಶರ್ಮಾ ಹಾಗೂ ಅಕ್ಷಯ್‌ ಗೆ ಫೆ.1 ರಂದು ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆ ಜಾರಿಯಾಗಲಿದ್ದು, ತಿಹಾರ್‌ ಜೈಲಿನಲ್ಲಿ ಅವರ ವರ್ತನೆ, ನಡವಳಿಕೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ತನ್ನ ಸಾವು ಸನ್ನಿಹಿತವಾಗುತ್ತಿದೆ ಎಂದು ತಿಳಿದಿರುವ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ಅಪರಾಧಿಗಳು ಆತ್ಮಹತ್ಯೆ ಮಾಡಿಕೊಳ್ಳದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
Vijaya Karnataka Web nirbhaya rape convicts are in sucide watch at thihar jail
ನಿರ್ಭಯಾ ಅಪರಾಧಿಗಳ ಸಾವು ಸನ್ನಿಹಿತ; ಅಪರಾಧಿಗಳ ಮೇಲೆ ಹದ್ದಿನ ಕಣ್ಣು!


​ಪೋಷಕರಿಗೆ ಜೈಲಧಿಕಾರಿಗಳ ಪತ್ರ

ಮರಣದಂಡನೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳ ಪೋಷಕರಿಗೆ ಜೈಲು ಅಧಿಕಾರಿಗಳು ಈಗಾಗಲೇ ಗಲ್ಲು ಶಿಕ್ಷೆ ಜಾರಿಗೊಳಿಸುವ ಸಮಯ ಹಾಗೂ ದಿನಾಂಕದ ಕುರಿತು ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ಲದೆ, ಅವರನ್ನು ಭೇಟಿಯಾಗುವ ಇಚ್ಚೆ ಇದ್ದಲ್ಲಿ ಅನುಮತಿಗೆ ಅರ್ಜಿ ಸಲ್ಲಿಸುವಂತೆ ಪತ್ರದಲ್ಲಿ ಹೇಳಿದ್ದಾರೆ.

​ವೈದ್ಯರ ನೇಮಕ; ಫೆ.1ಕ್ಕೆ ನೇಣು

ಫೆ.1 ಕ್ಕೆ ಗಲ್ಲು ಶಿಕ್ಷೆ ಜಾರಿಯಾಗುವ ವೇಳೆ ವೈದ್ಯರು ಅವಶ್ಯ. ಈ ಹಿನ್ನೆಲೆಯಲ್ಲಿ ವೈದ್ಯರ ನೇಮಕ ಮಾಡಲಾಗಿದೆ. ಅಲ್ಲದೆ ಇನ್ನಿತರ ಸಿದ್ಧತೆಗಳು ನಡೆದಿವೆ. ಏತನ್ಮಧ್ಯೆ ದಿನವೂ ನಾಲ್ವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಜೈಲಿನ ವೈದ್ಯರು ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ.

ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆಗೆ ಮುಹೂರ್ತ ಫಿಕ್ಸ್‌; ಫೆ.1, ಬೆಳಗ್ಗೆ 6ಕ್ಕೆ ನೇಣು

​ನಾಲ್ವರ ವರ್ತನೆಯಲ್ಲಿ ಬದಲಾವಣೆ: ಸಾವು ಸನ್ನಿಹಿತದ ಭಯ

ಅಕ್ಷಯ್‌ ಠಾಕೂರ್‌ ಹಾಗೂ ಪವನ್‌ ಗುಪ್ತ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಆದರೆ ಮುಕೇಶ್‌ ಸಿಂಗ್‌ ಈ ನಡುವೆ ಜೈಲಿನಲ್ಲಿ ಮಾತು ಕಡಿಮೆ ಮಾಡಿದ್ದಾನೆ. ತನ್ನನ್ನು ಭೇಟಿ ಮಾಡಲು ಬಂದ ಸಂಬಂಧಿಕರಲ್ಲೂ ಹೆಚ್ಚಾಗಿ ಮಾತನಾಡಿಲ್ಲ. ವಿನಯ್‌ ಶರ್ಮ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಿದ್ದು, ಕೋಪ ಹಾಗೂ ಆಕ್ರಮಣಕಾರಿ ವರ್ತನೆ ತೋರುತ್ತಿದ್ದಾನೆ. ಅಲ್ಲದೆ ಆಹಾರ ತ್ಯಜಿಸುತ್ತಿದ್ದಾನೆ. ಇದಲ್ಲೆ ಜೈಲಿನ ನಾಲ್ಕನೇ ವಿಭಾಗದಲ್ಲಿ ಸ್ನೇಹಿತನ ಬಳಿ ಮಾತನಾಡಲು ಅವಕಾಶ ನೀಡುವಂತೆ ಜೈಲಧಿಕಾರಿಗಳಲ್ಲಿ ಕೋರಿದ್ದಾನೆ. ಮುಕೇಶ್‌ ಸಿಂಗ್‌ ಹಾಗೂ ವಿನಯ್‌ ಶರ್ಮ ಪೋಷಕರು ಶುಕ್ರವಾರ ಜೈಲಿನಲ್ಲಿ ಮಕ್ಕಳನ್ನು ಭೇಟಿಯಾಗಿದ್ದಾರೆ.

​ಜೈಲ್‌ ನಂಬರ್‌ 3 ಗೆ ಶಿಫ್ಟ್‌...

ಈ ಹಿಂದೆ ಜನವರಿ 22 ರಂದು ಗಲ್ಲು ಶಿಕ್ಷೆ ಹಾರಿಗೊಳಿಸಲು ಆದೇಶ ನೀಡಲಾಗಿತ್ತು. ಹೀಗಾಗಿ ನಾಲ್ವರನ್ನು ಜ.16ರಂದೇ ತಿಹಾರ್‌ ಜೈಲಿನ ಮೂರನೇ ವಿಭಾಗಕ್ಕೆ ಸ್ಥಳಾಂತರಿಸಲಾಗಿತ್ತು. 6x8 ಅಡಿಯ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆ. ಇಬ್ಬರು ಸೆಕ್ಯುರಿಟಿ ಗಾರ್ಡ್‌ಗಳು ಅವರನ್ನು 24ಗಂಟೆಯೂ ಕಾಯುತ್ತಿದ್ದಾರೆ. ಇದನ್ನೇ ಸುಸೈಡ್‌ ವಾಚ್‌ ಎಂದು ಕರೆಯುತ್ತಾರೆ. ಗಲ್ಲು ಶಿಕ್ಷೆಗೆ ಗುರಿಯಾಗುವ ಅಪರಾಧಿಗಳನ್ನು ಮಾತ್ರವೇ ಈ ವಿಭಾಗದಲ್ಲಿ ಇರಿಸಲಾಗುತ್ತದೆ. ಜೈಲ್‌ ನಂಬರ್‌ 3 ಗೆ ಕರೆದೊಯ್ಯುವ ಮುನ್ನ ಖೈದಿಗಳನ್ನು ಕೂಲಂಕುಷವಾಗಿ ತಪಾಸಣೆ ಮಾಡಲಾಗುತ್ತದೆ ಎಂದು ಜೈಲಿನ ಅಧಿಕಾರಿಯೋರ್ವರು ವಿವರಿಸಿದ್ದಾರೆ.

ಗಲ್ಲು ಶಿಕ್ಷೆ ತೀರ್ಪನ್ನು ಯಾವಾಗಲೂ ಪ್ರಶ್ನಿಸುತ್ತಿರಬಾರದು: ಸುಪ್ರೀಂ ಅಸಮಾಧಾನ

Video-Nirbhaya case convicts’ lawyer trying to delay the case: Asha Devi

​ವಿಶೇಷ ಪೊಲೀಸರ ತಂಡ ನಿಯೋಜನೆ

ಜೈಲ್‌ ನಂಬರ್‌ 3ರಲ್ಲಿ ತಮಿಳುನಾಡಿನಿಂದ ತರಬೇತಿ ಪಡೆದ 40 ಮಂದಿ ವಿಶೇಷ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ. ಅಪರಾಧಿಗಳ ಜತೆ ಯಾವುದೇ ಕಾರಣಕ್ಕೂ ಮಾತನಾಡಬಾರದು ಎಂದು ಕಟ್ಟುನಿಟ್ಟಿನ ಆದೇಶವನ್ನೂ ತಂಡಕ್ಕೆ ನೀಡಲಾಗಿದೆ. ಅಂತೆಯೇ ವಿಭಾಗ ಮೂರರಲ್ಲಿಯೂ ಅಪರಾಧಿಗಳನ್ನು ನಿರ್ಧಿಷ್ಟ ಅವಧಿಯ ಬಳಿಕ ಜೈಲಿನ ಕೊಠಡಿ ಬದಲಾವಣೆ ಮಾಡಲಾಗುತ್ತದೆ. ಈ ಅವಧಿಯಲ್ಲಿ ಜೈಲಿನಲ್ಲಿ ತಮಗೆ ತಾವೇ ಗಾಯ ಮಾಡಿಕೊಂಡು, ಗಲ್ಲು ಶಿಕ್ಷೆ ಮುಂದೂಡುವ ಹುನ್ನಾರ ನಡೆಯದಂತೆಯೂ ನೋಡಿಕೊಳ್ಳಬೇಕಾಗುತ್ತದೆ. 2013 ಮಾರ್ಚ್‌ 11 ರಂದು ಪ್ರಕರಣದ ಮತ್ತೊಬ್ಬ ಅಪರಾಧಿ ರಾಮ್‌ ಸಿಂಗ್‌ ಜೈಲಿನ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು.

ನಿರ್ಭಯಾ ಹಂತಕರಿಂದ ಮತ್ತೊಂದು ಅರ್ಜಿ ಸಲ್ಲಿಕೆ; ಗಲ್ಲು ಶಿಕ್ಷೆ ಮುಂದೂಡಲು ತಂತ್ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ