ಆ್ಯಪ್ನಗರ

ಕೊರೊನಾ ವಿರುದ್ಧ ಹೋರಾಟ: ಕೇಂದ್ರದಿಂದ 1.70 ಲಕ್ಷ ಕೋಟಿ ರೂ. ಘೋಷಣೆ

ಕೊರೊನಾ ಸೋಂಕು ತಡೆಗೆ ದೇಶಾದ್ಯಂತ 21 ದಿನಗಳ ಲಾಕ್‌ಡೌನ್‌ ಕ್ರಮ ಕೈಗೊಂಡ ಬೆನ್ನಲ್ಲೇ ಕೇಂದ್ರ ಸರಕಾರ 1.70 ಲಕ್ಷ ಕೋಟಿ ರೂ.ಗಳನ್ನು ಕೊರೊನಾ ಪರಿಹಾರ ನಿಧಿಯಾಗಿ ಘೋಷಣೆ ಮಾಡಿದೆ.

TOI.in 26 Mar 2020, 2:11 pm
ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೊರೊನಾ ವೈರಸ್‌ ಪರಿಹಾರದ ಭಾಗವಾಗಿ ಸೋಂಕಿನ ವಿರುದ್ಧ ಹೋರಾಡುತ್ತಿರುವವರಿಗೆ, ಬಡವರಿಗೆ ನೆರವಾಗುವ ನಿಟ್ಟಿನಲ್ಲಿ 1.70 ಲಕ್ಷ ಕೋಟಿ ರೂ. ಪರಿಹಾರ ನಿಧಿ ಘೋಷಣೆ ಮಾಡಿದರು.
Vijaya Karnataka Web Nirmala Sitharaman


ಕೊರೊನಾ ವೈರಸ್‌ ಹತೋಟಿಗೆ ಹರಸಾಹಸ ಪಡುತ್ತಿರುವ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯ ಕಾರ್ಯಕರ್ತರಿಗೆ ಪ್ರತಿ ವ್ಯಕ್ತಿಗೆ 50 ಲಕ್ಷ ರೂ. ವರೆಗೆ ಇನ್ಷೂರೆನ್ಸ್‌ ಘೋಷಣೆ ಮಾಡಿದ್ದಾರೆ.

ಇದರಡಿ ಪಿಎಂ ಗರೀಬ್‌ ಅನ್ನ ಯೋಜನೆಯನ್ನು ಘೋಷಿಸಲಾಗಿದ್ದು ಬಡವರಿಗೆ ಮುಂದಿನ ಮೂರು ತಿಂಗಳ ವರೆಗೆ ಪ್ರತಿಯೊಬ್ಬನಿಗೆ 5 ಕೆಜಿ ಅಕ್ಕಿ, 1 ಕೆಜಿ ಧಾನ್ಯಗಳು ಉಚಿತವಾಗಿ ಸಿಗಲಿವೆ. ಪ್ರಸ್ತುತ ಜಾರಿಯಲ್ಲಿರುವ ಎನ್ಎಫ್‌ಎಸ್‌ಎಗೆ ಹೊರತಾದ ಯೋಜನೆಯಾಗಿದೆ. ಎರಡು ಕಂತುಗಳಲ್ಲಿ ಹೆಚ್ಚುವರಿ ಪಡಿತರ ಪಡೆಯಬಹುದು. ಮುಂದಿನ ಮೂರು ತಿಂಗಳು 80 ಕೋಟಿ ಮಂದಿ ಉಚಿತವಾಗಿ 5 ಕೆಜಿ ಗೋದಿ ಅಥವಾ ಅಕ್ಕಿ ಮತ್ತು 1 ಕೆಜಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಧಾನ್ಯಗಳು ಸಿಗಲಿವೆ ಎಂದು ನಿರ್ಮಲಾ ಸೀತಾರಾಮನ್‌ ವಿವರಿಸಿದರು.

ಕಿಸಾನ್‌ ಸಮ್ಮಾನ್‌ ಯೋಜನೆಯ ಭಾಗವಾಗ ವಾರ್ಷಿಕ 6,000 ರೂ.ಗಳ ಮೊದಲ ಕಂತು 2,000 ರೂ.ಗಳನ್ನು ಏಪ್ರಿಲ್‌ನ ಮೊದಲ ವಾರದಲ್ಲೇ ರೈತರ ಖಾತೆಗೆ ವರ್ಗಾವಣೆ ಮಾಡಲಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ